ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ 
ದೇಶ

'ನೌಕಾ ಪಡೆ ಹೆಲಿಕಾಪ್ಟರನ್ನು ನನ್ನ ಕುಟುಂಬದವರು ಬಳಸಲಿಲ್ಲ'

ಗೋವಾದ ಸಾಮಾಜಿಕ ಕಾರ್ಯಕರ್ತ ಹಾಗೂ ವಕೀಲರಾಗಿರುವ ಐರಸ್ ರೋಡ್ರಿಕ್ಸ್ ಆರೋಪ...

ನವದೆಹಲಿ: ಗೋವಾನಲ್ಲಿ ಆಯೋಜಿಸಿದ್ದ ಮದುವೆ ಕಾರ್ಯಕ್ರಮಕ್ಕೆ ತೆರಳಲು ಜೇಟ್ಲಿ ಕುಟುಂಬದವರು ನೌಕ ಪಡೆಯ ಹೆಲಿಕಾಪ್ಟರ್ನ್ನು ಬಳಿಸಿದ್ದರು ಎಂಬ ಆರೋಪವನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ನಿರಾಕರಿಸಿದ್ದಾರೆ.

ಗೋವಾದ ಸಾಮಾಜಿಕ ಕಾರ್ಯಕರ್ತ ಹಾಗೂ ವಕೀಲರಾಗಿರುವ ಐರಸ್ ರೋಡ್ರಿಕ್ಸ್, ಈ ಕುರಿತು ಜೇಟ್ಲಿ ವಿರುದ್ಧ ಆರೋಪ ಮಾಡಿದ್ದರು.

ಕಳೆದ ಡಿ.23 ರಂದು ಗೋವಾನಲ್ಲಿ ನಡೆದಿದ್ದ ಮದುವೆ ಸಮಾರಂಭವೊಂದಕ್ಕೆ ತೆರಳಲು ಅರುಣ್ ಜೇಟ್ಲಿ ಅವರ ಪತ್ನಿ ಹಾಗೂ ಅವರ ಮಗಳು, ನೌಕಾ ಪಡೆಯ ಹೆಲಿಕಾಪ್ಟರನ್ನು ಸ್ವಂತ ಉದ್ದೇಶಕ್ಕಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದರು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಅರುಣ್ ಜೇಟ್ಲಿ, ಆರೋಪವನ್ನು ನಿರಾಕರಿಸಿದರು.

ಮೊದಲಿಗೆ, ನೌಕಾ ಪಡೆಯ ಹೆಲಿಕಾಪ್ಟರನ್ನು  ನನ್ನ ಪತ್ನಿ ಮತ್ತು ಮಗಳು ಬಳಸಿಲ್ಲ. ಇವರಿಬ್ಬರು 23ನೇ ತಾರಿಖಿನಂದು ಗೋವಾದಲ್ಲಿ ಇದ್ದರು.

ಎರಡನೆಯದಾಗಿ, ನನ್ನ ಕುಟುಂಬದವರು ಯಾವುದೇ ಸರ್ಕಾರಿ ಸವಲತ್ತುಗಳನ್ನು ಉಪಯೋಗಿಸಿಕೊಳ್ಳದಿರುವಾಗ, ನೌಕಾ ಪಡೆಯ ಹೆಲಿಕಾಪ್ಟರನ್ನು ಹೇಗೆ ಬಳಸಲು ಸಾಧ್ಯ?

ಮೂರನೆಯದಾಗಿ, ಇದೊಂದು ಖಾಸಗಿ ಕಾರ್ಯಕ್ರಮವಾಗಿದ್ದರಿಂದ, ನನ್ನ ಕುಟುಂಬದವರು ಗೋವಾಗೆ ಬಂದಿದ್ದಾರೆ ಎಂಬುದು ರಕ್ಷಣಾ ಸಚಿವ ಪರಿಕ್ಕಾರ್ಗೆ ಸಹಾ ಈ ವಿಷಯ ಗೊತ್ತಿರಲಿಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.

ಸಾಮಾಜಿಕ ಕಾರ್ಯಕರ್ತ ಹಾಗೂ ವಕೀಲರಾಗಿರುವ ಐರಸ್ ರೋಡ್ರಿಕ್ಸ್, ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಈ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್