ದೇಶ

ಈಜುಕೊಳ ದುರಂತ ರು.2 ಕೋಟಿ ಪರಿಹಾರ

ಆರು ವರ್ಷಗಳ ಹಿಂದೆ ಬೆಂಗಳೂರಿನ ಜಯನಗರ ಈಜುಕೊಳದಲ್ಲಿ ಮೃತಪಟ್ಟಿದ್ದ ಸಾಫ್ಟ್‌ವೇರ್...

ನವದೆಹಲಿ: ಆರು ವರ್ಷಗಳ ಹಿಂದೆ ಬೆಂಗಳೂರಿನ ಜಯನಗರ ಈಜುಕೊಳದಲ್ಲಿ ಮೃತಪಟ್ಟಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಸ್ಮೃತಿ ರಂಜನ್ ಶರ್ಮ ಅವರ ಕುಟುಂಬಕ್ಕೆ ರು.2 ಕೋಟಿ ಪರಿಹಾರ ನೀಡುವಂತೆ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ ನೀಡಿದೆ.

ಬೆಂಗಳೂರು ಮಹಾನಗರ ಪಾಲಿಕೆ 50 ಲಕ್ಷ ಪಾವತಿಸಬೇಕು, ಈಜುಕೊಳಕ್ಕೆ ವಿಮೆ ಒದಗಿಸಿದ್ದ ಓರಿಯಂಟಲ್ ಇನ್ಷುರೆನ್ಸ್ ಕಂಪನಿ ರು.16 ಲಕ್ಷ ಹಾಗೂ ಈಜುಕೊಳ ಗುತ್ತಿಗೆ ಪಡೆದಿದ್ದ ಮೆಸರ್ಸ್ ಪಿ.ಎಂ ಸ್ವಿಮ್ಮಿಂಗ್ ಸೆಂಟರ್ ರು. 1.34 ಕೋಟಿ ಪಾವಿತಸಬೇಕು ಎಂದು ಆಯೋಗವು ಬುಧವಾರ ನೀಡಿರುವ ತೀರ್ಪಿನಲ್ಲಿ ತಿಳಿಸಿದೆ.

ಪರಿಹಾರ ಮೊತ್ತವನ್ನು 90 ದಿನಗಳಲ್ಲಿ ಪಾವತಿಸಬೇಕು. ವಿಳಬಂವಾದರೆ ಶೇ.12ರಷ್ಟು ಬಡ್ಡಿ ಸಹಿತ ಪಾವತಿಸಬೇಕು ಎಂದೂ ಸೂಚಿಸಿದೆ. ಈಜುಕೊಳದಲ್ಲಿ ಮೃತಪಟ್ಟ ಪ್ರಕರಣಗಳ ಪೈಕಿ ಅತಿ ಹೆಚ್ಚು ಪರಿಹಾರ ಘೋಷಿಸಿರುವ ಪ್ರಕರಣ ಇದಾಗಿದೆ.

ಜಯನಗರದಲ್ಲಿರುವ ಈಜುಕೊಳವನ್ನು ಪಿ.ಎಂ ಸ್ವಿಮ್ಮಿಂಗ್ ಸೆಂಟರ್ 2004ರಲ್ಲೇ 35 ವರ್ಷಗಳ ಅವಧಿಗೆ ಗುತ್ತಿಗೆ ಪಡೆದಿದೆ. ಇಲ್ಲಿ ಈಜು ತರಬೇತಿ ಮತ್ತು ಈಜುವ ವ್ಯವಸ್ಥೆ ಕಲ್ಪಿಸುತ್ತಿದೆ. 2-4 2008ರಿಂದ 22-4-2008ರವರೆಗೆ ಪಿ.ಎಂ ಸ್ಮಿಮ್ಮಿಂಗ್ ಸೆಂಟರ್ ಆಯೋಜಿಸಿದ್ದ ಈಜು ತರಬೇತಿಗೆ ಜೆ.ಪಿ ಸ್ಮೃತಿ ರಂಜನ್ ಶರ್ಮ ಸೇರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT