ಸಾಂದರ್ಭಿಕ ಚಿತ್ರ  
ರಾಜ್ಯ

ಕೊನೆಗೂ ಪೆರಿಫೆರಲ್ ರಿಂಗ್ ರೋಡ್ ಗೆ ಟೆಂಡರ್ ಕರೆದ BDA; ಮೋಹನ್‌ದಾಸ್ ಪೈ ಹೇಳಿದ್ದೇನು?

ಸುಮಾರು 20 ಕಿ.ಮೀ. ಪೆರಿಫೆರಲ್ ರಿಂಗ್ ರೋಡ್ ಯೋಜನೆಯ ಮೊದಲ ಪ್ಯಾಕೇಜ್‌ಗೆ ಟೆಂಡರ್‌ಗಳನ್ನು ಆಹ್ವಾನಿಸಲಾಗಿದ್ದು, ಇದನ್ನು 36 ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ಡೆಡ್ ಲೈನ್ ನೀಡಲಾಗಿದೆ.

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಸೋಮವಾರ 3,348 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಬಹುನಿರೀಕ್ಷಿತ ಬೆಂಗಳೂರು ಬಿಸಿನೆಸ್ ಕಾರಿಡಾರ್(ಪೆರಿಫೆರಲ್ ರಿಂಗ್ ರೋಡ್)ಗೆ ಟೆಂಡರ್ ಆಹ್ವಾನಿಸಿದೆ.

ಸುಮಾರು 20 ಕಿ.ಮೀ. ಪೆರಿಫೆರಲ್ ರಿಂಗ್ ರೋಡ್ ಯೋಜನೆಯ ಮೊದಲ ಪ್ಯಾಕೇಜ್‌ಗೆ ಟೆಂಡರ್‌ಗಳನ್ನು ಆಹ್ವಾನಿಸಲಾಗಿದ್ದು, ಇದನ್ನು 36 ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ಡೆಡ್ ಲೈನ್ ನೀಡಲಾಗಿದೆ. ಇದರೊಂದಿಗೆ, ಸುಮಾರು ಎರಡು ದಶಕಗಳಿಂದ ವಿಳಂಬವಾಗಿದ್ದ ಪೆರಿಫೆರಲ್ ರಿಂಗ್ ರೋಡ್ ಯೋಜನೆಗೆ ಕೊನೆಗೂ ಚಾಲನೆ ನೀಡಲಾಗಿದೆ.

ಬಿಡಿಎ ಆಹ್ವಾನಿಸಿದ ಇಪಿಸಿ(ಎಂಜಿನಿಯರಿಂಗ್, ಪ್ರೊಕ್ಯೂರ್‌ಮೆಂಟ್ ಮತ್ತು ನಿರ್ಮಾಣ) ಟೆಂಡರ್‌ನಲ್ಲಿ, ತುಮಕೂರು ರಸ್ತೆಯಿಂದ ಬಳ್ಳಾರಿ ರಸ್ತೆಯವರೆಗಿನ ಒಟ್ಟು 19.80 ಕಿ.ಮೀ. ದೂರದಲ್ಲಿರುವ ಬೆಂಗಳೂರು ಬಿಸಿನೆಸ್ ಕಾರಿಡಾರ್(ಪೆರಿಫೆರಲ್ ರಿಂಗ್ ರಸ್ತೆ-1) ಪ್ಯಾಕೇಜ್-1 ನಿರ್ಮಾಣಕ್ಕೆ 36 ತಿಂಗಳುಗಳ ಅವಧಿ ನೀಡಲಾಗಿದೆ. ಟೆಂಡರ್ ವಿನ್ಯಾಸ, ನಿರ್ಮಾಣ, ಕಾರ್ಯಾಚರಣೆ ಮತ್ತು ವರ್ಗಾವಣೆ(ಡಿಬಿಒಟಿ) ವಿಧಾನದಲ್ಲಿ 10 ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆ (ಒ&ಎಂ) ಒಳಗೊಂಡಿದೆ.

ಟೆಂಡರ್ ದಾಖಲೆಯಲ್ಲಿ ಉಲ್ಲೇಖಿಸಲಾದ ಸಮಯದ ಪ್ರಕಾರ, ಟೆಂಡರ್ ವಿಚಾರಣೆಗಳಿಗೆ ಕೊನೆಯ ದಿನಾಂಕ ಏಪ್ರಿಲ್ 15, ಮತ್ತು ಟೆಂಡರ್ ಸಲ್ಲಿಸಲು ಕೊನೆಯ ದಿನಾಂಕ ಮೇ 4. ತಾಂತ್ರಿಕ ಬಿಡ್‌ಗಳನ್ನು ಮೇ 6 ರಂದು ಮತ್ತು ಹಣಕಾಸು ಬಿಡ್ ಅನ್ನು ಮೇ 11 ರಂದು ತೆರೆಯಲಾಗುವುದು.

ಯಾವುದೇ ಕಂಪನಿ ಟೆಂಡರ್‍‌ ಪಡೆದರೂ ಒಟ್ಟು ಮೂರು ವರ್ಷಗಳಲ್ಲಿ(36 ತಿಂಗಳು) ಯೋಜನೆ ಮುಗಿಸಬೇಕು. ಸದರಿ ಟೆಂಡರ್ ಪ್ರಕ್ರಿಯೆ ಮೇ ತಿಂಗಳು ಅಂತಿಮವಾಗುವ ಸಾಧ್ಯತೆ ಇದೆ.

ಬಿಐಇಸಿ ಮಾದವರ(ನೆಲಮಂಗಲ ಬಳಿ)ದಿಂದ ವಿಮಾನ ನಿಲ್ದಾಣ/ಬಳ್ಳಾರಿ ರಸ್ತೆಯವರೆಗಿನ ರಿಂಗ್ ರಸ್ತೆಗೆ ಟೆಂಡರ್ ಕರೆಯುವ ಮೂಲಕ ನಾವು ಒಂದು ಪ್ರಮುಖ ಮೈಲಿಗಲ್ಲು ತಲುಪಿದ್ದೇವೆ ಎಂದು ಬೆಂಗಳೂರು ಬಿಸಿನೆಸ್ ಕಾರಿಡಾರ್ ಅಧ್ಯಕ್ಷ ಎಲ್ ಕೆ ಅತೀಕ್ ಅವರು ಹೇಳಿದ್ದಾರೆ.

ಮೋಹನ್‌ದಾಸ್ ಪೈ ಹೇಳಿದ್ದೇನು?

ಇನ್ನು ನೆಟಿಜನ್‌ಗಳು ಈ ಟೆಂಡರ್‌ ಅನ್ನು ಸ್ವಾಗತಿಸಿದ್ದು, ಇದನ್ನು ಒಂದು ಮೈಲಿಗಲ್ಲು ಎಂದು ಹೇಳಿದ್ದಾರೆ. ಉದ್ಯಮಿ ಹಾಗೂ ಇನ್ಫೋಸಿಸ್‌ನ ಮಾಜಿ ಸಿಎಫ್‌ಒ ಮೋಹನ್‌ದಾಸ್ ಪೈ ಅವರು, ಈ ಸಂಬಂಧ ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ ಕೆ ಶಿವಕುಮಾರ್ ಅವರನ್ನು ಅಭಿನಂದಿಸಿದ್ದಾರೆ.

"ಪಿಆರ್‌ಆರ್ ಅನ್ನು ಬಹುತೇಕ ಏಕಾಂಗಿಯಾಗಿ ಜಾರಿಗೆ ತಂದಿದ್ದಕ್ಕಾಗಿ ಡಿಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಅಭಿನಂದನೆಗಳು. ಬೆಂಗಳೂರಿಗೆ ದೊಡ್ಡ ರಿಲೀಫ್" ಎಂದು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್