ಪರಸ್ಪರ ಹಸ್ತಲಾಘವ ಮಾಡುತ್ತಿರುವ ಒಬಾಮ-ರೌಲ್ ಕ್ಯಾಸ್ಟ್ರೋ 
ದೇಶ

ವೈರತ್ವ ಮರೆತು ಜೊತೆಗೂಡಿದ ಒಬಾಮ-ಕ್ಯಾಸ್ಟ್ರೋ

ಪರಸ್ಪರ ಬದ್ಧ ವೈರಿಗಳೆಂದೇ ಕರೆಯಲಾಗುತ್ತಿದ್ದ ಅಮೆರಿಕ-ಕ್ಯೂಬಾ ದೇಶಗಳು ದಶಕಗಳ ಬಳಿಕ ಇದೇ ಮೊದಲ ಬಾರಿಗೆ ಒಂದಾಗಿದ್ದು...

ಪನಾಮ: ಪರಸ್ಪರ ಬದ್ಧ ವೈರಿಗಳೆಂದೇ ಕರೆಯಲಾಗುತ್ತಿದ್ದ ಅಮೆರಿಕ-ಕ್ಯೂಬಾ ದೇಶಗಳು ದಶಕಗಳ ಬಳಿಕ ಇದೇ ಮೊದಲ ಬಾರಿಗೆ ಒಂದಾಗಿದ್ದು, ಉಭಯ ದೇಶಗಳ ಅಧ್ಯಕ್ಷರು ಕಾರ್ಯಕ್ರಮವೊಂದರಲ್ಲಿ ಹಸ್ತಲಾಘವ ಮಾಡಿದ್ದಾರೆ.

ಪನಾಮ ನಗರ ಇಂತಹುದೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಪನಾಮ ನಗರದಲ್ಲಿ ಆಯೋಜಿಸಲಾಗಿರುವ ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮತ್ತು ಕ್ಯೂಬಾ ಅಧ್ಯಕ್ಷ ರೌಲ್ ಕ್ಯಾಸ್ಟ್ರೋ ಪರಸ್ಪರ ಹಸ್ತಲಾಘವ ಮಾಡುವ ಮೂಲಕ ಹೊಸ ಸ್ನೇಹ-ಸೌಹಾರ್ಧತೆಗೆ ಮುಂದಾಗಿದ್ದಾರೆ. ಸತತ 21 ವರ್ಷಗಳ ಬಳಿಕ ಕ್ಯೂಬಾ ಅಧ್ಯಕ್ಷರೊಬ್ಬರು ಶೃಂಗಸಭೆಯೊಂದರಲ್ಲಿ ಪಾಲ್ಗೊಂಡಿದ್ದು, ಸಾಂಕೇತಿಕವಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ರೌಲ್ ಕ್ಯಾಸ್ಟ್ರೋ ಹಸ್ತಲಾಘವ ಮಾಡಿದ್ದಾರೆ.

ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅಮೆರಿಕ ಅಧಿಕಾರಿಗಳು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಕ್ಯೂಬಾ ನಾಯಕ ರೌಲ್ ಕ್ಯಾಸ್ಟ್ರೋ ಶುಕ್ರವಾರ ರಾತ್ರಿ ಕೈಕುಲುಕುವ ಮೂಲಕ ಹೊಸ ಮೈಲಿಗಲ್ಲು ನೆಟ್ಟಂತಾಗಿದೆ ಎಂದು ಹೇಳಿದ್ದಾರೆ. ಇನ್ನು ಈ ಹಿಂದೆ 1994ರಲ್ಲಿ ನಡೆದಿದ್ದ ಶೃಂಗಸಭೆಯಲ್ಲಿ ಕ್ಯೂಬಾ ಅಧ್ಯಕ್ಷರು ಕೊನೆಯ ಬಾರಿಗೆ ಅಮೆರಿಕ ಪಾಲ್ಗೊಂಡಿದ್ದರು. ಆ ಬಳಿಕ ಇದೇ ಮೊದಲ ಬಾರಿಗೆ ಪನಾಮ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದಾರೆ.

ರಾಜಕೀಯ ಕಾರಣಗಳಿಂದಾಗಿ 1961ರಿಂದಲೂ ಕ್ಯೂಬಾ ಮತ್ತು ಅಮೆರಿಕ ಸಂಬಂಧ ತೀರ ಹಳಸಿತ್ತು. ಕ್ಯೂಬಾ ಮೇಲೆ ಹಿಡಿತ ಸಾಧಿಸಬೇಕು ಎನ್ನುವ ಅಮೆರಿಕದ ಆಸೆಗೆ ಕ್ಯೂಬಾ ತಣ್ಣೀರು ಸುರಿದಿತ್ತು. ಸ್ವತಂತ್ರ ಕ್ಯೂಬಾ ದೇಶದ ಕನಸು ಕಂಡಿದ್ದ ಹೋರಾಟಗಾರರು ಅಮೆರಿಕದ ವಿರುದ್ಧದ ಸೆಟೆದು ನಿಂತರು. ದಶಕಗಳಿಂದಲೂ ಉಭಯ ದೇಶಗಳೊಡನೆ ನಡೆಯುತ್ತಿರುವ ಈ ಶೀಥಲಯುದ್ಧಕ್ಕೆ ತೆರೆ ಎಳೆಯುವ ನಿಟ್ಟಿನಲ್ಲಿ 2014ರ ಡಿಸೆಂಬರ್ 17ರಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮತ್ತು ಕ್ಯೂಬಾ ರೌಲ್ ಕ್ಯಾಸ್ಟ್ರೋ ಮುಂದಾಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT