ಖುಷಿ

ಸರಳ ಮದುವೆಗೂ ಅದ್ಧೂರಿ ಮದುವೆಗೂ ವ್ಯತ್ಯಾಸವೇನು?

ಶ್ರೀಧರ್ ಡಿ. ರಾಮಚಂದ್ರಪ್ಪ, ತುರುವನೂರು
= ಸರಳ ಮದುವೆಗೂ ಅದ್ಧೂರಿ ಮದುವೆಗೂ ವ್ಯತ್ಯಾಸವೇನು?
    ಸರಳ ಮದುವೇಲಿ ಪುರೋಹಿತರಿಗೆ ದಕ್ಷಿಣೆ ಕೊಟ್ಟರೆ ಸಾಕು.
    ಅದ್ಧೂರಿ ಮದುವೇಲಿ ವರದಕ್ಷಿಣೆ ಕೊಡ್ಬೇಕು!

    ಜೆ.ಆರ್. ಆದಿನಾರಾಯಣ ಮುನಿ, ಶ್ರೀಕೋಡಿಹಳ್ಳಿಮಠ
= ಹಣ ಸುಖ ನೀಡುತ್ತದೋ ಅಥವಾ ಆನಂದವನ್ನೋ?
    ಸುಖ ನೀಡುತ್ತೆ ಅಂತ ತಿಳ್ಕೊಂಡು ಇರುವ ಆನಂದವನ್ನೂ ಕಳ್ಕೋತ್ತೀವಿ!

    ಕಬ್ಬಳ್ಳಿ ಟಿ. ಚನ್ನಬಸಪ್ಪ, ಯಲಹಂಕ
= ಮಂಡೂರಿನಲ್ಲಿ ರಾತ್ರಿ ವಾಸ್ತವ್ಯಕ್ಕೆ ಸಿದ್ದರಾಮಯ್ಯ ನಿಮ್ಮನ್ನು ಆಹ್ವಾನಿಸಿದರೆ ಏನು ಮಾಡುತ್ತೀರಿ?
    ಕಟ್ಟೆ ಸತ್ಯನಾರಾಯಣ 'ಕಡಿದು ಕಟ್ಟೆ ಹಾಕಿದ್ದು' ಏನು ಅಂತ ಕೇಳ್ತೀನಿ!

    ಆರ್.ಸಿ. ಪರಶುರಾಮ್, ಶಿಕಾರಿಪುರ
= ಕನ್ನಡ ಮಾಧ್ಯಮ ಬೇಕೆಂದು ಹೋರಾಡುವವರ ಮಕ್ಕಳು, ಮೊಮ್ಮಕ್ಕಳೇ ಆಂಗ್ಲಮಾಧ್ಯಮದಲ್ಲಿ ಓದುತ್ತಿದ್ದಾರಲ್ಲ?
    ಅವರಿಗೆ ಕನ್ನಡದಲ್ಲಿ ಓದಿದ್ರೆ ಕನ್ನಡನಾಡಲ್ಲೇ ಕೆಲಸ ಸಿಗೊಲ್ಲ ಅಂತ ಗೊತ್ತು!

    ಸ್ವಾಮಿ ನಿರ್ಮಲಾ, ಉಡಿಗಾಲ
= ಹೆಂಗಸರು ಜಗಳವಾಡುತ್ತಿದ್ದಾಗ ನೆಟಿಕೆ ಮುರಿಯುವುದೇಕೆ?
    ಬೇರೆಯವರ ಕಾಲು ಕೈ ಮುರಿಯಲು ಆಗೋಲ್ವಲ್ಲ!

    ಕೆ.ಟಿ. ರುದ್ರಪ್ಪ, ಚಿತ್ರದುರ್ಗ
= ಮದುವೆ ಆದ ಮೊದಲ ವರ್ಷ ಆಷಾಡ ಮಾಸದಲ್ಲಿ ಅತ್ತೆ ಸೊಸೆ ಒಟ್ಟಿಗೆ ಇರಬಾರದಂತೆ ಏಕೆ?
    ಮೊದಲನೇ ವರ್ಷ ಜಗಳ ಕಡಿಮೆ ಇರಲಿ ಅಂತ!

    ಬರ್ಕ್‌ಲಿ ರಮೇಶ್, ಕಿರಗಂದೂರು, ಮಂಡ್ಯ
= ಹದಿಹರೆಯದಲ್ಲಿ ಪ್ರೀತಿಸಿದವನಿಗೆ ಪ್ರೇಮಿ ಅಂತಾರೆ. ವಯಸ್ಸಾದ ಮೇಲೆ ಪ್ರೀತಿಸಿದವನಿಗೆ ಏನಂತಾರೆ?
    ಮುದಿಹರೆಯದವನು ಅಂತಾರೆ!


-ಎಸ್.ವಿ. ಪದ್ಮನಾಭ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

SCROLL FOR NEXT