ದೇಶ

ಭಾರತದಲ್ಲಿ ವರ್ಷಕ್ಕೆ 3,00,000ಶಿಶುಗಳ ಸಾವು!

ತಂತ್ರಜ್ಞಾನದಿಂದ ಶೇ.75ರಷ್ಟು ಸಾವನ್ನು...

ಭಾರತೀಯ ಆರೋಗ್ಯ ವ್ಯವಸ್ಥೆಯಲ್ಲಿ ಸುಧಾರಣೆ ಕಂಡರೂ ನವಜಾತ ಶಿಶುಗಳು ಸಾಯುವುದು ಕಡಿಮೆಯಾಗಿಲ್ಲ. ಆದರೆ ಆಧುನಿಕ ತಂತ್ರಜ್ಞಾನದ ಮೂಲಕ ಶಿಶುಗಳ ಸಾವನ್ನು ತಡೆಯಬಹುದು.

2010ರಲ್ಲಿ ಮೃತಪಟ್ಟ ನವಜಾತ ಶಿಶುಗಳು
* 13ಲಕ್ಷ(ಬೇರ್ಯಾವ ದೇಶಗಳಲ್ಲೂ ಇಷ್ಟು ಮಕ್ಕಳು ಸತ್ತಿಲ್ಲ!)
* ಜನಿಸಿದ 1 ದಿನದಲ್ಲೇ ಮೃತಪಟ್ಟ ಶಿಶುಗಳು 3.00.000
* ಉತ್ತಮ ತಂತ್ರಜ್ಞಾನದಿಂದ ಸರಿಸುಮಾರು ಶೇ.75ರಷ್ಟು ಸಾವನ್ನು ತಡೆಯಬಹುದು


ಭಾರತದಲ್ಲಿ 5 ವರ್ಷಕ್ಕಿಂತ ಎಳೆಯ ಮಕ್ಕಳು ಸಾಯಲು ಕಾರಣ(ಶೇ.)
* ಅಕಾಲಿಕ ಜನನ - 27
* ಇತರೆ ಕಾಯಿಲೆಗಳು - 16
* ಶ್ವಾಸಕೋಶದ ಸೋಂಕು -14
* ಜನಿಸಿದ ಕೂಡಲೇ ಉಸಿರುಗಟ್ಟುವಿಕೆ - 11
* ಭೇಧಿ - 11
* ಕೀವು ತುಂಬಿದ ಹುಣ್ಣು - 8
* ಜನ್ಮಜಾತ ಅಸಹಜತೆಗಳು - 6
* ಏಟು/ಗಾಯಗಳು - 4
* ದಡಾರದ ಗುಳ್ಳೆಗಳು - 2


ಎಳೆ ಹಸುಗೂಸುಗಳ ಜೀವವನ್ನು ತಂತ್ರಜ್ಞಾನ ಮೂಲಕ ರಕ್ಷಿಸುವುದು ಹೇಗೆ?
ಭಾರತದ ನೆರವಿನಿಂದ ವಿಶ್ವಸಂಸ್ಥೆ ರಚಿಸಿದ ಸಹಸ್ರಮಾನದ ಅಭಿವೃದ್ಧಿ ಗುರಿಗಳು

* ಕಡು ಬಡತನ ನಿವಾರಣೆ, ಹಸಿವು ನೀಗಿಸುವುದು
* ಮಕ್ಕಳ ಮರಣದ ಸಂಖ್ಯೆಯಲ್ಲಿ ಇಳಿತ
* ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣ
* ತಾಯಿಯ ಆರೋಗ್ಯ ವೃದ್ಧಿ
* ಎಚ್‌ಐವಿ/ಏಡ್ಸ್, ಮಲೇರಿಯಾ ವಿರುದ್ಧ ಹೋರಾಟ
* ಲಿಂಗ ಸಮಾನತೆಗೆ ಪ್ರೋತ್ಸಾಹ ಮತ್ತು ಸ್ತ್ರೀಯರ ಸಬಲೀಕರಣ
* ಪರಿಸರ ಸಂರಕ್ಷಣೆ
* ಅಭಿವೃದ್ಧಿಗಾಗಿ ಜಾಗತಿಕ ಸಹಭಾಗಿತ್ವ


ತಂತ್ರಜ್ಞಾನದ ನೆರವಿನಿಂದ ಮಕ್ಕಳ ಮತ್ತು ತಾಯಿಯ ಸಾವನ್ನು ತಡೆಯಬಲ್ಲ ವಿಧಾನಗಳು

1. ಲಲಬೈ ಎಲ್‌ಇಡಿ ಫೋಟೊಥೆರಪಿ ಸಿಸ್ಟಂ:
ವಿದ್ಯುತ್ ಕಡಿತವಾದಾಗ ಉಂಟಾಗುವ ವೋಲ್ಟೇಜ್ ಏರಿಳಿತವನ್ನು ತಡೆಯಬಲ್ಲದು.
ಧೂಳು ಮಾಲಿನ್ಯ ತಡೆಯಬಲ್ಲದು.
ನವಜಾತ ಶಿಶುಗಳ ಕಾಮಾಲೆಗೆ ಚಿಕಿತ್ಸೆ ನೀಡಬಲ್ಲದು.

2. ಲಲಬೈ ವಾರ್ಮರ್:
ಮೈಕ್ರೋ ಪ್ರೊಸೆಸರ್ ತಂತ್ರಜ್ಞಾನ ಬಳಸಿ ಮಗುವಿನ ಹಾಸಿಗೆಯ ಶಾಖವನ್ನು ಹತೋಟಿಯಲ್ಲಿ ಇಡಬಲ್ಲದು.
ವಿದ್ಯುತ್‌ನಲ್ಲಿ ಏರಿತವಾದಾಗ ಸೂಚನೆ ನೀಡಬಲ್ಲದು.
ಭಾರತೀಯ ಮಾರುಕಟ್ಟೆಗೆಂದು ತಯಾರಿಸಲಾದ ಈ ವಾರ್ಮರ್ ಇದೀಗ 72 ದೇಶಗಳಲ್ಲಿ ಲಭ್ಯ.

3. ಒಬಿ/ಜಿವೈಎನ್:
ಶ್ರವಣಾತೀತ ತಂತ್ರಜ್ಞಾನದಿಂದ ಗರ್ಭಾಶಯದ ಸಮಸ್ಯೆ ಪತ್ತೆ ಹಚ್ಚಬಲ್ಲದು.

4. ಲಲಬೈ ವಾರ್ಮರ್ ಪ್ರೈಂ:
ಅನಕ್ಷರಸ್ಥರಿಗೆ, ಗ್ರಾಮೀಣ ಪ್ರದೇಶದವರಿಗೆ ಬಳಸಲು ಸುಲಭವಾಗಲು ಚಿತ್ರಗಳ ಮೂಲಕ ನಿರ್ದೇಶನಗಳು ನೀಡಲಾಗಿದೆ.
ಪ್ರಮಾಣ ದರಕ್ಕಿಂತ ಶೇ.70 ಅಗ್ಗ.
ಕಡಿಮೆ ವಿದ್ಯುತ್ ಬಳಕೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ ಹೈಕಮಾಂಡ್ ಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ: CM ಪುತ್ರ ಯತೀಂದ್ರ ಸ್ಫೋಟಕ ಹೇಳಿಕೆ

ಹಿರಿಯ ನಾಯಕರೊಂದಿಗಿನ ಚರ್ಚೆ ಬಳಿಕ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ: ದೆಹಲಿಗೆ ತೆರಳುವ ಮುನ್ನ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ

ಹೃದಯ ಛಿದ್ರವಾಗಿದೆ: ಆಫ್ರಿಕಾ ವಿರುದ್ಧದ ಸರಣಿ ಹೀನಾಯ ಸೋಲಿನ ನಂತರ ಇಡೀ ದೇಶದ ಕ್ಷಮೆಯಾಚಿಸಿದ ರಿಷಭ್ ಪಂತ್!

WPL Auction 2026: ಬರೋಬ್ಬರಿ 3.2 ಕೋಟಿ ರೂ. ಗೆ ಆಲ್ ರೌಂಡರ್ ದೀಪ್ತಿ ಶರ್ಮಾ ಸೋಲ್ಡೌಟ್‌! ಸ್ಟನ್ ಆದ ಗಂಗೂಲಿ

ತಮಿಳುನಾಡು-ಆಂಧ್ರ ತೀರಕ್ಕೆ ದಿತ್ವಾ ಚಂಡಮಾರುತ: ಬೆಂಗಳೂರು ಸೇರಿ ಕರ್ನಾಟಕದಲ್ಲಿ 4 ದಿನ ಭಾರೀ ಮಳೆ ಸಾಧ್ಯತೆ; IMD ಎಚ್ಚರಿಕೆ

SCROLL FOR NEXT