ಅಪ್ರಾಪ್ತೆಯನ್ನು ಮದುವೆಯಾಗಿ ಮನೆಯಿಂದಾಚೆಗಟ್ಟಿದ ಅತ್ಯಾಚಾರಿ (ಸಾಂದರ್ಭಿಕ ಚಿತ್ರ) 
ದೇಶ

ಅಪ್ರಾಪ್ತೆಯನ್ನು ಮದುವೆಯಾಗಿ ಮನೆಯಿಂದಾಚೆಗಟ್ಟಿದ ಅತ್ಯಾಚಾರಿ

14 ವರ್ಷದ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿದ ಯುವಕನೊಬ್ಬ ಪ್ರಾಯಶ್ಚಿತಕ್ಕಾಗಿ ಆಕೆಯನ್ನು ಮದುವೆಯಾಗಿ ಪೋಷಕರು ಒಪ್ಪದ ಕಾರಣ ಆಕೆಯನ್ನು ಮನೆಯಿಂದಾಚೆಗೆ ಹಾಕಿರುವ ಘಟನೆಯೊಂದು ತಮಿಳುನಾಡಿನ ಇಡುತನೂರ್ ಗ್ರಾಮದಲ್ಲಿ ನಡೆದಿದೆ...

ವಿಲ್ಲುಪುರಂ: 14 ವರ್ಷದ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿದ ಯುವಕನೊಬ್ಬ ಪ್ರಾಯಶ್ಚಿತಕ್ಕಾಗಿ ಆಕೆಯನ್ನು ಮದುವೆಯಾಗಿ ಪೋಷಕರು ಒಪ್ಪದ ಕಾರಣ ಆಕೆಯನ್ನು ಮನೆಯಿಂದಾಚೆಗೆ ಹಾಕಿರುವ ಘಟನೆಯೊಂದು ತಮಿಳುನಾಡಿನ ಇಡುತನೂರ್ ಗ್ರಾಮದಲ್ಲಿ ನಡೆದಿದೆ.

ಅಪ್ರಾಪ್ತ ಬಾಲಕಿ ರಿಯಾ (14) ಅತ್ಯಾಚಾರಕ್ಕೊಳಪಟ್ಟ ಸಂತ್ರಸ್ಥೆಯಾಗಿದ್ದು, ಇಡುತನೂರ್ ಗ್ರಾಮದ ಶಾಲೆಯೊಂದರಲ್ಲಿ 10 ತರಗತಿ ಓದಿದ್ದಳು, ಅನುತ್ತೀರ್ಣ ಹೊಂದಿದ ಕಾರಣ ಬಾಲಕಿ ಸಂಬಂಧಿಕರ ಮನೆಯೊಂದರಲ್ಲಿ ನೆಲೆಸಿದ್ದಳು. ಬಾಲಕಿ ಒಂಟಿಯಾಗಿರುವುದನ್ನೇ ಕಾದಿದ್ದ ಅದೇ ಹಳ್ಳಿಯ ಯುವಕನಾದ (23) ವೆಂಕಟೇಶ್ ಎಂಬಾತ ಮನೆಯಲ್ಲಿ ಯಾರೂ ಇಲ್ಲದಿರುವ ಸಂದರ್ಭ ನೋಡಿಕೊಂಡು ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ನಂತರ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೆ, ಕೆಲವು ದಿನಗಳ ಬಳಿಯ ಬಾಲಕಿಯನ್ನು ಮದುವೆಯಾಗುವುದಾಗಿ ಪ್ರಮಾಣ ಮಾಡಿದ್ದಾನೆ. ಇದರಂತೆ ಏ.8ರಂದು ಬಾಲಕಿಯನ್ನು ಹತ್ತಿರದಲ್ಲಿದ್ದ ದೇವಸ್ಥಾನವೊಂದಕ್ಕೆ ಕರೆದೊಯ್ದು ಮದುವೆಯಾಗಿದ್ದಾನೆ. ಆದರೆ, ತಾಳಿಕಟ್ಟಿದ ಬಳಿಕ ಬಾಲಕಿಯನ್ನು ಆಕೆಯ ಮನೆಗೆ ಹೋಗುವಂತೆ ಹೇಳಿದ್ದಾನೆ.

ಬಾಲಕಿ ತನ್ನ ಮನೆಗೆ ಹೋದ ಸ್ವಲ್ಪ ದಿನಗಳ ಬಳಿಕ ಬಾಲಕಿಯ ಕತ್ತಿನಲ್ಲಿ ತಾಳಿಯಿರುವುದು ಆಕೆಯ ತಾಯಿಯ ಗಮನಕ್ಕೆ ಬಂದಿದೆ. ಗಾಬರಿಗೊಂಡ ತಾಯಿ ಬಾಲಕಿಯನ್ನು ವಿಚಾರಿಸಿದ್ದಾಳೆ. ಈ ವೇಳೆ ಬಾಲಕಿ ನಡೆದ ವಿಷಯವನ್ನು ತಾಯಿಯ ಬಳಿ ವಿವರಿಸಿದ್ದಾಳೆ. ನಂತರ ಈ ವಿಷಯವನ್ನು ಮನೆಯವರೊಂದಿಗೆ ಚರ್ಚೆ ನಡೆಸಿದ ತಾಯಿ ಬಾಲಕಿಯನ್ನು ತಮ್ಮ ಮನೆಗೆ ಕರೆದೊಯ್ಯುವಂತೆ ಅತ್ಯಾಚಾರಿ ಯುವಕನೊಂದಿಗೆ ಮನವಿ ಮಾಡಿದ್ದಾರೆ.

ಇದರಂತೆ ಬಾಲಕಿಯನ್ನು ಯುವಕ ಆತನ ಮನೆಗೆ ಕರೆದೊಯ್ದಾಗ ಆತನ ಮನೆಯವರಾದ ಧನಬಾಯ್ (50), ಪಾಪತಿ (40) ಎಂಬುವವರು ನಿರಾಕರಿಸಿದ್ದಾರೆ. ಅಲ್ಲದೆ, ಬಾಲಕಿಯನ್ನು ಮನೆಗೆ ಕರೆತಂದರೆ ಆಕೆಯನ್ನು ಕೊಲ್ಲುವುದಾಗಿ ಹೇಳಿದ್ದಾರೆ. ಇದಕ್ಕೆ ಹೆದರಿದ ಯುವಕ ಪೋಷಕರ ಒಪ್ಪಿಗೆ ಇಲ್ಲದೆ ಸಂಸಾರ ನಡೆಸಲು ಸಾಧ್ಯವಿಲ್ಲ ಎಂದು ಹೇಳಿ ಆಕೆಯನ್ನು ಮನೆಗೆ ಕಳುಹಿಸಿದ್ದಾನೆ. ಬಾಲಕಿ ತನ್ನ ಮನೆಗೆ ಹೋಗಿ ನಡೆದ ಸಂಗತಿಯನ್ನು ತನ್ನ ತಾಯಿಯ ಬಳಿ ಹೇಳಿಕೊಂಡಿದ್ದಾಳೆ. ನಂತರ ಬಾಲಕಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದ ತಾಯಿ ಅತ್ಯಾಚಾರಿ ಯುವಕ ವೆಂಕಟೇಶ್ ಹಾಗೂ ಆತನ ಮನೆಯವರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ಸಂಬಂಧ ತನಿಖೆ ಕೈಗೊಂಡ ಪೊಲೀಸರು ಈಗಾಗಲೇ ಯುವಕನ ಮನೆಯವರಾದ ಧನಭಾಯ್ ಹಾಗೂ ಪಾಪತಿ ಎಂಬುವವರನ್ನು ಬಂಧನಕ್ಕೊಳಪಡಿಸಿದ್ದು, ಅತ್ಯಾಚಾರಿ ಯುವಕ ವೆಂಕಟೇಶ್ ಗಾಗಿ ಹುಡುಕಾಟ ನಡೆಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತಮಿಳುನಾಡು ಮತ್ತು ಬಂಗಾಳ ಸೇರಿದಂತೆ 5 ರಾಜ್ಯಗಳ ಚುನಾವಣಾ ದಿನಾಂಕ ಪ್ರಕಟಿಸಿದ ಚುನಾವಣಾ ಆಯೋಗ!

ಕರ್ನಾಟಕ ಉಪ ಚುನಾವಣೆ: ಬಾಗಲಕೋಟೆ, ದಾವಣಗೆರೆ ದಕ್ಷಿಣದಲ್ಲಿ ಏಪ್ರಿಲ್ 9ರಂದು ಮತದಾನ, ಮೇ 4 ಫಲಿತಾಂಶ

ಮಗುವಿನ ಪೋಷಣೆಗಾಗಿ ನಾನು ಯಾರ ಜೊತೆಗಾದರೂ ಮಲಗುತ್ತೇನೆ: ದೆಹಲಿಯ 'ವಡಾ ಪಾವ್ ಗರ್ಲ್' ಖ್ಯಾತಿಯ ಚಂದ್ರಿಕಾ ದೀಕ್ಷಿತ್

ಅಮೆರಿಕ ಹೊಡೆದಿದ್ದು ಇರಾನ್ ನ ಖಾರ್ಗ್ ಗೆ; ಪೆಟ್ಟು ಚೀನಾಗೆ!; ಅಡಕತ್ತರಿಯಲ್ಲಿ ಬೀಜಿಂಗ್!, ಇಂಧನಕ್ಕೆ ಹಾಹಾಕಾರ!

ಮಹಿಳೆಯರ ಬಗ್ಗೆ ಅಶ್ಲೀಲ ಸಾಹಿತ್ಯ: ಗನ್ ಪಾಯಿಂಟ್ ನಲ್ಲಿ ಕೊಲ್ತೀವಿ; ಸಿಂಗರ್ ಬಾದ್‌ಶಾಗೆ ಬೆದರಿಕೆ ಹಾಕಿದ ಬಿಷ್ಣೋಯ್ ಗ್ಯಾಂಗ್!

SCROLL FOR NEXT