ಡಾ.ಎಪಿಜೆ ಅಬ್ದುಲ್ ಕಲಾಂ 
ದೇಶ

ಡಾ.ಅಬ್ದುಲ್ ಕಲಾಂ ಫೇಸ್ ಬುಕ್, ಟ್ವೀಟರ್ ಒಡತನಕ್ಕೆ ಕಿತ್ತಾಟ

ಮಾಜಿ ರಾಷ್ಟ್ರಪತಿ, ಮಿಸೈಲ್ ಮ್ಯಾನ್ ಡಾ.ಎಪಿಜೆ ಅಬ್ದುಲ್ ಕಲಾಂ ಸ್ವರ್ಗಸ್ಥರಾಗಿ ಒಂದು ವಾರ ಕಳೆದಿದೆ. ಆದರೆ ಅವರ ಸಹಾಯಕರ ನಡುವೆ ಫೇಸ್ ಬುಕ್, ಟ್ವೀಟರ್ ಒಡತನಕ್ಕೆ ಕಿತ್ತಾಟ ಆರಂಭವಾಗಿದೆ. ..

ಚೆನ್ನೈ: ಮಾಜಿ ರಾಷ್ಟ್ರಪತಿ, ಮಿಸೈಲ್ ಮ್ಯಾನ್ ಡಾ.ಎಪಿಜೆ ಅಬ್ದುಲ್ ಕಲಾಂ ಸ್ವರ್ಗಸ್ಥರಾಗಿ ಒಂದು ವಾರ ಕಳೆದಿದೆ. ಆದರೆ ಅವರ ಸಹಾಯಕರ ನಡುವೆ ಫೇಸ್ ಬುಕ್, ಟ್ವೀಟರ್ ಒಡತನಕ್ಕೆ ಕಿತ್ತಾಟ ಆರಂಭವಾಗಿದೆ.

ಶಿಲ್ಲಾಂಗ್ ನಲ್ಲಿ ಹೃದಯಾಘಾತದಿಂದ ಡಾ.ಕಲಾಂ ಅವರು ಸಾವನ್ನಪ್ಪಿದ ವೇಳೆ ಅವರ ಜೊತೆಗಿದ್ದ ಮಾಜಿ ಸಹಾಯಕ ಸೃಜನ್ ಪಾಲ್ ಸಿಂಗ್ ಈಗ ವಿವಾದದ ಕೇಂದ್ರ ಬಿಂದು.

 ಕೆಲ ವರ್ಷಗಳಿಂದ ಕಲಾಂ ಅವರ ನಿಕಟವರ್ತಿಯಾಗಿದ್ದ ಸೃಜನ್ ಪಾಲ್ ಸಿಂಗ್ ಕಲಾಂ ಅವರಿಂದ ಬೇರ್ಪಟ್ಟಿದ್ದರು ಎಂದು ಡಾ.ಅಬ್ದುಲ್ ಕಲಾಂ ಕಚೇರಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ದಿವಂಗತ ಡಾ. ಕಲಾಂ ಅವರ ಸಲಹೆಗಾರರಾಗಿರುವ ವಿ. ಪೂರ್ಣಾಜ್, ಸಿಂಗ್ ಕಲಾಂ ಅವರ ಅಧಿಕೃತ ಪ್ರತಿನಿಧಿಯಲ್ಲ, ಕಲಾಂ ಅವರು ಕೊನೆಯುಸಿರೆಳೆಯುವಾಗ ಅವರ ಜೊತೆ ಸಿಂಗ್ ಇದ್ದದ್ದು ಕೇವಲ ಆಕಸ್ಮಿಕ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ. ಸಡಜವ್ ಪಾಲ್ ಸಿಂಗ್ ಐಐಎಂ ಪದವೀಧರ ಹೀಗಾಗಿ ಅವರು ಅಲ್ಲಿಗೆ ಹೋಗಿದ್ದರು ಎಂದು ಹೇಳಿದ್ದಾರೆ.

ಡಾ. ಕಲಾಂ ಅವರು  ಸೋಮವಾರ ನಿಧನರಾದ ಕೆಲವೇ ಸಮಯದಲ್ಲಿ ಅವರ ಫೇಸ್ ಬುಕ್  ಹಾಗೂ ಟ್ವೀಟರ್ ಅಕೌಂಟ್ ನಿಂದ ಅಮರ ನೆನಪುಗಳು ಎಂದು ಅವರ ಫೋಟೋಗಳನ್ನು ಸೃಜನ್ ಪಾಲ್ ಸಿಂಗ್ ಅಪ್ ಲೋಡ್ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಪೂರ್ಣಾಜ್ ಕಲಾಂ ಅವರ ಫೇಸ್ ಬುಕ್ ಹಾಗೂ ಟ್ವೀಟರ್ ಅಕೌಂಟ್ ಗಳನ್ನು ಸೃಜನ್ ಪಾಲ್ ಸಿಂಗ್ ಅವರೇ ನಿರ್ವಹಣೇ ಮಾಡುತ್ತಿದ್ದರು. ಹೀಗಾಗಿ ಅವರು ನಿಧನದ ನಂತರ ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ ಎಂದು ಡಾ.ಕಲಾಂ ಅವರ ಜೊತೆ ಮೂರು ದಶಕಗಳಿಂದ ಒಡನಾಟದಲ್ಲಿದ್ದ ಅಧಿಕೃತ ಸಹಾಯಕರಾದ ಡಾ  ಪೂರ್ಣಾಜ್ ಹೇಳಿದ್ದಾರೆ. ಸೃಜನ್ ಪಾಲ್ ಸಿಂಗ್ ಕಲಾಂ ಅವರ ಅಧಿಕೃತ ಸಹಾಯಕರಲ್ಲ. ಎಂದು ಡಾ. ಕಲಾಂ ಅವರ ಕಚೇರಿ ಸ್ಪಷ್ಟ ಪಡಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

SCROLL FOR NEXT