ಸಾಂದರ್ಭಿಕ ಚಿತ್ರ 
ಜೀವನಶೈಲಿ

ನಿಮ್ಮ ದೇಹದ ಬಗ್ಗೆ ನಿಮಗೇ ಆತ್ಮವಿಶ್ವಾಸದ ಕೊರತೆಯೇ? ಹಾಗಾದರೆ ಪತ್ರ ಬರೆಯಿರಿ!

ಹೆಣ್ಣು ಮಕ್ಕಳಿಗೆ ತಮ್ಮ ಶರೀರದ ಬಗ್ಗೆ ಕಾಳಜಿ ಮೂಡುವುದು ಸಹಜ. ಮದುವೆಯಾಗಿ ...

ವಾಷಿಂಗ್ಟನ್: ಹೆಣ್ಣು ಮಕ್ಕಳಿಗೆ ತಮ್ಮ ಶರೀರದ ಬಗ್ಗೆ ಕಾಳಜಿ ಮೂಡುವುದು ಸಹಜ. ಮದುವೆಯಾಗಿ ಮಕ್ಕಳಾದ ಮೇಲಂತೂ ಅದು ಇನ್ನೂ ಹೆಚ್ಚಾಗುತ್ತದೆ. ತಮ್ಮ ಶರೀರದ ಸೌಂದರ್ಯದ ಬಗ್ಗೆ ಚಿಂತೆ ಕಾಡಲು ಶುರುವಾಗುತ್ತದೆ. ಆತ್ಮವಿಶ್ವಾಸದ ಕೊರತೆ ಉಂಟಾಗುತ್ತದೆ.

ಈ ತೊಂದರೆಯನ್ನು ನಿವಾರಿಸಲು ಮಹಿಳೆಯರು ತಮಗನಿಸಿದ್ದನ್ನು ಕಾಗದದಲ್ಲಿ ಬರೆಯುವ ಅಭ್ಯಾಸ ಬೆಳೆಸಿಕೊಂಡರೆ ಒಳ್ಳೆಯದು. ತಮ್ಮ ಶರೀರದ ಬಗ್ಗೆ ಆತ್ಮವಿಶ್ವಾಸದ ಕೊರತೆಯುಂಟಾದರೆ ಮಹಿಳೆಯರು ಬರೆಯುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಶರೀರದ ಬಗ್ಗೆ ತಮ್ಮ ಬಗ್ಗೆ ಮಹಿಳೆಯರಿಗೆ ಕೀಳರಿಮೆ ಉಂಟಾದರೆ ಮಾನಸಿಕ ಒತ್ತಡ ಮತ್ತು ತಿನ್ನುವ ಅಭ್ಯಾಸದಲ್ಲಿ ವ್ಯತ್ಯಾಸವಾಗುತ್ತದೆ.

ಬ್ಯೂಟಿ ಆಫ್ ಸಿಕ್ ಎಂಬ ಲೇಖನದ ಲೇಖಕ ಎಂಗೆಲ್ಮ್ ಕಾಲೇಜಿಗೆ ಹೋಗುವ ಯುವತಿಯರಲ್ಲಿ ಬರವಣಿಗೆಯಿಂದ ಅವರಲ್ಲಿನ ಸಮಸ್ಯೆಗಳನ್ನು ಹೇಗೆ ಹೋಗಲಾಡಿಸಬಹುದು ಎಂದು ಕಂಡುಹಿಡಿದಿದ್ದಾರೆ.

ಮೊದಲೆರಡು ಅಧ್ಯಯನಗಳಲ್ಲಿ ಮಹಿಳೆಯರು ತಮಗಾಗಿ 15 ನಿಮಿಷ ಮೀಸಲಿಟ್ಟು ಏನಾದರೂ ಬರೆದರೆ ಮತ್ತು ಅದನ್ನು ಪರಾಮರ್ಶಿಸಿದರೆ ಮಹಿಳೆಯರು ತಮ್ಮ ಶರೀರದ ಬಗ್ಗೆ ಇರುವ ವಿಶ್ವಾಸದ ಕೊರತೆಯನ್ನು ಕನಿಷ್ಠ ಅಲ್ಪಾವಧಿಗಾದರೂ ಹೋಗಲಾಡಿಸಬಹುದು ಎನ್ನುತ್ತಾರೆ.

ಪತ್ರ ಬರೆಯುವುದರಿಂದ ಮಹಿಳೆಯರಲ್ಲಿ ಸ್ವಯಂ ಸಹಾನುಭೂತಿ ಕಂಡುಬರುತ್ತದೆ. ಮೂಲ ಸ್ವಯಂ ಸಹಾನುಭೂತಿ ಪತ್ರದ ಬರವಣಿಗೆ ಮತ್ತು ಇನ್ನೊಂದು ಸ್ವಯಂ ಸಹಾನುಭೂತಿ ಪತ್ರ ನೇರವಾಗಿ ನಮ್ಮ ಶರೀರದ ಮೇಲೆ ಪ್ರಭಾವ ಬೀರುತ್ತದೆ.

ಸಂಶೋಧಕರು ತಮ್ಮ ಅಂತಿಮ ಅಧ್ಯಯನದಲ್ಲಿ ಆನ್ ಲೈನ್ ಮೂಲಕ ನಿಧಾನವಾಗಿ ಹಾಗೂ ನಂತರ ವೇಗವಾಗಿ ಬರೆಸಿ ನೋಡಿದಾಗ ಮಹಿಳೆಯರು ಹೆಚ್ಚೆಚ್ಚು ಆಸಕ್ತಿಯಿಂದ ಔಪಚಾರಿಕವಾಗಿ ಪತ್ರ ಬರೆಯುವುದನ್ನು ನೋಡಿದ್ದಾರೆ. ಸಂಶೋಧಕರು ಇದೀಗ ವೆಬ್ ಸೈಟ್ ವೊಂದನ್ನು ತಯಾರಿಸಲು ನಿರ್ಧರಿಸಿದ್ದು, ಇದರಲ್ಲಿ ಮಹಿಳೆಯರು ತಮ್ಮ ಶರೀರದ ಬಗ್ಗೆ ಪತ್ರ ಬರೆಯಬಹುದು.

ಸೈಕಾಲಜಿ ಆಫ್ ವುಮೆನ್ ಕ್ವಾರ್ಟರ್ಲಿ ಎಂಬ ಪತ್ರಿಕೆಯಲ್ಲಿ ಅಧ್ಯಯನ ಪ್ರಕಟಗೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT