ದೇಶ

ಎಲ್ಲೆಲ್ಲೂ 'ನಮೋ' ಸಂಸ್ಕೃತಿ

Vishwanath S

ನವದೆಹಲಿ: ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಇಡೀ ದೇಶವೇ ನಮೋ(ನೋ ಆ್ಯಕ್ಷನ್ ಓನ್ಲಿ ಮೆಸೇಜ್) ಸಂಸ್ಕೃತಿಯಲ್ಲಿ ಸಿಲುಕಿಕೊಂಡಿದೆ. ಹೀಗೆಂದು ಲೇವಡಿ ಮಾಡಿದ್ದು ಕೇಂದ್ರದ ಮಾಜಿ ಸಚಿವ ಜೈರಾಂ ರಮೇಶ್.

ಕೇಂದ್ರದ ಸುಗ್ರೀವಾಜ್ಞೆಗಳ ಬಗ್ಗೆ ಪ್ರಸ್ತಾಪಿಸಿದ ಅವರು, ಈಗ ಮೋದಿ ಎಂದರೆ ಪ್ರಜಾಸತ್ತ ಭಾರತದ ಕೊಲೆಗಾರ ಎಂದೂ ಹೇಳಿದ್ದಾರೆ. ಇದೇ ವೇಳೆ, ಪಶ್ಚಿಮ ಬಂಗಾಳ ಸಿಎಂ ಮಮತಾ ಅವರೂ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದು, ಕರಾಳ ಸುಗ್ರೀವಾಜ್ಞೆಯನ್ನು ಜನರು ಸುಟ್ಟುಹಾಕಲಿ.

ಭೂಸ್ವಾಧೀನ ಕಾಯ್ದೆಗೆ ತಂದಿರುವ ತಿದ್ದುಪಡಿಯನ್ನು ನಾನಂತೂ ನಮ್ಮ ರಾಜ್ಯದಲ್ಲಿ ಅನುಷ್ಠಾನ ಮಾಡುವುದಿಲ್ಲ ಎಂದಿದ್ದಾರೆ. ಮೋದಿ ನೇತೃತ್ವದಲ್ಲಿ ಭಾರತವು 1977ರ ತುರ್ತು ಪರಿಸ್ಥಿತಿಗಿಂತಲೂ ಹೀನಾಯ ಸ್ಥಿತಿಗೆ ತಲುಪಿದೆ ಎಂದಿದ್ದಾರೆ.

SCROLL FOR NEXT