ಖುಷಿ

ಸರಳ ಮದುವೆಗೂ ಅದ್ಧೂರಿ ಮದುವೆಗೂ ವ್ಯತ್ಯಾಸವೇನು?

ಶ್ರೀಧರ್ ಡಿ. ರಾಮಚಂದ್ರಪ್ಪ, ತುರುವನೂರು
= ಸರಳ ಮದುವೆಗೂ ಅದ್ಧೂರಿ ಮದುವೆಗೂ ವ್ಯತ್ಯಾಸವೇನು?
    ಸರಳ ಮದುವೇಲಿ ಪುರೋಹಿತರಿಗೆ ದಕ್ಷಿಣೆ ಕೊಟ್ಟರೆ ಸಾಕು.
    ಅದ್ಧೂರಿ ಮದುವೇಲಿ ವರದಕ್ಷಿಣೆ ಕೊಡ್ಬೇಕು!

    ಜೆ.ಆರ್. ಆದಿನಾರಾಯಣ ಮುನಿ, ಶ್ರೀಕೋಡಿಹಳ್ಳಿಮಠ
= ಹಣ ಸುಖ ನೀಡುತ್ತದೋ ಅಥವಾ ಆನಂದವನ್ನೋ?
    ಸುಖ ನೀಡುತ್ತೆ ಅಂತ ತಿಳ್ಕೊಂಡು ಇರುವ ಆನಂದವನ್ನೂ ಕಳ್ಕೋತ್ತೀವಿ!

    ಕಬ್ಬಳ್ಳಿ ಟಿ. ಚನ್ನಬಸಪ್ಪ, ಯಲಹಂಕ
= ಮಂಡೂರಿನಲ್ಲಿ ರಾತ್ರಿ ವಾಸ್ತವ್ಯಕ್ಕೆ ಸಿದ್ದರಾಮಯ್ಯ ನಿಮ್ಮನ್ನು ಆಹ್ವಾನಿಸಿದರೆ ಏನು ಮಾಡುತ್ತೀರಿ?
    ಕಟ್ಟೆ ಸತ್ಯನಾರಾಯಣ 'ಕಡಿದು ಕಟ್ಟೆ ಹಾಕಿದ್ದು' ಏನು ಅಂತ ಕೇಳ್ತೀನಿ!

    ಆರ್.ಸಿ. ಪರಶುರಾಮ್, ಶಿಕಾರಿಪುರ
= ಕನ್ನಡ ಮಾಧ್ಯಮ ಬೇಕೆಂದು ಹೋರಾಡುವವರ ಮಕ್ಕಳು, ಮೊಮ್ಮಕ್ಕಳೇ ಆಂಗ್ಲಮಾಧ್ಯಮದಲ್ಲಿ ಓದುತ್ತಿದ್ದಾರಲ್ಲ?
    ಅವರಿಗೆ ಕನ್ನಡದಲ್ಲಿ ಓದಿದ್ರೆ ಕನ್ನಡನಾಡಲ್ಲೇ ಕೆಲಸ ಸಿಗೊಲ್ಲ ಅಂತ ಗೊತ್ತು!

    ಸ್ವಾಮಿ ನಿರ್ಮಲಾ, ಉಡಿಗಾಲ
= ಹೆಂಗಸರು ಜಗಳವಾಡುತ್ತಿದ್ದಾಗ ನೆಟಿಕೆ ಮುರಿಯುವುದೇಕೆ?
    ಬೇರೆಯವರ ಕಾಲು ಕೈ ಮುರಿಯಲು ಆಗೋಲ್ವಲ್ಲ!

    ಕೆ.ಟಿ. ರುದ್ರಪ್ಪ, ಚಿತ್ರದುರ್ಗ
= ಮದುವೆ ಆದ ಮೊದಲ ವರ್ಷ ಆಷಾಡ ಮಾಸದಲ್ಲಿ ಅತ್ತೆ ಸೊಸೆ ಒಟ್ಟಿಗೆ ಇರಬಾರದಂತೆ ಏಕೆ?
    ಮೊದಲನೇ ವರ್ಷ ಜಗಳ ಕಡಿಮೆ ಇರಲಿ ಅಂತ!

    ಬರ್ಕ್‌ಲಿ ರಮೇಶ್, ಕಿರಗಂದೂರು, ಮಂಡ್ಯ
= ಹದಿಹರೆಯದಲ್ಲಿ ಪ್ರೀತಿಸಿದವನಿಗೆ ಪ್ರೇಮಿ ಅಂತಾರೆ. ವಯಸ್ಸಾದ ಮೇಲೆ ಪ್ರೀತಿಸಿದವನಿಗೆ ಏನಂತಾರೆ?
    ಮುದಿಹರೆಯದವನು ಅಂತಾರೆ!


-ಎಸ್.ವಿ. ಪದ್ಮನಾಭ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ, ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ 'ಸುಪ್ರೀಂ' ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

WPL 2026 auction: ಈ ಬಾರಿಯ 'ಮೋಸ್ಟ್ ಡಿಮ್ಯಾಂಡ್' ಆಟಗಾರ್ತಿ ಯಾರು?

SCROLL FOR NEXT