ಎಚ್.ಡಿ ದೇವೇಗೌಡ 
ರಾಜ್ಯ

ಭೂಮಿ ಕಳೆದುಕೊಂಡವರಿಗೆ ನಿವೇಶನ ಹಂಚಿಕೆ 'ಸುಪ್ರೀಂ' ತೀರ್ಪಿಗೆ ವಿರುದ್ಧ: ನಿಜವಾದ ಫಲಾನುಭವಿಗಳು ಯಾರು? CMಗೆ ದೇವೇಗೌಡ ಪತ್ರ!

ಸಾರ್ವಜನಿಕರ ಕಣ್ಣಿಗೆ ಮಣ್ಣೆರಚಿ ಕಾನೂನಿನ ಆಡಳಿತವನ್ನು ಉಲ್ಲಂಘಿಸಬಹುದು ಎಂದು ನಿಮ್ಮ ಸಚಿವ ಸಂಪುಟ ಭಾವಿಸಿರುವ ರೀತಿ ಆಘಾತಕಾರಿಯಾಗಿದೆ. ನಿವೇಶನಗಳನ್ನು ನಿರ್ಮಿಸಲು ಸರ್ಕಾರವೇ ಅನುಮತಿ ನಿರಾಕರಿಸುತ್ತಿರುವಾಗ, ಸಂಪುಟವು ನಿವೇಶನ ಹಂಚಿಕೆಗೆ ಅನುಮೋದನೆ ನೀಡಿದೆ ಎಂದು ಹೇಳುವುದರ ಅರ್ಥವೇನು.

ಬೆಂಗಳೂರು: ಭೂಮಿ ಕಳೆದುಕೊಂಡವರಿಗೆ ಕರ್ನಾಟಕ ಸರ್ಕಾರ 1,453 ನಿವೇಶನಗಳನ್ನು ಹಂಚಿಕೆ ಮಾಡುವ ನಿರ್ಧಾರವನ್ನು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಪ್ರಶ್ನಿಸಿದ್ದಾರೆ, ಈ ಕ್ರಮವು ಸುಪ್ರೀಂ ಕೋರ್ಟ್ ತೀರ್ಪಿಗೆ ಮತ್ತು ಈ ವಿಷಯದ ಬಗ್ಗೆ ಸರ್ಕಾರದ ಹಿಂದಿನ ನಿಲುವಿಗೆ ವಿರುದ್ಧವಾಗಿರಬಹುದು ಎಂದು ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಬರೆದ ಮುಕ್ತ ಪತ್ರದಲ್ಲಿ, ಸೆಪ್ಟೆಂಬರ್ 4 ರಂದು ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸ್ ಲಿಮಿಟೆಡ್ (ಎನ್‌ಐಸಿಇಎಲ್) ಗೆ ನಿವೇಶನಗಳನ್ನು (ಪ್ಲಾಟ್‌ಗಳು) ಹಂಚಿಕೆ ಮಾಡುವಂತೆ ಸಂಪುಟವು ನಿರ್ದೇಶಿಸಿದೆ. ಸರ್ಕಾರವು ಈ ನಿರ್ಧಾರಕ್ಕೆ ನ್ಯಾಯಾಂಗ ಅನುಮೋದನೆಯನ್ನು ಪಡೆಯುವ ಮೂಲಕ "ಕಾನೂನಿನ ನಿಯಮವನ್ನು ಬುಡಮೇಲು ಮಾಡಲು" ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಸಾರ್ವಜನಿಕರ ಕಣ್ಣಿಗೆ ಮಣ್ಣೆರಚಿ ಕಾನೂನಿನ ಆಡಳಿತವನ್ನು ಉಲ್ಲಂಘಿಸಬಹುದು ಎಂದು ನಿಮ್ಮ ಸಚಿವ ಸಂಪುಟ ಭಾವಿಸಿರುವ ರೀತಿ ಆಘಾತಕಾರಿಯಾಗಿದೆ. ನಿವೇಶನಗಳನ್ನು ನಿರ್ಮಿಸಲು ಸರ್ಕಾರವೇ ನಿರಂತರವಾಗಿ ಅನುಮತಿ ನಿರಾಕರಿಸುತ್ತಿರುವಾಗ, ಸಚಿವ ಸಂಪುಟವು ನಿವೇಶನ ಹಂಚಿಕೆಗೆ ಅನುಮೋದನೆ ನೀಡಿದೆ ಎಂದು ಹೇಳುವುದರ ಅರ್ಥವೇನು? 2016 ರಲ್ಲಿ ನಿಮ್ಮ ಪಕ್ಷವೇ ಅಧಿಕಾರದಲ್ಲಿದ್ದಾಗ, ನ್ಯಾಯಾಂಗ ನಿಂದನೆ ನಡಾವಳಿಗಳ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ಗೆ ಸರ್ಕಾರ ಸಲ್ಲಿಸಿದ ಎರಡು ಪ್ರಮಾಣಪತ್ರಗಳಲ್ಲಿ ಇಂಟರ್‌ ಚೇಂಜ್‌ಗಳಲ್ಲಿ (ರಸ್ತೆ ಸಂಪರ್ಕ ಜಂಕ್ಷನ್‌ಗಳು) ನಿವೇಶನಗಳ ನಿರ್ಮಾಣಕ್ಕೆ ಅನುಮತಿ ನೀಡುವುದು 03.04.1997 ರ ಚೌಕಟ್ಟಿನ ಒಪ್ಪಂದದ ನಿಯಮಗಳಿಗೆ ವಿರುದ್ಧವಾಗಿದೆ ಎಂದು ನಿಸ್ಸಂಶಯವಾಗಿ ತಿಳಿಸಿತ್ತು.

ಬಿಎಂಐಸಿಪಿ ಯೋಜನೆಯನ್ನು ಕಾರ್ಯಗತಗೊಳಿಸಲು ಮತ್ತು ಎಫ್‌ಡಬ್ಲ್ಯೂಎ ಒಪ್ಪಂದವನ್ನು ಯಥಾವತ್ತಾಗಿ ಜಾರಿಗೆ ತರಲು ಸುಪ್ರೀಂ ಕೋರ್ಟ್ ನೀಡಿರುವ ಮ್ಯಾಂಡಮಸ್ ಆದೇಶಕ್ಕೆ ತಾವು ಬದ್ಧರಾಗಿದ್ದೇವೆ ಮತ್ತು ರಸ್ತೆಯ ಇಂಟರ್‌ ಚೇಂಜ್‌ಗಳಲ್ಲಿ ನಿವೇಶನಗಳನ್ನು ರಚಿಸಲು ಅನುಮತಿಸಿದರೆ ಅದು ನ್ಯಾಯಾಲಯದ ಆದೇಶಗಳ ನಿಂದನೆಯಾಗುತ್ತದೆ ಎಂದು ನಿಮ್ಮ ಸರ್ಕಾರ ವಾದಿಸಿತ್ತು, ಮತ್ತು ಆ ವಾದ ಸರಿಯಾಗಿತ್ತು.

ಇಂಟರ್‌ ಚೇಂಜ್ ಜಮೀನುಗಳಲ್ಲಿ ಸಮೂಹ ವಸತಿ ಯೋಜನೆಗಳು ಮತ್ತು ವಸತಿ ಬಡಾವಣೆಗಳನ್ನು ನಿರ್ಮಿಸಲು ನೈಸ್ ಸಂಸ್ಥೆಗೆ ಯೋಜನಾ ಅನುಮೋದನೆಯ ಹಕ್ಕಿದೆ ಎಂದು ಹೈಕೋರ್ಟ್‌ನ ವಿಭಾಗೀಯ ಪೀಠ ತೀರ್ಪು ನೀಡಿದಾಗ, ಸರ್ಕಾರ ಅದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತು. ಸುಪ್ರೀಂ ಕೋರ್ಟ್ ಸರ್ಕಾರದ ನಿಲುವನ್ನು ಎತ್ತಿಹಿಡಿಯಿತು ಮತ್ತು ನೈಸ್ ಸಂಸ್ಥೆಯು ಎಫ್‌ಡಬ್ಲ್ಯೂಎ (FWA) ಒಪ್ಪಂದಕ್ಕೆ ಸಂಪೂರ್ಣವಾಗಿ ಬದ್ಧವಾಗಿರಬೇಕು ಎಂದು ಸ್ಪಷ್ಟವಾಗಿ ಹೇಳಿತು.

ಅಲ್ಲದೆ, ಇಂಟರ್‌ಚೇಂಜ್‌ಗಳಲ್ಲಿ ಹಾಗೂ ರಸ್ತೆ ಮತ್ತು ರಸ್ತೆ ಮೂಲಸೌಕರ್ಯ ನಿರ್ಮಾಣಕ್ಕಾಗಿ ಹಸ್ತಾಂತರಿಸಲಾದ ಜಮೀನುಗಳಲ್ಲಿ ನಿವೇಶನಗಳನ್ನು ರಚಿಸುವುದು ಎಫ್‌ಡಬ್ಲ್ಯೂಎ ಒಪ್ಪಂದದಲ್ಲಿ ಯಾವುದೇ ಆಧಾರವನ್ನು ಹೊಂದಿಲ್ಲದಿರುವುದಷ್ಟೇ ಅಲ್ಲದೆ, ನಗರದ ದಟ್ಟಣೆಯನ್ನು ಕಡಿಮೆ ಮಾಡುವ ಬಿಎಂಐಸಿಪಿ ಯೋಜನೆಯ ಮೂಲ ಉದ್ದೇಶಕ್ಕೆ ಭಂಗ ತರುತ್ತದೆ ಎಂದು ಅಭಿಪ್ರಾಯಪಟ್ಟಿತು. ಸ್ವಯಂಪ್ರೇರಿತವಾಗಿ ಜಮೀನು ಬಿಟ್ಟುಕೊಟ್ಟ ಸಂತ್ರಸ್ತರಿಗೆ ನೀಡಿದ ಭರವಸೆಯಂತೆ ಪರಿಹಾರವಾಗಿ ನಿವೇಶನಗಳನ್ನು ಹಂಚಿಕೆ ಮಾಡಲು ನಿಮ್ಮ ಸಂಪುಟ ಅನುಮೋದನೆ ನೀಡಿದೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ.

ಮಾರ್ಚ್ 2023 ರಲ್ಲಿ, ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದ ರಿಟ್ ಅರ್ಜಿಗಳ ವಿಚಾರಣೆ ವೇಳೆ, ಎಫ್‌ಡಬ್ಲ್ಯೂಎ ಒಪ್ಪಂದದಡಿ ರಸ್ತೆ ಮತ್ತು ರಸ್ತೆ ಮೂಲ ಸೌಕರ್ಯಕ್ಕಾಗಿ ಸ್ವಾಧೀನ ಪಡಿಸಿಕೊಂಡ ಜಮೀನುಗಳಲ್ಲಿ ನಿವೇಶನಗಳನ್ನು ನಿರ್ಮಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ, ಸಂತ್ರಸ್ತರಿಗೆ ನಿವೇಶನ ಹಂಚಿಕೆ ಮಾಡಲು ನೈಸ್ ಸಂಸ್ಥೆ ಸಲ್ಲಿಸಿದ್ದ ಮನವಿಯನ್ನು ತಾನು ತಿರಸ್ಕರಿಸಿರುವುದಾಗಿ ಸರ್ಕಾರ ದಾಖಲೆ ಸಮೇತ ತಿಳಿಸಿತ್ತು. ಈ ವರ್ಷದ ಜನವರಿಯಲ್ಲಿ, ಹೈಕೋರ್ಟ್ ಎಫ್‌ಡಬ್ಲ್ಯೂಎ ಒಪ್ಪಂದಕ್ಕೆ ವಿರುದ್ಧವಾಗಿ ಇಂಟರ್‌ ಚೇಂಜ್‌ಗಳಲ್ಲಿ ಅಥವಾ ರಸ್ತೆಗಾಗಿ ನೀಡಲಾದ ಜಮೀನುಗಳಲ್ಲಿ ನಿವೇಶನಗಳನ್ನು ನಿರ್ಮಿಸಿ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿದೆ.

ಹಾಗಿದ್ದರೂ, ಜಮೀನು ಕಳೆದುಕೊಂಡವರಿಗೆ ಪరిಹಾರವಾಗಿ ನಿವೇಶನ ಹಂಚಿಕೆಗೆ ಅನುಮೋದನೆ ನೀಡಲಾಗಿದೆ ಎಂದು ನಿಮ್ಮ ಸಚಿವ ಸಂಪುಟ ಹೇಳುತ್ತಿದೆ. ಮಾದಾವರ, ಕೋಡಿಗೆಹಳ್ಳಿ, ಕೆಂಗೇರಿ, ಕೊಮ್ಮಘಟ್ಟ, ವರಾಹಸಂದ್ರ, ಸೋಂಪುರ, ಪಿಳ್ಳಗಾನಹಳ್ಳಿ, ಕೆಮತಾನಹಳ್ಳಿ, ಯು.ಎಂ. ಕಾವಲ್, ಚಿಕ್ಕತೋಗೂರು, ಪಂತರಪಾಳ್ಯ, ಕೆ.ಜಿ. ಶ್ರೀಕಂಠಪುರ ಮತ್ತು ಗಂಗೊಂಡನಹಳ್ಳಿ ಗ್ರಾಮಗಳಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು ಎಂದು ವರದಿಯಾಗಿದೆ. ಈ ಗ್ರಾಮಗಳಲ್ಲಿನ ಜಮೀನುಗಳು ಬಿಎಂಐಸಿಪಿ ಯೋಜನೆಯ ರಸ್ತೆ/ರಸ್ತೆ ಮೂಲಸೌಕರ್ಯ ವಿಭಾಗಕ್ಕೆ ಒಳಪಡುತ್ತವೆ ಎಂಬುದು ಸಾರ್ವಜನಿಕ ದಾಖಲೆಗಳಲ್ಲಿದೆ.

ಹಂಚಿಕೆ ಮಾಡಲಾಗುವ ಈ ನಿವೇಶನಗಳನ್ನು ಎಂದು ನಿರ್ಮಿಸಲಾಯಿತು? ಈ ನಿವೇಶನಗಳ ನಿರ್ಮಾಣಕ್ಕೆ ಅನುಮೋದನೆ ನೀಡಿದವರು ಯಾರು? ಜುಲೈ 2026 ರಲ್ಲಿ, ಹೈಕೋರ್ಟ್‌ನ ವಿಭಾಗೀಯ ಪೀಠವು ಈ ಕಂಪನಿಯ ಬ್ಯಾಲೆನ್ಸ್ ಶೀಟ್‌ಗಳನ್ನು ಗಮನಿಸಿ, ಭೂ ಮಾರಾಟ ಮತ್ತು ಜಂಟಿ ಅಭಿವೃದ್ಧಿ ಒಪ್ಪಂದಗಳಿಗಾಗಿ ರೂ. 36 ಕೋಟಿಯಿಂದ ರೂ. 48 ಕೋಟಿವರೆಗಿನ ಮುಂಗಡ ಹಣವನ್ನು ನಿರಂತರವಾಗಿ ತೋರಿಸಿರುವುದನ್ನು ಉಲ್ಲೇಖಿಸಿದೆ.

