ಜೈಲುಪಾಲಾದ ಸಹರಾ ಸಂಸ್ಥೆಯ ಒಡೆಯ 
ಹಿನ್ನೋಟ 2014

ಜೈಲುಪಾಲಾದ ಸಹರಾ ಸಂಸ್ಥೆಯ ಒಡೆಯ

ಒಂದು ಕಾಲದ ಭಾರತದ ದೈತ್ಯ ವಾಣಿಜ್ಯೋಧ್ಯಮಿ ಎನಿಸಿಕೊಂಡಿದ್ದ ಸಹರಾ ಸಂಸ್ಥೆಯ ಒಡೆಯ ಸುಬ್ರತೋರಾಯ್, ಷೇರುದಾರರ ಹಣ ನೀಡಲಿಲ್ಲವೆಂದು ಜೈಲು ಪಾಲಾದದ್ದು ಕೂಡ ಇದೇ 2014ರಲ್ಲಿ. ಷೇರುದಾರರ ಸುಮಾರು 20 ಸಾವಿರ ಕೋಟಿ ಹಣವನ್ನು ನೀಡದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಮಾರ್ಚ್ 4ರಂದು ಸುಬ್ರತೋ ರಾಯ್‌ರನ್ನು ಬಂಧಿಸಲಾಗಿತ್ತು. ಅಲ್ಲದೆ ಸಹರಾ ಸಂಸ್ಥೆಯ ಎಲ್ಲ ಷೇರು ವ್ಯವಹಾರಗಳಿಗೆ ಸೆಬಿ ನಿರ್ಬಂಧ ಹೇರಿತ್ತು. ಪ್ರಮುಖ ಷೇರು ಸಂಸ್ಥೆಯ ಪಟ್ಟಿಯಲ್ಲಿ ಪ್ರಮುಖ ಸ್ಥಾನಹೊಂದಿದ್ದ ಸಹರಾ ಸೆಬಿ ನಿರ್ಬಂಧ ಹೇರಿದ ಒಂದೇ ದಿನದಲ್ಲಿ ನೆಲಕಚ್ಚಿತು.

ಪ್ರಸ್ತುತ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ 10 ಸಾವಿರ ಕೋಟಿ ರು.ಗಳ ಭದ್ರತಾ ಠೇವಣಿ ಇಟ್ಟು ಜಾಮೀನು ಪಡೆಯುವಂತೆ ಸೂಚಿಸಿತ್ತು. ಈ ಪೈಕಿ 2.500 ಕೋಟಿ ರು.ಗಳನ್ನು ತುರ್ತುಗಿ ಸಲ್ಲಿಸಿ, ಮತ್ತೊಂದು 2.500 ಕೋಟಿ ರು.ಗಳನ್ನು 21 ದಿನದಲ್ಲಿ ಸಲ್ಲಿಕೆ ಮಾಡುವಂತೆ ಸೂಚಿಸಿತ್ತು. ಸತತ ಪ್ರಯತ್ನದ ಬಳಿಕ ಸಹರಾ ಸಂಸ್ಥೆ ತಾನು 10 ಸಾವಿರ ಕೋಟಿ ರುಗಳನ್ನು ಸಲ್ಲಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ನಲ್ಲಿ ಆಲವತ್ತುಕೊಂಡಿದೆ. ಪ್ರಕರಣದ ವಿಚಾರಣೆ ಪ್ರಗತಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಸುಪ್ರೀಂಕೋರ್ಟ್ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT