ಸಾಂದರ್ಭಿಕ ಚಿತ್ರ 
ಜೀವನಶೈಲಿ

ಹಣ್ಣು-ತರಕಾರಿಗಳ ಸೇವನೆ 2 ವಾರಗಳಲ್ಲಿ ಒತ್ತಡವನ್ನು ನಿಯಂತ್ರಿಸುತ್ತವೆ: ಅಧ್ಯಯನ

ಹಣ್ಣು-ತರಕಾರಿಗಳ ಸೇವನೆಯ ಉಪಯೋಗ ಈಗಾಗಲೇ ನೀವು ಹಲವು ಕಡೆಗಳಲ್ಲಿ ಕೇಳಿ, ಓದಿ ತಿಳಿದುಕೊಂಡಿರಬಹುದು...

ಹಣ್ಣು-ತರಕಾರಿಗಳ ಸೇವನೆಯ ಉಪಯೋಗ ಈಗಾಗಲೇ ನೀವು ಹಲವು ಕಡೆಗಳಲ್ಲಿ ಕೇಳಿ, ಓದಿ ತಿಳಿದುಕೊಂಡಿರಬಹುದು. ಕೇವಲ ಆರೋಗ್ಯದ ದೃಷ್ಟಿಯಿಂದ ಮಾತ್ರವಲ್ಲದೆ ಮಾನಸಿಕವಾಗಿಯೂ ಹಣ್ಣು-ತರಕಾರಿಗಳಿಂದ ಉಪಯೋಗವಿದೆ ಎನ್ನುತ್ತಾರೆ ಸಂಶೋಧಕರು.
ಸಂಶೋಧಕರು ಹೇಳುವ ಪ್ರಕಾರ ಯಾವುದೇ ರಾಸಾಯನಿಕಗಳನ್ನು ಸಿಂಪಡಿಸದೆ, ಕೃತಕವಾಗಿ ಬೆಳೆಸದೆ ನೈಸರ್ಗಿಕವಾಗಿ ಬೆಳೆದ ಹಣ್ಣು-ತರಕಾರಿಗಳನ್ನು ತಿನ್ನುವುದರಿಂದ ಎರಡು ವಾರಗಳಲ್ಲಿ ಮನಸ್ಸಿನ ಒತ್ತಡ, ಗೊಂದಲ, ಆತಂಕ ಬಹುತೇಕ ಕಡಿಮೆಯಾಗುತ್ತದೆ.
ಒಟಾಗೊ ವಿಶ್ವವಿದ್ಯಾಲಯದ ಸಂಶೋಧಕರು 18ರಿಂದ 25 ವರ್ಷದೊಳಗಿನ 171 ಮಂದಿ ವಯಸ್ಕರನ್ನು ಸಂಶೋಧನೆ ಮಾಡಿ ಅವರ ಆಹಾರ ಪದ್ಧತಿ, ಡಯಟ್ ಅಭ್ಯಾಸಗಳ ಕುರಿತು ಅಧ್ಯಯನ ನಡೆಸಿ ತೀರ್ಮಾನಕ್ಕೆ ಬಂದಿದ್ದಾರೆ.
171 ಮಂದಿಯನ್ನು ಮೂರು ಗುಂಪುಗಳನ್ನಾಗಿ ವಿಭಜಿಸಿ ಅವರಲ್ಲಿ ಹಣ್ಣು, ತರಕಾರಿ ತಿನ್ನುವುದರಿಂದ ಉಂಟಾಗುವ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಅಧ್ಯಯನ ಮಾಡಿದ್ದಾರೆ.
15 ದಿನಗಳು ಕಳೆದ ನಂತರ ಕೆಲವರು ಮೊದಲಿನಂತೆಯೇ ತಿಂದರೆ, ಕೆಲವರು ಹೆಚ್ಚು ತಿನ್ನಲು ಅಪೇಕ್ಷೆ ಪಡುತ್ತಿದ್ದರು. ಮೂರನೇ ಗುಂಪಿನ ಸದಸ್ಯರಲ್ಲಿ ಮಾನಸಿಕ ಸ್ಥಿತಿಗತಿಯಲ್ಲಿ ಬಹಳ ಸುಧಾರಣೆ ಕಂಡುಬಂತು. 
ಅಧ್ಯಯನದ ಲೇಖಕಿ ಡಾ.ಟಮ್ಲಿನ್ ಕೊನ್ನರ್ ಹೇಳುವ ಪ್ರಕಾರ, ವಾರದ ಅಷ್ಟೂ ದಿನ ಏನೋ ತಿನ್ನುವ ಬದಲು ಹೆಚ್ಚೆಚ್ಚು ಹಣ್ಣು, ತರಕಾರಿ ಸೇವಿಸಬೇಕು ಎಂಬುದು ತಿಳಿಯಿತು ಎನ್ನುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

ನಾಳೆ ಜಗತ್ತಿನಾದ್ಯಂತ ಯಶ್ ನಟನೆಯ 'Toxic' ಚಿತ್ರ ಬಿಡುಗಡೆ; ಇಂದು ದಿಢೀರ್ ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ!

ಬೆಂಗಳೂರು: ಸಿಗ್ನಲ್‌ನಲ್ಲಿ ನಿಂತಿದ್ದ ಬೈಕ್‌ಗೆ ವೇಗವಾಗಿ ಬಂದ ಕಾರು ಡಿಕ್ಕಿ, ಹೇರ್ ಸ್ಟೈಲಿಸ್ಟ್ ಸಾವು; Video

BPSC ಪರೀಕ್ಷೆ ವಿವಾದ: ಬಿಹಾರ ಸಿಎಂ ನಿವಾಸದ ಬಳಿ ಬ್ಯಾರಿಕೇಡ್ ಮುರಿದ ವಿದ್ಯಾರ್ಥಿಗಳು, ಜಲಫಿರಂಗಿಗೆ ಜಗ್ಗದೆ ರೇನ್ ಡ್ಯಾನ್ಸ್ ಮಾಡಿ ಪ್ರತಿಭಟನೆ!

'ಕಾಂಗ್ರೆಸ್ ಸರ್ಕಾರದ ವೈಫಲ್ಯ' ವಿರೋಧಿಸಿ ಸೆಪ್ಟೆಂಬರ್ 1 ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿಗೆ BJP-JDS ಪಾದಯಾತ್ರೆ!