ಸಾಂದರ್ಭಿಕ ಚಿತ್ರ 
ಜೀವನಶೈಲಿ

ಹಣ್ಣು-ತರಕಾರಿಗಳ ಸೇವನೆ 2 ವಾರಗಳಲ್ಲಿ ಒತ್ತಡವನ್ನು ನಿಯಂತ್ರಿಸುತ್ತವೆ: ಅಧ್ಯಯನ

ಹಣ್ಣು-ತರಕಾರಿಗಳ ಸೇವನೆಯ ಉಪಯೋಗ ಈಗಾಗಲೇ ನೀವು ಹಲವು ಕಡೆಗಳಲ್ಲಿ ಕೇಳಿ, ಓದಿ ತಿಳಿದುಕೊಂಡಿರಬಹುದು...

ಹಣ್ಣು-ತರಕಾರಿಗಳ ಸೇವನೆಯ ಉಪಯೋಗ ಈಗಾಗಲೇ ನೀವು ಹಲವು ಕಡೆಗಳಲ್ಲಿ ಕೇಳಿ, ಓದಿ ತಿಳಿದುಕೊಂಡಿರಬಹುದು. ಕೇವಲ ಆರೋಗ್ಯದ ದೃಷ್ಟಿಯಿಂದ ಮಾತ್ರವಲ್ಲದೆ ಮಾನಸಿಕವಾಗಿಯೂ ಹಣ್ಣು-ತರಕಾರಿಗಳಿಂದ ಉಪಯೋಗವಿದೆ ಎನ್ನುತ್ತಾರೆ ಸಂಶೋಧಕರು.
ಸಂಶೋಧಕರು ಹೇಳುವ ಪ್ರಕಾರ ಯಾವುದೇ ರಾಸಾಯನಿಕಗಳನ್ನು ಸಿಂಪಡಿಸದೆ, ಕೃತಕವಾಗಿ ಬೆಳೆಸದೆ ನೈಸರ್ಗಿಕವಾಗಿ ಬೆಳೆದ ಹಣ್ಣು-ತರಕಾರಿಗಳನ್ನು ತಿನ್ನುವುದರಿಂದ ಎರಡು ವಾರಗಳಲ್ಲಿ ಮನಸ್ಸಿನ ಒತ್ತಡ, ಗೊಂದಲ, ಆತಂಕ ಬಹುತೇಕ ಕಡಿಮೆಯಾಗುತ್ತದೆ.
ಒಟಾಗೊ ವಿಶ್ವವಿದ್ಯಾಲಯದ ಸಂಶೋಧಕರು 18ರಿಂದ 25 ವರ್ಷದೊಳಗಿನ 171 ಮಂದಿ ವಯಸ್ಕರನ್ನು ಸಂಶೋಧನೆ ಮಾಡಿ ಅವರ ಆಹಾರ ಪದ್ಧತಿ, ಡಯಟ್ ಅಭ್ಯಾಸಗಳ ಕುರಿತು ಅಧ್ಯಯನ ನಡೆಸಿ ತೀರ್ಮಾನಕ್ಕೆ ಬಂದಿದ್ದಾರೆ.
171 ಮಂದಿಯನ್ನು ಮೂರು ಗುಂಪುಗಳನ್ನಾಗಿ ವಿಭಜಿಸಿ ಅವರಲ್ಲಿ ಹಣ್ಣು, ತರಕಾರಿ ತಿನ್ನುವುದರಿಂದ ಉಂಟಾಗುವ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಅಧ್ಯಯನ ಮಾಡಿದ್ದಾರೆ.
15 ದಿನಗಳು ಕಳೆದ ನಂತರ ಕೆಲವರು ಮೊದಲಿನಂತೆಯೇ ತಿಂದರೆ, ಕೆಲವರು ಹೆಚ್ಚು ತಿನ್ನಲು ಅಪೇಕ್ಷೆ ಪಡುತ್ತಿದ್ದರು. ಮೂರನೇ ಗುಂಪಿನ ಸದಸ್ಯರಲ್ಲಿ ಮಾನಸಿಕ ಸ್ಥಿತಿಗತಿಯಲ್ಲಿ ಬಹಳ ಸುಧಾರಣೆ ಕಂಡುಬಂತು. 
ಅಧ್ಯಯನದ ಲೇಖಕಿ ಡಾ.ಟಮ್ಲಿನ್ ಕೊನ್ನರ್ ಹೇಳುವ ಪ್ರಕಾರ, ವಾರದ ಅಷ್ಟೂ ದಿನ ಏನೋ ತಿನ್ನುವ ಬದಲು ಹೆಚ್ಚೆಚ್ಚು ಹಣ್ಣು, ತರಕಾರಿ ಸೇವಿಸಬೇಕು ಎಂಬುದು ತಿಳಿಯಿತು ಎನ್ನುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

SCROLL FOR NEXT