ಹಿಟ್ ಅಂಡ್ ರನ್ ಪ್ರಕರಣದ ವಿಚಾರಣೆ ವೇಳೆ ನಟ ಸಲ್ಮಾನ್ ಖಾನ್ 
ಹಿನ್ನೋಟ 2015

ಹಿಟ್ ಅಂಡ್ ರನ್ ಪ್ರಕರಣ ಖುಲಾಸೆಯಾದ ನಟ ಸಲ್ಮಾನ್ ಖಾನ್

2015 ವರ್ಷ ಯಾರಿಗೆ ಎಷ್ಟು ಖುಷಿ ನೀಡಿದೆಯೋ ತಿಳಿದಿಲ್ಲ. ಆದರೆ ಬಾಲಿವುಡ್ ನ ಕೆಲ ನಿರ್ಮಾಪಕರಿಗೆ ಮತ್ತು ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಮಾತ್ರ ಭಾರಿ ಖುಷಿ ನೀಡಿದೆ. ಏಕೆಂದರೆ ದಶಕದಿಂದ ನಟ ಸಲ್ಮಾನ್...

2015 ವರ್ಷ ಯಾರಿಗೆ ಎಷ್ಟು ಖುಷಿ ನೀಡಿದೆಯೋ ತಿಳಿದಿಲ್ಲ. ಆದರೆ ಬಾಲಿವುಡ್ ನ ಕೆಲ ನಿರ್ಮಾಪಕರಿಗೆ ಮತ್ತು ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಮಾತ್ರ ಭಾರಿ ಖುಷಿ ನೀಡಿದೆ. ಏಕೆಂದರೆ  ದಶಕದಿಂದ ನಟ ಸಲ್ಮಾನ್ ಖಾನ್ ರ ಬೆನ್ನು ಬಿಡದೇ ಅಂಟಿಕೊಂಡಿದ್ದ ಹಿಟ್ ಅಂಡ್ ರನ್ ಪ್ರಕರಣಕ್ಕೆ ಬಾಂಬೇ ಹೈಕೋರ್ಟ್ ತಾರ್ಕಿಕವಾಗಿ ಅಂತ್ಯವಾಡಿದೆ.

ಈ ಹಿಂದೆ ಮುಂಬೈ ಸೆಷನ್ಸ್ ನ್ಯಾಯಾಲಯ ನೀಡಿದ್ದ 5 ವರ್ಷಗಳ ಸಜೆಯನ್ನು ಅಮಾನತು ಮಾಡಿದ ಬಾಂಬೆ ಹೈಕೋರ್ಟ್ ಪ್ರಕರಣದಿಂದ ನಟ ಸಲ್ಮಾನ್ ಖಾನ್ ರನ್ನು ಖುಲಾಸೆಗೊಳಿಸಿದೆ.  ಆದರೆ ಈ ವೇಳೆ ಪ್ರಾಸಿಕ್ಯೂಷನ್ ನನ್ನು ತೀವ್ರ ತರಾಟೆಗೆ ತೆಗೆದುಕೊಂಡ ನ್ಯಾಯಾಲಯ ಸಲ್ಮಾನ್ ಅಪರಾಧಿ ಎಂದು ಸಾಬೀತು ಪಡಿಸುವಲ್ಲಿ ಅದು ವಿಫಲವಾಗಿದೆ. ನ್ಯಾಯಾಲಯಕ್ಕೆ ಸೂಕ್ತ  ಸಾಕ್ಷ್ಯಾಧಾರಗಳನ್ನು ಒದಗಿಸಿಲ್ಲ ಎಂದು ಹೈಕೋರ್ಟ್ ಕಿಡಿ ಕಾರಿತ್ತು. ಹೀಗಾಗಿಯೇ ಪೀಠ ಸಲ್ಮಾನ್ ಖಾನ್ ನನ್ನು ನಿರಪರಾಧಿ ಎಂದು ಘೋಷಣೆ ಮಾಡಿದೆ ಎಂದು ತನ್ನ ತೀರ್ಪನ್ನು  ಸಮರ್ಥಿಸಿಕೊಂಡಿತು.

ಅಲ್ಲದೆ ಪ್ರಕರಣ ಸಂಬಂಧ ಪೊಲೀಸರು ನೀಡಿದ ಸಾಕ್ಷ್ಯಾಧಾರಗಳಾದ ರಕ್ತದ ಮಾದರಿ, ಅಪಘಾತದ ವೇಳೆ ಕಾರು ಚಾಲನೆ ಮಾಡುತ್ತಿದ್ದೆ ಎಂದು ಹೇಳಿಕೊಂಡಿದ್ದ ಚಾಲಕನ ದ್ವಂದ್ವ ಹೇಳಿಕೆ ಮತ್ತು  ಅಂದು ಸಲ್ಮಾನ್ ಖಾನ್ ಅವರ ಬಾಡಿಗಾರ್ಡ್ ಆಗಿದ್ದ ರವೀಂದ್ರ ಪಾಟಿಲ್‌ ನ ಹೇಳಿಕೆಗಳು ಆರೋಪವನ್ನು ಪುಷ್ಠೀಕರಿಸುತ್ತಿಲ್ಲ ಎಂದು ನ್ಯಾಯಾಧೀಶರಾದ  ಜೋಷಿ ಅಭಿಪ್ರಾಯಪಟ್ಟಿದ್ದರು.

ನ್ಯಾಯಾಲಯದ ತೀರ್ಪಿನ ವಿರುದ್ಧ ಮೃತ ವ್ಯಕ್ತಿಯ ಕುಟುಂಬಸ್ಥರ ಆಕ್ರೋಶ
ಇನ್ನು ಈ ಪ್ರಕರಣ ಸಂಬಂಧ ನ್ಯಾಯಾಲಯ ನೀಡಿದ್ದ ತೀರ್ಪಿನ ವಿರುದ್ಧ ಮೃತ ವ್ಯಕ್ತಿಯ ಕುಟುಂಬಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಅಂದಿನ ದುರ್ಘಟನೆಯಲ್ಲಿ ಸಾವನ್ನಪ್ಪಿದ್ದ ನೂರುಲ್ಲಾ  ಖಾನ್ ಅವರು ಮಗ ಬಾಂಬೆ ಹೈಕೋರ್ಟ್ ತೀರ್ಪಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT