ದೇಶ

ಉಗ್ರರಿಂದ ಗುಪ್ತಚರನ ಶಿರಚ್ಛೇದ

ಭದ್ರತಾ ಸಿಬ್ಬಂದಿಗೆ ಗುಪ್ತವಾಗಿ ಮಾಹಿತಿ ನೀಡುತ್ತಿದ್ದ ವ್ಯಕ್ತಿಯನ್ನು ಪಾಕಿಸ್ತಾನದ ಉಗ್ರರು ಸಾರ್ವಜನಿಕವಾಗಿ...

ಇಸ್ಲಾಮಾಬಾದ್: ಭದ್ರತಾ ಪಡೆಗೆ ಗುಪ್ತವಾಗಿ ಮಾಹಿತಿ ನೀಡುತ್ತಿದ್ದ ವ್ಯಕ್ತಿಯನ್ನು ತಾಲಿಬಾನ್ ಉಗ್ರರು ಸಾರ್ವಜನಿಕವಾಗಿ ಹತ್ಯೆಗೈದಿದ್ದಾರೆ.

ಖೈಬರ್ ಜಿಲ್ಲೆಯಲ್ಲಿರುವ ಮೆಹ್ರಾಬಾನ್ ಕಲೆ ಪ್ರದೇಶದ ತಿರ್ಹಾ ಕಣಿವೆಯಲ್ಲಿರುವ ಬುಡಕಟ್ಟು ಜನಾಂಗದ ಓರ್ವ ವ್ಯಕ್ತಿಯನ್ನು ಸಾರ್ವಜನಿಕವಾಗಿ ಶಿರಚ್ಛೇದ ಮಾಡಿದ
ಪಾಕ್ ಉಗ್ರರು, ಮೃತದೇಹವನ್ನು ಸಂಜೆವರೆಗೆ ತೆಗೆಯದಂತೆ ಊರಿನವರಿಗೆ ಎಚ್ಚರಿಸಿದ್ದಾರೆ.

ಮೆಹ್ರಾಬಾನ್ ಕಲೆ ಪ್ರದೇಶವು ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ ಮತ್ತು ಲಷ್ಕರ್-ಇ-ಇಸ್ಲಾಂ ಉಗ್ರ ಸಂಘಟನೆಯ ಅಧೀನದಲ್ಲಿದೆ.

ಈ ಪ್ರದೇಶದಲ್ಲಿರುವ ಉಗ್ರಸಂಘಟನೆಗಳನ್ನು ಹತ್ತಿಕ್ಕಲು ಸೇನಾ ಪಡೆ ಯೋಜನೆ ರೂಪಿಸಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಿರುವ ನಿವಾಸಿಗಳನ್ನು ಸ್ಥಳಾಂತರಿಸುವಂತೆ ಸೇನಾ ಪಡೆ ಸೂಚಿಸಿತ್ತು. ಆದರೆ, ಅಲ್ಲಿನ ಬುಡಕಟ್ಟು ಜನಾಂಗದವರು ಸ್ಥಳಾಂತರಕ್ಕೆ ಕಾಲವಕಾಶ ಕೇಳಿದ್ದರು.

ಬುಡಕಟ್ಟು ಜನಾಂಗಕ್ಕೆ ಸೇರಿದ್ದ ವ್ಯಕ್ತಿಯೊಬ್ಬ ಉಗ್ರರ ನಡೆ ಬಗ್ಗೆ ಸೇನಾ ಪಡೆಗೆ ಗುಪ್ತವಾಗಿ ಮಾಹಿತಿ ನೀಡುತ್ತಿದ್ದ. ಈ ಹಿನ್ನಲೆಯಲ್ಲಿ ಆತನನ್ನು ಪಾಕ್ ಉಗ್ರರು ಹತ್ಯೆಗೈದಿದ್ದಾರೆ ಎಂದು ತಿಳಿದು ಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

SCROLL FOR NEXT