ಸಾವಿಗೀಡಾದ ಪೇದೆ ಧರ್ಮೇಂದ್ರ ಸಿಂಗ್‌ ಚೌಹಾಣ್‌ 
ದೇಶ

ಮರಳು ಮಾಫಿಯಾ ತಡೆಯಲು ಹೋದ ಪೊಲೀಸ್ ಸಾವು

ಮಧ್ಯಪ್ರದೇಶದ ಮೊರೆನಾದ ಮರಳು ಮಾಫಿಯಾಗೆ ತಡೆ ಒಡ್ಡಲು ಯತ್ನಿಸಿದ ಪೊಲೀಸ್ ಮುಖ್ಯಪೇದೆ ಮೇಲೆ ಲಾರಿ ಹತ್ತಿಸಲಾಗಿದೆ...

ಭೋಪಾಲ್: ಮಧ್ಯಪ್ರದೇಶದ ಮೊರೆನಾದ ಮರಳು ಮಾಫಿಯಾಗೆ ತಡೆ ಒಡ್ಡಲು ಯತ್ನಿಸಿದ  ಪೊಲೀಸ್ ಮುಖ್ಯಪೇದೆ ಮೇಲೆ ಲಾರಿ ಹತ್ತಿಸಲಾಗಿದೆ.

ಮಧ್ಯಪ್ರದೇಶದಲ್ಲಿ ಅಕ್ರಮ ಮರಳು ಮಾಫಿಯಾಕ್ಕೆ ಇಂದು ಮತ್ತೊಂದು ಬಲಿಯಾಗಿದ್ದು, ಅಕ್ರಮ ತಡೆಯಲು ಹೋದ ಮುಖ್ಯಪೇದೆ ಧರ್ಮೇಂದ್ರ ಸಿಂಗ್‌ ಚೌಹಾಣ್‌ ಅವರ ಮೇಲೆ ಲಾರಿ ಹತ್ತಿಸಿದ ಪರಿಣಾಮ, ಪೇದೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಭಾನುವಾರ ಬೆಳಗ್ಗೆ  ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಗಳ ವಿರುದ್ಧ ಕಾರ್ಯಾಚರಣೆಗಾಗಿ ನಿಯೋಜಿತಗೊಂಡಿದ್ದ ನೂರಬಾದ್‌ ಪೊಲೀಸ್‌ ಠಾಣೆಯ ಮುಖ್ಯಪೇದೆ ಧರ್ಮೇಂದ್ರ ಸಿಂಗ್‌ ಚೌಹ್ವಾಣ್‌ ಮೇಲೆ ಲಾರಿ ಹಾಯಿಸಲಾಗಿದ್ದು, ಸ್ಥಳದಲ್ಲೇ ಅವರು ಮೃತಪಟ್ಟಿದ್ದಾರೆ. ಚೌಹ್ವಾಣ್ ಮೃತಪಟ್ಟ ಬಳಿಕ ಲಾರಿಯನ್ನು ಅಲ್ಲೇ ಬಿಟ್ಟ ಚಾಲಕ ಪರಾರಿಯಾಗಿದ್ದಾನೆ.

ದಹನೆಲ್ ಗ್ರಾಮದ ಬಳಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯನ್ನು ಪತ್ತೆ ಮಾಡಿದ ಚೌಹಾಣ್‌, ರಸ್ತೆ ಮಧ್ಯದಲ್ಲಿ ನಿಲ್ಲಿಸಿದ್ದ ಲಾರಿಯನ್ನು ಪಕ್ಕಕ್ಕೆ ನಿಲ್ಲಿಸುವಂತೆ ಚಾಲಕನಿಗೆ ಸೂಚಿಸಿದರು.  ಪೊಲೀಸ್ ದಾಳಿಯಿಂದ ಹೆದರಿದ ಚಾಲಕ ಅಲ್ಲಿಂದ ಪರಾರಿಯಾಗಲು ಯತ್ನಿಸಿ ಹಿಮ್ಮುಖವಾಗಿ ಲಾರಿ ಓಡಿಸಿದಾಗ, ಹಿಂದೆ ಬರುತ್ತಿದ್ದ ಚೌಹಾಣ್‌ ಚಕ್ರದ ಅಡಿಗೆ ಸಿಲುಕಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT