ಚಿನ್ನ ನುಂಗಿ ಕಳ್ಳ ಸಾಗಣೆಗೆ ಯತ್ನ 
ದೇಶ

ಬಂಗಾರ ನುಂಗಿ ಬಂಧಿತನಾದ

ಡಿಟೆಕ್ಟರ್ ಮೂಲಕ ದೈಹಿಕ ತಪಾಸಣೆ ಮಾಡಿದಾಗ ಆತ ಚಿನ್ನದ ನಾಣ್ಯಗಳು ನುಂಗಿರುವುದು ತಿಳಿದುಬಂದಿತು...

ಹೈದ್ರಬಾದ್: ಸುಂಕಾಧಿಕಾರಿಗಳ ಕಣ್ಣು ತಪ್ಪಿಸಿ, ದೇಶ ವಿದೇಶಗಳಿಂದ ಚಿನ್ನ ಕಳ್ಳಸಾಗಣೆ ಮಾಡಲು ಚೋರರು ತರೆಹೆವಾರಿ ಉಪಾಯ ಮಾಡುತ್ತಾರೆ. ಇಲ್ಲೊಬ್ಬ ಭೂಪ ವಿಭಿನ್ನ ರೀತಿಯಲ್ಲಿ ಚಿನ್ನ ಕಳ್ಳ ಸಾಗಣೆ ಮಾಡಲು ಯತ್ನಿಸಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಅಬ್ದುಲ್ ಕರೀಂ ಎಂಬಾತ ಕೌಲಾಲಂಪುರ ನಿಂದ ಹೈದ್ರಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬಂದಿಳಿದನು. ಅಬ್ದುಲ್ ಕರೀಂ ಅಕ್ರಮವಾಗಿ ಚಿನ್ನದ ನಾಣ್ಯಗಳನ್ನು ಸಾಗಿಸುತ್ತಿರುವುದಾಗಿ ಮೊದಲೇ ಮಾಹಿತಿ ತಿಳಿದಿದ್ದ ಸುಂಕಾಧಿಕಾರಿಗಳು ಅಬ್ದುಲ್ ಕರೀಂನನ್ನು ತಪಾಸಣೆಗೊಳಪಡಿಸಿದರು.

ತಪಾಸಣೆ ವೇಳೆ ಆತನನ್ನು ಪರೀಕ್ಷಿಸಿದಾಗ ಆತನ ಕೈಯಲ್ಲಿ, ಚೀಲದಲ್ಲಿ ಯಾವುದೇ ಚಿನ್ನದ ನಾಣ್ಯಗಳು ಪತ್ತೆಯಾಗಿಲ್ಲ. ಬಳಿಕ ಡಿಟೆಕ್ಟರ್ ಮೂಲಕ ದೈಹಿಕ ತಪಾಸಣೆ ಮಾಡಿದಾಗ ಆತ ಚಿನ್ನದ ನಾಣ್ಯಗಳು ನುಂಗಿರುವುದು ತಿಳಿದುಬಂದಿತು. ಆತ ನುಂಗಿದ ಚಿನ್ನದ ತೂಕ ಎಷ್ಟು ಗೊತ್ತೆ. 350 ಗ್ರಾಂ ತೂಕ ಹೊಂದಿತ್ತು.

ಬಳಿಕ ಆತನನ್ನು ಸ್ಥಳೀಯ ಒಸ್ಮಾನಿಯ ಆಸ್ಪತ್ರೆಗೆ ದಾಖಲಿಸಿ, ಚಿನ್ನವನ್ನು ಹೊರ ತೆಗೆಯಲಾಯಿತು. ಕರೀಂ ಕಾನ್‌ನ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಈ ಘಟನೆಯು ಸುಂಕಾಧಿಕಾರಿಗಳಿಗೆ ಬಾರಿ ಇರುಸುಮುರುಸು ಉಂಟುಮಾಡಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT