ಪುನರ್ ವಿನ್ಯಾಸದ ಪರಿಶೀಲನೆ ಮಾಡುತ್ತಿರುವ ಸಚಿವ ರಾಮಲಿಂಗಾ ರೆಡ್ಡಿ ಮತ್ತು ಅಧಿಕಾರಿಗಳು  
ರಾಜ್ಯ

ಬನಶಂಕರಿ ಜಂಕ್ಷನ್ ನಲ್ಲಿ ಸುಗಮ ಸಂಚಾರ: ಪುನರ್ ವಿನ್ಯಾಸಕ್ಕೆ ಮೂರು ಸಂಸ್ಥೆಗಳಿಗೆ ಉಸ್ತುವಾರಿ

ಎರಡು ದಿನಗಳ ಹಿಂದೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಜಂಕ್ಷನ್‌ನಲ್ಲಿ ಸ್ಕೈವಾಕ್‌ಗೆ ಭೂಮಿಪೂಜೆ ನೆರವೇರಿಸಿದ್ದರು.

ಬೆಂಗಳೂರು: ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರ ಸೂಚನೆ ಮೇರೆಗೆ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಬನಶಂಕರಿ ಜಂಕ್ಷನ್‌ನಲ್ಲಿ ಸುಗಮ ಸಂಚಾರಕ್ಕಾಗಿ ಸಮಗ್ರ ಸಂಚಾರ ಯೋಜನೆ ಕುರಿತು ಸಭೆ ನಡೆಸಿದರು.

ಎರಡು ದಿನಗಳ ಹಿಂದೆ ಡಿ ಕೆ ಶಿವಕುಮಾರ್ ಅವರು ಜಂಕ್ಷನ್‌ನಲ್ಲಿ ಸ್ಕೈವಾಕ್‌ಗೆ ಭೂಮಿಪೂಜೆ ನೆರವೇರಿಸಿದ್ದರು. ನಾಗೇಶ್ ಕನ್ಸಲ್ಟಂಟ್ಸ್ (ನಾಗೇಶ್ ಪ್ರತಿನಿಧಿ), ಇನ್‌ಫ್ರಾ ಸಪೋರ್ಟ್ ಎಂಜಿನಿಯರಿಂಗ್ ಕನ್ಸಲ್ಟಂಟ್ಸ್ ಪ್ರೈವೇಟ್ ಲಿಮಿಟೆಡ್ (ರತ್ನಾಕರ್ ರೆಡ್ಡಿ ಪ್ರತಿನಿಧಿ) ಮತ್ತು ನೆಜ್ ಕನ್ಸಲ್ಟೇಶನ್ (ಕಣ್ಣನ್ ಪ್ರತಿನಿಧಿ) ಎಂಬ ಮೂರು ಸಂಸ್ಥೆಗಳಿಗೆ ಒಂದು ವಾರದೊಳಗೆ ವಿನ್ಯಾಸ ಸಲ್ಲಿಸಲು ಸೂಚಿಸಲಾಗಿದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಹಿರಿಯ ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ಹಾಗೂ ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಅವರು ಯೋಜನೆ ರೂಪಿಸುವ ಮೊದಲು ಸಂಚಾರ ದಟ್ಟಣೆ ಅಧ್ಯಯನ ನಡೆಸುವಂತೆ ಸಲಹೆ ನೀಡಿದರು, ಪಾದಚಾರಿಗಳಿಗೆ ಮಾರ್ಗ ವ್ಯವಸ್ಥೆ ಮಾಡುವುದನ್ನು ಒತ್ತಿಹೇಳಿದರು. ಪ್ರಾಥಮಿಕ ವಿನ್ಯಾಸಗಳಲ್ಲಿ ಎಲ್ ಆಕಾರದ ಸ್ಕೈವಾಕ್ ಮತ್ತು ಜಂಕ್ಷನ್‌ನಲ್ಲಿ ಫ್ಲೈಓವರ್ ತೋರಿಸಲಾಗಿದೆ.

ಈ ವಿನ್ಯಾಸಗಳಿಗೆ ಜಿಬಿಎ ಎಂಜಿನಿಯರಿಂಗ್ ವಿಭಾಗದಿಂದ ಹೆಚ್ಚಿನ ಬೆಂಬಲ ಅಗತ್ಯವಿದೆ. ಫ್ಲೈಓವರ್ ಪ್ರಸ್ತಾಪವು ಬಂದಿರುವುದು, ಈಗಾಗಲೇ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಶನ್ ಲಿಮಿಟೆಡ್ (BMRCL) 50 ಕೋಟಿ ರೂ. ವೆಚ್ಚದ ವೃತ್ತಾಕಾರದ ಸ್ಕೈವಾಕ್ ನಿರ್ಮಾಣದ ಟೆಂಡರ್ ಹಾಗೂ ಒಪ್ಪಂದ ಅಂತಿಮಗೊಂಡಿರುವ ಸಮಯದಲ್ಲೇ ಆಗಿದೆ.

