ಚೇತನ್‌ ಭಗತ್‌ 
ದೇಶ

ಭಾರತದ ಪ್ರಸಿದ್ಧ ಲೇಖಕ ಚೇತನ್‌ ಭಗತ್‌ ವಿರುದ್ಧ 1 ಕೋಟಿ ರು. ಮಾನನಷ್ಟ ಮೊಕದ್ದಮೆ

ಭಾರತದ ಪ್ರಸಿದ್ಧ ಲೇಖಕ ಚೇತನ್‌ ಭಗತ್‌ ವಿರುದ್ಧ ಒಂದು ಕೋಟಿ ರು.ಮಾನನಷ್ಟ ಮೊಕದ್ದಮೆಯನ್ನು ಬಿಹಾರದ ದುಮ್ರಾವೋ ಅರಸು ವಂಶಸ್ಥರೊಬ್ಬರು ಹೂಡಿದ್ದಾರೆ...

ನವದೆಹಲಿ: ಭಾರತದ ಪ್ರಸಿದ್ಧ ಲೇಖಕ ಚೇತನ್‌ ಭಗತ್‌ ವಿರುದ್ಧ ಒಂದು ಕೋಟಿ ರು. ಮಾನನಷ್ಟ ಮೊಕದ್ದಮೆಯನ್ನು ಬಿಹಾರದ ದುಮ್ರಾವೋ ಅರಸು ವಂಶಸ್ಥರೊಬ್ಬರು ಹೂಡಿದ್ದಾರೆ.

ಚೇತನ್‌ ಭಗತ್‌ ಅವರು ತಮ್ಮ ಹೊಸ ಕಾದಂಬರಿ "ಹಾಫ್ ಗರ್ಲ್ ಫ್ರೆಂಡ್‌' ನಲ್ಲಿ ದುಮ್ರಾವೋ ಅರಸು ಮನೆತನವನ್ನು ಕೆಟ್ಟದಾಗಿ ಚಿತ್ರಿಸಿರುವುದಾಗಿ ದುಮ್ರಾವೋ ರಾಜಮನೆತನದ ಅರಸನಾಗಿದ್ದ ಮಹಾರಾಜಾ ಬಹದ್ದೂರ್‌ ಕಮಲ್‌ ಸಿಂಗ್‌ ಅವರ ಹಿರಿಯ ಪುತ್ರ ಚಂದ್ರ ವಿಜಯ್‌ ಸಿಂಗ್‌ ಅವರು ಚೇತನ ಭಗತ್‌ ವಿರುದ್ಧ ಮಾನನಷ್ಟ ದಾವೆಯನ್ನು ಹೂಡಿ 1 ಕೋಟಿ ರೂ. ಪರಿಹಾರವನ್ನು ಕೇಳಲಿದ್ದಾರೆ ಎಂಬುದಾಗಿ ಖಾಸಗಿ ಪತ್ರಿಕೆಯೊಂದು ವರದಿ ಮಾಡಿದೆ.

ದುಮ್ರಾವೋ ರಾಜ ಮನೆತನದವರನ್ನು ಕುಡುಕರು ಮತ್ತು ಗ್ಯಾಂಬ್ಲಿರ್ ಗಳೆಂದು ಚಿತ್ರೀಕರಿಸಿರುವುದು ಸಂಪೂರ್ಣ ರಾಜ ಕುಟುಂಬಕ್ಕೆ ಅವಮಾನಕಾರಿಯಾಗಿದೆ ಎಂದು ಚಂದ್ರ ವಿಜಯ್‌ ಸಿಂಗ್‌ ಆರೋಪಿಸಿದ್ದಾರೆ.

ದೂರಿನನ್ವಯ ಮೇ 1ರಂದು ತನ್ನ ಮುಂದೆ ಹಾಜರಾಗುವಂತೆ ದೆಹಲಿ ಹೈಕೋರ್ಟ್‌ ಲೇಖಕ ಚೇತನ್‌ ಭಗತ್‌ ಹಾಗೂ "ಹಾಫ್ ಗರ್ಲ್ ಫ್ರೆಂಡ್‌' ಕಾದಂಬರಿ ಪ್ರಕಾಶನ ಸಂಸ್ಥೆ ರೂಪಾ ಪಬ್ಲಿಕೇಶನ್ಸ್‌ಗೆ ಸಮನ್ಸ್‌ ಜಾರಿ ಮಾಡಿದೆ.

ದೂರಿನ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಚಂದ್ರ ವಿಜಯ್‌ ಸಿಂಗ್‌ ಅವರ ಪುತ್ರ ಶಿವಾಂಗ್‌ ವಿಜಯ್‌ ಸಿಂಗ್‌, ಚೇತನ್‌ ಭಗತ್‌ರಿಗೆ ಅವರ ಹಾಫ್ ಗರ್ಲ್ ಫ್ರೆಂಡ್‌ ಕಾದಂಬರಿಯಲ್ಲಿನ ತಪ್ಪನ್ನು ಸರಿಪಡಿಸುವಂತೆ ಹಲವು ಬಾರಿ ಕೇಳಿದರು ಪ್ರಯೋಜನವಾಗಲಿಲ್ಲ. ನಮ್ಮ ಮಾತಿಗೆ ಬೆಲೆ ಕೊಡಲಿಲ್ಲ. ಹೀಗಾಗಿ ಅವರ ವಿರುದ್ಧ ಮಾನನಷ್ಟ ದಾವೆ ಹೂಡುವುದಲ್ಲದೇ ನಮಗೆ ಬೇರೆ ದಾರಿ ಇರಲಿಲ್ಲಿ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT