ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಸಿದ್ಧತೆಗಳು ಆರಂಭವಾಗಿರುವ ಬೆನ್ನಲ್ಲೇ, ಸೋಮವಾರ ಸಂಜೆ ಕೆ.ಆರ್. ಸರ್ಕಲ್ನಲ್ಲಿ ನಡೆದ ದಸರಾ ಆನೆಗಳ ಮೊದಲ ತೂಕದ ತಾಲೀಮು ವೇಳೆ ಸ್ಥಳೀಯರ ವಿಶಿಷ್ಟ ಸಂಪ್ರದಾಯವೊಂದು ಗಮನ ಸೆಳೆಯಿತು.
ದಸರಾ ಜಂಬೂಗಳು ತಾಲೀಮು ನಡೆಸುತ್ತಿದ್ದ ವೇಳೆ ಕೆಳಗೆ ಬಿದ್ದಿದ್ದ ತಾಜಾ ಆನೆ ಲದ್ದಿ (ಸಗಣೆ)ಯನ್ನು ಕೆಲವರು ಕಾಲಿನಿಂದ ತುಳಿದರೆ, ಇನ್ನು ಕೆಲವರು ಅದನ್ನು ಮುಟ್ಟುತ್ತಿರುವುದು ಕಂಡುಬಂದಿತು. ಸ್ಥಳೀಯರ ಪ್ರಕಾರ ಆನೆ ಸಗಣೆಗೆ ಔಷಧೀಯ ಹಾಗೂ ಗುಣಪಡಿಸುವ ಗುಣಗಳಿವೆ ಎಂಬುದು ಸ್ಥಳೀಯವಾಗಿ ಬಹಳ ಹಿಂದಿನಿಂದಲೂ ಇರುವ ನಂಬಿಕೆ ಎನ್ನಲಾಗಿದೆ.
ಇದೇ ನಂಬಿಕೆಯ ಹಿನ್ನೆಲೆಯಲ್ಲಿ ಕೆಲವರು ಆನೆ ಸಗಣೆಯನ್ನು ಮುಟ್ಟುವುದು ಅಥವಾ ಅದರ ಮೇಲೆ ಕಾಲಿಡುವುದನ್ನು ಮಾಡುತ್ತಾರೆ. ಕೆಲವರ ನಂಬಿಕೆಯ ಪ್ರಕಾರ, ಆನೆ ಸಗಣೆಯನ್ನು ಸ್ಪರ್ಶಿಸಿದರೆ ಆರೋಗ್ಯಕ್ಕೆ ಒಳಿತು ಹಾಗೂ ಶುಭಕರ ಎನ್ನಲಾಗಿದೆ.
ಆದರೆ ಆನೆ ಸಗಣೆಯನ್ನು ತುಳಿಯುವುದರಿಂದ ಅಥವಾ ಮುಟ್ಟುವುದರಿಂದ ಔಷಧೀಯ ಅಥವಾ ಗುಣಪಡಿಸುವ ಪ್ರಯೋಜನ ಸಿಗುತ್ತದೆ ಎಂಬುದಕ್ಕೆ ವೈಜ್ಞಾನಿಕವಾಗಿ ದೃಢಪಟ್ಟ ಯಾವುದೇ ಸಾಕ್ಷ್ಯವಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಲಕ್ಷಾಂತರ ಜನರ ಸಮೂಹ
ಅಂದಹಾಗೆ ದಸರಾ ಆನೆಗಳ ಮೊದಲ ತೂಕದ ತಾಲೀಮು ಅಂಗವಾಗಿ ಆನೆಗಳಿಗೆ ದಸರಾ ಮೆರವಣಿಗೆಯಲ್ಲಿ ಸಾಗಿಸುವ ತೂಕ ಮತ್ತು ಅದಕ್ಕೆ ಸಂಬಂಧಿಸಿದ ದಿನಚರಿಗೆ ಹಂತಹಂತವಾಗಿ ತರಬೇತಿ ನೀಡಲಾಗುತ್ತದೆ.
ಆನೆಗಳ ತಾಲೀಮನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯರು ಹಾಗೂ ಸಾರ್ವಜನಿಕರು ಕೆ.ಆರ್. ಸರ್ಕಲ್ನಲ್ಲಿ ಸೇರಿದ್ದರು. ಈ ವೇಳೆ ಕೆಲವರು ಆನೆಗಳ ಸಗಣೆಯನ್ನು ತುಳಿಯುತ್ತಿರುವ ದೃಶ್ಯವೂ ಕಂಡುಬಂದು ಎಲ್ಲರ ಗಮನ ಸೆಳೆಯಿತು.
ಮೈಸೂರು ದಸರಾ ಸಿದ್ಧತೆಯಲ್ಲಿ ಆನೆಗಳ ತೂಕದ ತಾಲೀಮು ಪ್ರಮುಖ ಭಾಗವಾಗಿದೆ. ಐತಿಹಾಸಿಕ ಜಂಬೂ ಸವಾರಿ ವೇಳೆ ವಿಶೇಷವಾಗಿ ತರಬೇತಿ ಪಡೆದ ದಸರಾ ಆನೆಗಳು ಪ್ರಮುಖ ಪಾತ್ರ ವಹಿಸುತ್ತವೆ.