ಮೈಸೂರು ನಗರ ಪ್ರದಕ್ಷಿಣೆಯ ಭಾಗವಾಗಿ ಇಂದು ಮಾನಂದವಾಡಿ ರಸ್ತೆಯ ಎನ್.ಐ ಕಾಲೇಜಿನ ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಕೈಗೊಂಡಿರುವ ವೈಟ್ ಟಾಪಿಂಗ್ ಕಾಮಗಾರಿಯನ್ನು ಸಿಎಂ ಪರಿಶೀಲಿಸಿದರು.  
ರಾಜ್ಯ

'ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸುವಂತಿಲ್ಲ; ಪ್ರಧಾನ ಮಂತ್ರಿಯವರ ಬೆಂಗಾವಲು ವಾಹನ ಕಡಿತ ಸರಿಯಾದ ಕ್ರಮವಲ್ಲ': ಸಿದ್ದರಾಮಯ್ಯ; Video

ಪೇಟ, ಜನಿವಾರ, ಶಿವದಾರ, ರುದ್ರಾಕ್ಷಿ, ಹಿಜಾಬ್ ಧರಿಸಿಕೊಂಡು ಶಾಲೆ-ಕಾಲೇಜುಗಳಿಗೆ ಹೋಗಬಹುದು, ಪೇಟ ಎಂದರೆ ಈಗಾಗಲೇ ರೂಢಿಯಲ್ಲಿರುವುದನ್ನು ಮಾತ್ರ ಧರಿಸಲು ಅವಕಾಶವಿರುತ್ತದೆ. ಹೊಸದಾಗಿ ಕೇಸರಿ ಪೇಟ ಧರಿಸಲು ಅವಕಾಶವಿಲ್ಲ ಎಂದರು.

ಮೈಸೂರು: ಹಿಜಾಬ್ ಮಾತ್ರವಲ್ಲ, ಇನ್ನು ಮುಂದೆ ಪ್ರೈಮರಿ, ಹೈಸ್ಕೂಲ್ ಮತ್ತು ಪಿಯುಸಿವರೆಗೆ ವಿದ್ಯಾರ್ಥಿಗಳ ಅವರವರ ಧಾರ್ಮಿಕ ನಂಬಿಕೆಗಳಿಗೆ ಅನುಸಾರವಾಗಿ ಜನಿವಾರ, ಶಿವದಾರ,ರುದ್ರಾಕ್ಷಿ ಧರಿಸಲು ಕೂಡ ಅವಕಾಶವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮೈಸೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿಕೊಂಡು ಮಾತ್ರ ಶಾಲೆಗೆ ಬರುವಂತಿಲ್ಲ. ಪೇಟ, ಜನಿವಾರ, ಶಿವದಾರ, ರುದ್ರಾಕ್ಷಿ, ಹಿಜಾಬ್ ಧರಿಸಿಕೊಂಡು ಶಾಲೆ-ಕಾಲೇಜುಗಳಿಗೆ ಹೋಗಬಹುದು, ಪೇಟ ಎಂದರೆ ಈಗಾಗಲೇ ರೂಢಿಯಲ್ಲಿರುವುದನ್ನು ಮಾತ್ರ ಧರಿಸಲು ಅವಕಾಶವಿರುತ್ತದೆ. ಹೊಸದಾಗಿ ಕೇಸರಿ ಪೇಟ ಧರಿಸಲು ಅವಕಾಶವಿಲ್ಲ ಎಂದರು.

ಬೆಂಗಾವಲು ವಾಹನಗಳ ಕಡಿತದಿಂದ ತಾತ್ಕಾಲಿಕವಷ್ಟೆ

ಇಂಧನ ಉಳಿತಾಯಕ್ಕೆ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಕಡಿತ ಮಾಡುವ ಪ್ರಧಾನ ಮಂತ್ರಿಯವರು ಹೇಳಿರುವ ಕ್ರಮ ಸರಿಯಾದದ್ದು ಅಲ್ಲ, ಅದು ತಾತ್ಕಾಲಿಕ ಕ್ರಮವಷ್ಟೆ, ಅದರ ಬದಲು ಬೇರೆ ದೇಶಗಳ ಜೊತೆ ಮಾತುಕತೆ ನಡೆಸಿ ಸಹಮತದ ಸ್ಥಿತಿಗೆ ಬರುವುದು ಉತ್ತಮ ಎಂದರು.

ಸಂಪುಟ ಪುನಾರಚನೆ ಸಂಬಂಧ ಮಾತನಾಡಲು ಹೈಕಮಾಂಡ್ ಕರೆದರೆ ದೆಹಲಿಗೆ ಹೋಗುತ್ತೇನೆ ಎಂದ ಸಿದ್ದರಾಮಯ್ಯ ಮೇ 15ಕ್ಕೆ ಹೋಗುತ್ತೀರಾ ಎಂದು ಸುದ್ದಿಗಾರರು ಕೇಳಿದಾಗ ಗರಂ ಆದರು, ಮೇ 15 ಎಂದು ನಿಮಗೆ ಯಾರು ಹೇಳಿದ್ದು ಎಂದು ಪ್ರಶ್ನಿಸಿದರು. ಸಚಿವ ಸಂಪುಟ ಪುನಾರಚನೆ ಮಾಡುವ ಅಗತ್ಯವಿದೆ ಎಂದರು.

ವಿದ್ಯಾರ್ಥಿಗಳಿಗೆ ಅನ್ಯಾಯ

ನೀಟ್ ಪರೀಕ್ಷೆಗೆ ಚೆನ್ನಾಗಿ ಓದಿ ಪರೀಕ್ಷೆ ಬರೆದವರ ಕಥೆ ಏನಾಗಬೇಕು, ನೀವು ಕೇಂದ್ರ ಸರ್ಕಾರವನ್ನು ಟೀಕೆ ಮಾಡಿ ಬರೆಯಿರಿ ಎಂದು ಪತ್ರಕರ್ತರಿಗೆ ಸಿಎಂ ಸಿದ್ದರಾಮಯ್ಯ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್

Cricket: ಪಂತ್‌ರಂತೆ ಆಡಲು ಪ್ರಯತ್ನಿಸಲ್ಲ, ಅವರ ಜೊತೆ ಆಡೋದು ದೊಡ್ಡ ಅನುಭವ: ಫಿಟ್ನೆಸ್ ಅಪ್ಡೇಟ್ ಕೊಟ್ಟ Dhruv Jurel

ಜೈ ಜವಾನ್, ಜೈ ಕಿಸಾನ್: ಐತಿಹಾಸಿಕ ಶತಕದ ಬಳಿಕ ಹೊಸ ಟ್ಯಾಟೂ ರಿವೀಲ್ ಮಾಡಿದ Dhruv Jurel

EVM ದೋಷ, ನನ್ನನ್ನೇ ವಿಜೇತನೆಂದು ಘೋಷಿಸಿ: ಕೊಲತ್ತೂರ್ ಸೋಲನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ MK Stalin!