ಅಭಿವೃದ್ಧಿಪಡಿಸಿದ ಜಮೀನಿನ ಮಾರಾಟ, ಜಂಟಿ ಅಭಿವೃದ್ಧಿ ಒಪ್ಪಂದಗಳು ಮತ್ತು ಯೋಜನಾ ಜಮೀನುಗಳ ನಗದೀಕರಣ ಹಾಗೂ ಅನಧಿಕೃತ ಮತ್ತು ಅತಿಯಾದ ಟೋಲ್ ಸಂಗ್ರಹಣೆಯು ಕಂಪನಿಯ ಪ್ರಮುಖ ಆದಾಯದ ಮೂಲಗಳಾಗಿದ್ದರೆ, ಪೂರ್ಣಗೊಂಡ ಲಿಂಕ್ ರಸ್ತೆ ಮತ್ತು ಪೆರಿಫೆರಲ್ ರಸ್ತೆಯ ಭಾಗಗಳನ್ನು ಕಂಪನಿಯ ಹಣಕಾಸು ವಿವರಣೆಗಳಲ್ಲಿ ಆಸ್ತಿಗಳಾಗಿ ತೋರಿಸಲಾಗಿದೆ. ಇದು ಶಾಸನ ಮತ್ತು ಸಂವಿಧಾನಕ್ಕೆ ಎಸಗಿದ ದ್ರೋಹವಾಗಿದ್ದು, ಈ ಯೋಜನೆಯಿಂದ ಯಾವುದೇ ಸಾರ್ವಜನಿಕ ಹಿತಾಸಕ್ತಿ ಅಥವಾ ಉದ್ದೇಶ ಈಡೇರಿಲ್ಲ, ಕೇವಲ ಯೋಜನೆಯ ಪ್ರವರ್ತಕರ ಖಾಸಗಿ ಹಿತಾಸಕ್ತಿಗಳಿಗೆ ಮಾತ್ರ ಬಳಕೆಯಾಗಿದೆ ಎಂದು ನ್ಯಾಯಾಲಯ ನಿಸ್ಸಂದಿಗ್ಧವಾಗಿ ಹೇಳಿದೆ.

"ಸ್ಥಳಗಳ ನಿಜವಾದ ಫಲಾನುಭವಿಗಳು ಭೂಮಿ ಕಳೆದುಕೊಳ್ಳುವವರಲ್ಲ, ಬದಲಿಗೆ NICEL ಮತ್ತು ಅದರ ಹೂಡಿಕೆದಾರರೇ? ನಿಮ್ಮ ಸಂಪುಟದಲ್ಲಿರುವ ಹೂಡಿಕೆದಾರರು ಮುಖ್ಯಮಂತ್ರಿಗಳೇ? ಎಂದು ರಾಜ್ಯವು ತಿಳಿದುಕೊಳ್ಳಲು ಬಯಸುತ್ತದೆ" ಎಂದು ಗೌಡರು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿ ಕಟ್ಟಡ ಕುಸಿತ ದುರಂತ: ರಾಜಸ್ಥಾನದಲ್ಲಿ ತಲೆಮರೆಸಿಕೊಂಡಿದ್ದ ಪಿಜಿ ಮಾಲೀಕ ಅಂದರ್; ಐವರು ಅಧಿಕಾರಿಗಳ ಅಮಾನತು!

ಭಾರತದಲ್ಲಿ ಶೀಘ್ರದಲ್ಲೇ ಗಂಟೆಗೆ 110 ಕಿ.ಮೀ ವೇಗದಲ್ಲಿ ಹೈಡ್ರೋಜನ್ ರೈಲುಗಳ ಕಾರ್ಯಾಚರಣೆ: ರೈಲ್ವೆ ಸುಳಿವು

'ಕೇವಲ ಸಹಕಾರವಲ್ಲ, ಭವಿಷ್ಯವನ್ನೇ ಒಟ್ಟಿಗೆ ರೂಪಿಸುತ್ತಿದ್ದೇವೆ': ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ-ಅಮೆರಿಕ ಜಂಟಿ ಹೆಜ್ಜೆ, ರಾಯಭಾರಿ Sergio Gor ಹೇಳಿದ್ದೇನು?

ದೆಹಲಿ ಕಟ್ಟಡ ದುರಂತ: ಮೃತರ ಸಂಖ್ಯೆ 7ಕ್ಕೆ ಏರಿಕೆ; ತಲೆಮರೆಸಿಕೊಂಡಿರುವ PG ಮಾಲೀಕನ ವಿರುದ್ಧ Lookout Notice ಜಾರಿ, ಇಂದು High courtನಲ್ಲಿ ತುರ್ತು ವಿಚಾರಣೆ..!

ದುಲೀಪ್ ಟ್ರೋಫಿ ಫೈನಲ್‌: ದ್ವಿಶತಕ ಸಿಡಿಸಿ ಇತಿಹಾಸ ಸೃಷ್ಟಿಸಿದ ಇಶಾನ್ ಕಿಶನ್