ಈ ಸ್ಕೈವಾಕ್ ಬನಶಂಕರಿ ಮೆಟ್ರೋ ನಿಲ್ದಾಣ ಮತ್ತು ಟಿಟಿಎಮ್‌ಸಿ ನ್ನು ಸಂಪರ್ಕಿಸಲಿದೆ. ಈ ಯೋಜನೆಗೆ ಡಿಸಿಎಂ ಭೂಮಿಪೂಜೆ ನೆರವೇರಿಸಿದ್ದಾರೆ; ಈಗ ಫ್ಲೈಓವರ್ ಸೇರಿಸುವುದು ಸವಾಲಾಗಲಿದೆ. ಆದ್ದರಿಂದ ಉತ್ತಮ ವಿನ್ಯಾಸ ಸಲಹೆಗಾರರನ್ನು ಟ್ರಾಫಿಕ್ ಅಧ್ಯಯನಕ್ಕಾಗಿ ನೇಮಿಸಲಾಗಿದೆ ಎಂದು ಬೆಂಗಳೂರು ದಕ್ಷಿಣ ನಗರ ನಿಗಮದ ಇಂಜಿನಿಯರ್ ಹೇಳಿದ್ದಾರೆ.

ಈ ನಡುವೆ, ಸಚಿವರು ಹಾಗೂ ಜಿಬಿಎ ಮುಖ್ಯಸ್ಥರು ಬಿ-ಸ್ಮೈಲ್ ಸಂಸ್ಥೆಗೆ ವಿನ್ಯಾಸ ಸಂಸ್ಥೆಗಳೊಂದಿಗೆ ಸಂಯೋಜನೆ ಮಾಡಿ, ಫ್ಲೈಓವರ್ ಸೇರಿಸುವ ಸಾಧ್ಯತೆಯ ಕುರಿತು ವರದಿ ಸಲ್ಲಿಸುವ ಜವಾಬ್ದಾರಿ ನೀಡಿದ್ದಾರೆ.

ಹಳೆಯ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪಟ್ಟಣ ಯೋಜನಾ ಸಮಿತಿ ಮಾಜಿ ಅಧ್ಯಕ್ಷ ಎಚ್.ಎಚ್. ಬಸವರಾಜು, ಈ ಯೋಜನೆ 10 ವರ್ಷಗಳ ಹಿಂದೆ ಬಿಜೆಪಿ ಆಡಳಿತದಲ್ಲಿದ್ದಾಗ ಪರಿಕಲ್ಪಿತವಾಗಿತ್ತು ಎಂದು ತಿಳಿಸಿದ್ದಾರೆ. ಫ್ಲೈಓವರ್ ನಿರ್ಮಾಣವಾದರೆ ಕನಕಪುರ ಮುಖ್ಯರಸ್ತೆ, ಬಿಟಿಎಂ-ಹೊಸೂರು ರಸ್ತೆ ಹಾಗೂ ಬನಶಂಕರಿ ಜಂಕ್ಷನ್‌ನಿಂದ ಮಜೆಸ್ಟಿಕ್ ಕಡೆಗೆ ಹೋಗುವ ಸಂಚಾರ ದಟ್ಟಣೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತಮಿಳುನಾಡು ರಾಜಕೀಯದಲ್ಲಿ ಬಿಗ್​ ಟ್ವಿಸ್ಟ್: TVK ಬೆಂಬಲಿಸಲು ಕಾಂಗ್ರೆಸ್ ನಿರ್ಧಾರ; DMK ಮೈತ್ರಿಗೆ ಭಾರಿ ಶಾಕ್, ಹೊಸ ಮೈತ್ರಿ ಸರ್ಕಾರ ಅಧಿಕಾರಕ್ಕೆ..!

TVK–ಕಾಂಗ್ರೆಸ್ ಮೈತ್ರಿ: ಸಂಪುಟದಲ್ಲಿ 2 ಸ್ಥಾನಕ್ಕೆ 'ಕೈ' ಬೇಡಿಕೆ, ತಮಿಳುನಾಡಿನಲ್ಲಿ ವಿಜಯ್ ಸರ್ಕಾರ ರಚನೆ ಬಹುತೇಕ ಖಚಿತ..!

ಸೋಲು ಬಳಿಕವೂ ಹಠಕ್ಕೆ ಬಿದ್ದ ಮಮತಾ ಬ್ಯಾನರ್ಜಿ: ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ನಕಾರ, ಒದ್ದು ಹೊರಹಾಕಿ ಎಂದು ಜೇಠ್ಮಲಾನಿ ಕಿಡಿ

ಹೈಕಮಾಂಡ್ ಕರೆದ ತಕ್ಷಣ ದೆಹಲಿಗೆ ಪ್ರಯಾಣ: 2028 ರಲ್ಲೂ ನಮ್ಮದೇ ಸರ್ಕಾರ ಫಿಕ್ಸ್; ಸಿಎಂ ಸಿದ್ದರಾಮಯ್ಯ

ಧಾರವಾಡ ಉಪಚುನಾವಣೆ: ಕುಲಕರ್ಣಿ ಪತ್ನಿಗೆ ಸಿಗುತ್ತಾ ಟಿಕೆಟ್...?

SCROLL FOR NEXT