ಹೈಕೋರ್ಟ್ 
ದೇಶ

ಅವಿವಾಹಿತ ಮಗಳಿಗೆ ನಿರ್ವಹಣೆ ವೆಚ್ಚ ನೀಡಿ: ಹೈಕೋರ್ಟ್

ಅವಿವಾಹಿತ ಮಗಳ ನಿರ್ವಹಣಾ ವೆಚ್ಚವನ್ನು ತಂದೆಯೇ ಭರಿಸಬೇಕು ಎಂದು...

ಬೆಂಗಳೂರು: ಅವಿವಾಹಿತ ಮಗಳ ನಿರ್ವಹಣಾ ವೆಚ್ಚವನ್ನು ತಂದೆಯೇ ಭರಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.

28 ವರ್ಷದ ಯುವತಿಯೊಬ್ಬಳು ತಂದೆಯಿಂದ ನಿರ್ವಹಣ ವೆಚ್ಚ ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಳು. ವಿಚಾರಣೆ ನಡೆಸಿದ ನ್ಯಾಯಾಲಯ ಅವಿವಾಹಿತ ಮಗಳಿಗೆ ಆಕೆಗೆ ನಿರ್ವಹಣಾ ವೆಚ್ಚ ನೀಡುವಂತೆ ಆಗ್ರಹಿಸಿದೆ.

ನ್ಯಾಯಾಮೂರ್ತಿ ಕೆ.ಎನ್ ಫನೀಂದ್ರ ಅವರು, ಹಿಂದೂ, ಮುಸ್ಲೀಂ, ಮೊಹಮ್ಮದನ್, ಪಾರ್ಸಿ ಅಥವಾ ಕ್ರೈಸ್ತ ಧರ್ಮ ಸೇರಿದಂತೆ ಯಾವುದೇ ಧರ್ಮದವರಾಗಿರಲಿ, ಇನ್ನು ಮುಂದೆ ತಂದೆಯಂದಿರು ತಮ್ಮ ಅವಿವಾಹಿತ ಹೆಣ್ಣುಮಕ್ಕಳ ನಿರ್ವಹಣಾ ವೆಚ್ಚವನ್ನು ಭರಿಸಬೇಕು. ಹೆಣ್ಣುಮಕ್ಕಳು ವಿವಾಹವಾಗುವವರೆಗೆ ಅವರ ವೆಚ್ಚವನ್ನು ತಂದೆಯಂದಿರೇ ಬರಿಸಬೇಕಿದೆ ಎಂದು ಆದೇಶಿಸಿದ್ದಾರೆ.

ಮೆಹರುನ್ನೀಸ ಎಂಬ ಯುವತಿ ತನ್ನ ತಂದೆ ತಿಂಗಳಿಗೆ 3,000 ಸಾವಿರ ನಿರ್ವಹಣಾ ವೆಚ್ಚ ನೀಡಬೇಕು ಎಂದು ಕೋರಿ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಳು. ಆಕೆಯ ತಂದೆ ಕರ್ನಾಟಕ ಪೊಲೀಸ್ ಮೀಸಲು ಪಡೆಯ ಅಧಿಕಾರಿ ಸೈಯದ್ ಹಬೀಬ್. ತನ್ನ ಮದುವೆ ಆಗುವವರೆಗೆ ತನ್ನ ತಂದೆ ನಿರ್ವಹಣಾ ವೆಚ್ಚ ನೀಡಬೇಕು ಎಂದು ಮನವಿ ಮಾಡಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಆಕೆ ಮದುವೆಯಾಗುವರೆಗೆ ಜೀವನಾಂಶ ನೀಡಬೇಕು ಎಂದು ಅಧಿಕಾರಿ ತಂದೆಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಹಬೀಬ್ ಅವರು ತುಮಕೂರು ತ್ವರಿತ ವಿಚಾರಣೆ ಕೋರ್ಟ್ ಮೆಟ್ಟಿಲೇರಿದ್ದರು. ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿದ ಆದೇಶವನ್ನು ತ್ವರಿತ ವಿಚಾರಣೆ ಕೋರ್ಟ್ ರದ್ದುಗೊಳಿಸಿತ್ತು.

ಇದನ್ನು ಪ್ರಶ್ನಿಸಿ ಆಕೆ ಹೈಕೋರ್ಟ್ ಮೆಟ್ಟಿಲೇರಿದ್ದರು. ನಾನು ಅಸಹಾಯಕ ಮಹಿಳೆಯಾಗಿದ್ದು, ನನ್ನ ನಿರ್ವಹಣೆಗೆ ಕಷ್ಟವಾಗಿದೆ. ನನ್ನ ತಂದೆ ಸರ್ಕಾರಿ ಉದ್ಯೋಗರಸ್ಥರಾಗಿದ್ದು, ಅವರು ನನ್ನ ನಿರ್ವಹಣಾ ವೆಚ್ಚಗಳನ್ನು ಬರಿಸುವಂತೆ ಆದೇಶಿಸಬೇಕು ಎಂದು ಮನವಿ ಮಾಡಿದ್ದಳು.

ವಿಚಾರಣೆ ನಡೆಸಿದ ನ್ಯಾಯಾಮೂರ್ತಿ ಇನ್ನು ಮುಂದೆ ತಂದೆಯಂದಿರು ತಮ್ಮ ಅವಿವಾಹಿತ ಹೆಣ್ಣುಮಕ್ಕಳು ವಿವಾಹವಾಗುವವರೆಗೆ ಅವರ ನಿರ್ವಹಣಾ ವೆಚ್ಚವನ್ನು ತಂದೆಯಂದಿರೇ ಬರಿಸಬೇಕಿದೆ ಎಂದು ಆದೇಶಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT