ಸಾಂದರ್ಭಿಕ ಚಿತ್ರ 
ಜೀವನಶೈಲಿ

ಅನಿಯಮಿತ ಕೆಲಸದ ಸಮಯ ಪುರುಷರಲ್ಲಿ ಲೈಂಗಿಕ ಸಾಮರ್ಥ್ಯವನ್ನು ತಗ್ಗಿಸಬಹುದು

ಅನಿಯಮಿತ ದುಡಿಮೆ ಪುರುಷರಲ್ಲಿ ಲೈಂಗಿಕ ಕ್ರಿಯೆಯ ಶಕ್ತಿಯನ್ನು ಕುಂಠಿತಗೊಳಿಸಿ...

ನವದೆಹಲಿ: ಅನಿಯಮಿತ ದುಡಿಮೆ ಪುರುಷರಲ್ಲಿ ಲೈಂಗಿಕ ಕ್ರಿಯೆಯ ಶಕ್ತಿಯನ್ನು ಕುಂಠಿತಗೊಳಿಸಿ ಮಕ್ಕಳಾಗುವ ಅವಕಾಶವನ್ನು ಕಡಿಮೆ ಮಾಡುತ್ತದೆ.
ಹೆಚ್ಚಿನ ದುಡಿಮೆಯಿಂದ ನಿದ್ರಾಭಂಗವಾಗುತ್ತದೆ. ಇದರಿಂದ ಅನೇಕ ಖಾಯಿಲೆಗಳು ಕೂಡ ಬರುತ್ತದೆ ಎನ್ನುತ್ತದೆ ಅಧ್ಯಯನ. ಸ್ಥೂಲಕಾಯ, ಹೃದ್ರೋಗ ಸಮಸ್ಯೆಯಂತಹ ಖಾಯಿಲೆಗಳು ತಲೆದೋರುತ್ತವೆ.
ಒಬ್ಬ ಮನುಷ್ಯನಿಗೆ ದಿನಕ್ಕೆ ಸರಾಸರಿ 7ರಿಂದ 8 ಗಂಟೆಯ ನಿದ್ದೆಯ ಅವಶ್ಯಕತೆಯಿದೆ. ಇಂದಿನ ಒತ್ತಡದ ವೇಗದ ಜೀವನಶೈಲಿಯಲ್ಲಿ ಅನಿಯಮಿತ ಕೆಲಸದ ಸಮಯಗಳು, ಹೆಚ್ಚಿನ ಅವಧಿಯ ದುಡಿಮೆ ಮತ್ತು ಇತರ ಅಂಶಗಳು ನಿದ್ದೆ ಮತ್ತು ವಿಶ್ರಾಂತಿಯನ್ನು ಕಡಿಮೆ ಮಾಡುತ್ತದೆ.
ದೆಹಲಿಯ ಐವಿಎಫ್ & ಫೋರ್ಟಿಸ್ ಲಾ ಫೆಮ್ಮ್ ಆಸ್ಪತ್ರೆಯ ನಿರ್ದೇಶಕ ಡಾ.ಹೃಷಿಕೇಶ್ ಡಿ ಪೈ, ಶಿಫ್ಟ್ ಗಳಲ್ಲಿ ಕೆಲಸ ಮಾಡುವವರಿಗೆ ಇಂತಹ ಆರೋಗ್ಯ ಸಮಸ್ಯೆಗಳು ತೀವ್ರವಾಗಿ ಕಾಡುತ್ತವೆ ಎಂದು ಹೇಳುತ್ತಾರೆ.
ಕೆಲಸದ ಶೈಲಿ ಉದ್ಯೋಗಿಗಳ ಆರೋಗ್ಯ, ಅವರ ನಿದ್ದೆ, ಆಹಾರ ಸೇವನೆ ಮೇಲೆ ಕೂಡ ಪರಿಣಾಮ ಬೀರುತ್ತದೆ.
ನಿದ್ದೆಯ ಕೊರತೆಯಿಂದ ಮೂತ್ರದ ಸಮಸ್ಯೆ, ಸೋಂಕು ಉಂಟಾಗುವ ಸಾಧ್ಯತೆಯಿದೆ.ಅನಿಯಮಿತ ಜೀವನಶೈಲಿಯಿಂದ ಪುರುಷರಲ್ಲಿ  ಟೆಸ್ಟೋಸ್ಟೆರಾನ್ ಮಟ್ಟ ಕಡಿಮೆಯಾಗುತ್ತದೆ.
ಟೆಸ್ಟಾಸ್ಟೆರಾನ್ ಹಾರ್ಮೋನ್ ಗಳು ಪುರುಷರಲ್ಲಿ ಲೈಂಗಿಕ ಆಸಕ್ತಿಯನ್ನು ಪ್ರಚೋದಿಸಲು ಇರುವ ಹಾರ್ಮೋನ್ ಆಗಿದೆ. ಈ ಹಾರ್ಮೋನ್ ನ ಮಟ್ಟ ಕಡಿಮೆಯಾದರೆ ಕಡಿಮೆ ಗುಣಮಟ್ಟದ ಸೆಮೆನ್ ಉತ್ಪಾದನೆಯಾಗುತ್ತದೆ ಮತ್ತು ಮುಂದೆ ಮಕ್ಕಳು ಹುಟ್ಟಲು ತೊಂದರೆಯಾಗಬಹುದು.
ಪುರುಷರ ಆರೋಗ್ಯದಲ್ಲಿ ಪೌಷ್ಟಿಕಾಂಶದ ಕೊರತೆ ಮತ್ತು ಜೀವನ ಶೈಲಿಯಿಂದ, ಲಿಂಗ-ಬಾಗುವ ರಾಸಾಯನಿಕಗಳು ಪರಿಸರದಲ್ಲಿ ಇರುವುದರಿಂದ ಇತ್ತೀಚಿನ ವರ್ಷಗಳಲ್ಲಿ ಪುರುಷರಲ್ಲಿ ಲೈಂಗಿಕ ಫಲವತ್ತತೆಯ ಮಟ್ಟ ಕಡಿಮೆಯಾಗಿದೆ.
ಅತಿ ಹೆಚ್ಚು ಮತ್ತು ಅತಿ ಕಡಿಮೆ ನಿದ್ದೆ ಮಾಡುವುದರಿಂದ ದೇಹದ ಸಿರ್ಕಾಡಿಯನ್ ರಿದಮ್ ಮೇಲೆ ಪರಿಣಾಮ ಬೀರುತ್ತದೆ. ಸಿರ್ಕಾಡಿಯನ್ ರಿದಮ್ ಸ್ಲೀಟ್ ಹಾರ್ಮೋನ್ ಮೆಲಟೋನಿನ್ ಮತ್ತು ಕಾರ್ಟಿಸೋಲ್ನ ಉತ್ಪಾದನೆಯನ್ನು ನಿಯಂತ್ರಿಸುತ್ತದೆ, ಇದು ಒತ್ತಡವನ್ನು ನಿಯಂತ್ರಿಸುವ ಹಾರ್ಮೋನ್ ಆಗಿದೆ.
ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ಕೆಲವು ಟಿಪ್ಸ್ ಗಳು: 
1. ಸತತವಾಗಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದನ್ನು ಆದಷ್ಟು ತಪ್ಪಿಸಿಕೊಳ್ಳಿ.
2. ಆಗಾಗ ಬದಲಾಗುತ್ತಿರುವ ಶಿಫ್ಟ್ ಗಳನ್ನು ಕೂಡ ತಪ್ಪಿಸಿಕೊಳ್ಳಿ.
3. ನಿಮ್ಮ ಕೆಲಸದ ಸ್ಥಳದಲ್ಲಿ ಸಾಕಷ್ಟು ಗಾಳಿ, ಬೆಳಕು ಬರುತ್ತಿರಲಿ.
4. ಮನೆಯಲ್ಲಿ ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳಿ.
5. ಪ್ರಯಾಣವನ್ನು ಆದಷ್ಟು ಕಡಿಮೆ ಮಾಡಿ.
6. ಪ್ರತಿದಿನ ಸರಿಯಾದ ಸಮಯಕ್ಕೆ ಮಲಗುವುದು, ಸರಿಯಾದ ಸಮಯಕ್ಕೆ ಏಳುವುದನ್ನು ಅಭ್ಯಾಸ ಮಾಡಿಕೊಳ್ಳಿ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಕುರ್ಚಿ ಕಸರತ್ತು: ಸಮಸ್ಯೆಗೆ ಪರಿಹಾರ ಇದ್ದೇ ಇರುತ್ತದೆ, ರಾಹುಲ್-ಸೋನಿಯಾ ಜೊತೆ ಚರ್ಚಿಸಿ ಗೊಂದಲ ಬಗೆಹರಿಸುವೆ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ: ಸಿದ್ದುಗೆ ಪರೋಕ್ಷ ಟಾಂಗ್ ಕೊಟ್ಟರೇ ಡಿಕೆಶಿ..?

ಮೊದಲು ಪರಮೇಶ್ವರ್ ಕೂಲಿ ಚುಕ್ತಾ ಮಾಡಲಿ: ನಂತರ ವಿಧಾನಸಭೆ ವಿಸರ್ಜಿಸಿ ಡಿಕೆಶಿ ನೇತೃತ್ವದಲ್ಲೇ ಚುನಾವಣೆಗೆ ಹೋಗೋಣ!

ನಾವು ಬಿಟ್ಟರು ಧರ್ಮ, ಜಾತಿ ನಮ್ಮನ್ನು ಬಿಡುವುದಿಲ್ಲ: ಒಕ್ಕಲಿಗನಾಗಿ ಹುಟ್ಟಿದ್ದೇನೆ; ಅಶೋಕಣ್ಣನಿಗೆ ಬ್ಯಾಡ್ಜ್ ಕಳಿಸುತ್ತೇನೆ ಹಾಕಿಕೊಳ್ಳಲಿ; DKS

ಅಮೆರಿಕ ಶಕ್ತಿ ಕೇಂದ್ರ ಶ್ವೇತಭವನ ಬಳಿ ಇಬ್ಬರು ಯುಎಸ್ ರಾಷ್ಟ್ರೀಯ ಗಾರ್ಡ್ ಗಳ ಮೇಲೆ ಗುಂಡಿನ ದಾಳಿ: ಶಂಕಿತನ ಗುರುತು ಪತ್ತೆ

SCROLL FOR NEXT