ಗ್ರೇಟರ್ ಬೆಂಗಳೂರು ಪ್ರಾಧಿಕಾರ  
ರಾಜ್ಯ

ತೆರಿಗೆ ಬಾಕಿ ಪಾವತಿಸದವರಿಗೆ GBA ಶಾಕ್: 158 ಆಸ್ತಿಗಳ ಮುಟ್ಟುಗೋಲಿಗೆ ಮುಂದು..!

ಬಾಕಿದಾರರಿಗೆ ತೆರಿಗೆ ಪಾವತಿಸಲು ಹಲವು ಅವಕಾಶಗಳನ್ನು ನೀಡಿದ್ದರೂ, ಹಣ ಪಾವತಿಸದ ಕಾರಣ ಪಾಲಿಕೆಗಳು ಈ ನಿರ್ಧಾರಕ್ಕೆ ಬಂದಿದೆ ಎಂದು ತಿಳಿದುಬಂದಿದೆ.

ಬೆಂಗಳೂರು: ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಗರ ಪಾಲಿಕೆಗಳು ಮುಂದಾಗಿದ್ದು, ಒಟ್ಟು 158 ಆಸ್ತಿಗಳನ್ನು ಖರೀದಿಸುವ ಪ್ರಕ್ರಿಯೆಯನ್ನು ಪ್ರಾರಂಭ ಮಾಡಿದೆ.

ಬಾಕಿದಾರರಿಗೆ ತೆರಿಗೆ ಪಾವತಿಸಲು ಹಲವು ಅವಕಾಶಗಳನ್ನು ನೀಡಿದ್ದರೂ, ಹಣ ಪಾವತಿಸದ ಕಾರಣ ಪಾಲಿಕೆಗಳು ಈ ನಿರ್ಧಾರಕ್ಕೆ ಬಂದಿದೆ ಎಂದು ತಿಳಿದುಬಂದಿದೆ.

ನಗರದ ದಕ್ಷಿಣ, ಪಶ್ಚಿಮ ಮತ್ತು ಪೂರ್ವ ಪಾಲಿಕೆ ವ್ಯಾಪ್ತಿಗಳಲ್ಲಿ ಕ್ರಮವಾಗಿ 52, 55 ಮತ್ತು 51 ಆಸ್ತಿಗಳು ಗುರುತಿಸಲಾಗಿದ್ದು, ಹರಾಜಿನಲ್ಲಿ ಯಾರೂ ಮುಂದೆ ಬರದ ಆಸ್ತಿಗಳನ್ನು ನಿಗದಿತ ಕನಿಷ್ಠ ದರದಲ್ಲಿ (ಗೈಡನ್ಸ್ ಮೌಲ್ಯ ಆಧಾರಿತ) ಪಾಲಿಕೆಗಳೇ ಸ್ವತಃ ಖರೀದಿಗೆ ಮುಂದಾಗಿವೆ.

ಅಧಿಕಾರಿಗಳ ಪ್ರಕಾರ, ಬಾಕಿದಾರರಿಗೆ ಹಲವು ಬಾರಿ ನೋಟಿಸ್‌ಗಳು, ಆಸ್ತಿ ಜಪ್ತಿ ಎಚ್ಚರಿಕೆಗಳು ಮತ್ತು ಸಾರ್ವಜನಿಕ ಹರಾಜು ಸೂಚನೆಗಳನ್ನು ನೀಡಲಾಗಿತ್ತು. ಆದರೂ ಯಾವುದೇ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಈ ಅಂತಿಮ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಈ ಆಸ್ತಿಗಳನ್ನು ಖರೀದಿಸಿದ ಬಳಿಕ, ಬಾಕಿ ತೆರಿಗೆ, ದಂಡ, ಬಡ್ಡಿ ಮತ್ತು ಆಡಳಿತ ವೆಚ್ಚಗಳನ್ನು ಕಡಿತಗೊಳಿಸಿ ಉಳಿದ ಹಣವನ್ನು ಮೂಲ ಮಾಲೀಕರಿಗೆ ಹಿಂತಿರುಗಿಸಲಾಗುತ್ತದೆ. ನಂತರ ಆಸ್ತಿಗಳ ಮಾಲೀಕತ್ವ ಸಂಪೂರ್ಣವಾಗಿ ಪಾಲಿಕೆಗಳಿಗೆ ವರ್ಗಾವಣೆಯಾಗುತ್ತದೆ ಮತ್ತು ದಾಖಲೆಗಳನ್ನು ನವೀಕರಿಸಲಾಗುತ್ತದೆ ಎಂದು ಹೇಳಿದ್ದಾರೆ.

ಇದೇ ವೇಳೆ, ಬಾಕಿದಾರರಿಗೆ ಇನ್ನೊಂದು ಅವಕಾಶ ನೀಡಲು ಪಾಲಿಕೆಗಳು ಒಂದು ತಿಂಗಳ ಗಡುವು ಘೋಷಿಸಿದ್ದು, ಈ ಅವಧಿಯಲ್ಲಿ ಬಾಕಿ ತೆರಿಗೆ ಪಾವತಿಸಿದರೆ ಆಸ್ತಿ ಸ್ವಾಧೀನ ಪ್ರಕ್ರಿಯೆಯನ್ನು ಹಿಂತೆಗೆದುಕೊಳ್ಳಲಾಗುತ್ತದೆ ಮತ್ತು ಆಸ್ತಿಯನ್ನು ಮರುಸ್ಥಾಪಿಸಲಾಗುತ್ತದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕುವೈತ್‌: ವಿದ್ಯುತ್ ಸ್ಥಾವರದ ಮೇಲೆ ಇರಾನ್ ದಾಳಿ; ಭಾರತೀಯ ಕಾರ್ಮಿಕ ಸಾವು!

ಸೆಲ್ಫಿ ಫೋಟೋ ತೆಗೆಯುವಾಗ ಸೊಂಟಕ್ಕೆ ಕೈಹಾಕಿದ ಅಭಿಮಾನಿ; ನಟಿ ಮಾಡಿದ್ದೇನು, Video!

West Asia war ಎಫೆಕ್ಟ್: ಷೇರು ಮಾರುಕಟ್ಟೆ ಆರಂಭಿಕ ವಹಿವಾಟಿನಲ್ಲಿ 1,191.24 ಅಂಕ ಕುಸಿತ; ಹೂಡಿಕೆದಾರರಿಗೆ ಭಾರೀ ನಷ್ಟ

ಇರಾನ್ ಬೆಂಬಲಿತ ಹೌತಿಗಳು ಯುದ್ಧಕ್ಕೆ ಎಂಟ್ರಿ; ಜಾಗತಿಕ ತೈಲ ಮತ್ತು ನೈಸರ್ಗಿಕ ಅನಿಲ ಸಾಗಣೆಗೆ ಆತಂಕ (ಜಾಗತಿಕ ಜಗಲಿ)

ವಿಶಾಖಪಟ್ಟಣಂ: ಲವರ್ ಕೊಂದು, ಮೃತದೇಹವನ್ನು ತುಂಡರಿಸಿ 'ಫ್ರೀಡ್ಜ್ 'ನಲ್ಲಿಟ್ಟಿದ್ದ ನೌಕಪಡೆಯ ಉದ್ಯೋಗಿ ಬಂಧನ!

SCROLL FOR NEXT