ದೇಶ

ನಿತೀಶ್ ಕುಮಾರ್ ಗೆ ಸನ್ಮಾನ ಮಾಡಲಿರುವ ದೆಹಲಿ ಸಿಎಂ ಕೇಜ್ರಿವಾಲ್

Srinivas Rao BV

ನವದೆಹಲಿ: ಆ.19 ಕ್ಕೆ ನಡೆಯಲಿರುವ ಬಿಹಾರ್ ಸಮ್ಮಾನ್ ಕಾರ್ಯಕ್ರಮದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಗೆ ಸನ್ಮಾನ ಮಾಡುವುದನ್ನು ಜೆಡಿಯು ಪಕ್ಷದ ಮುಖಂಡ ಕೆ.ಸಿ ತ್ಯಾಗಿ ಖಚಿತಪಡಿಸಿದ್ದಾರೆ.

ನವದೆಹಲಿಯಲ್ಲಿರುವ ಮಾವ್ಲಂಕರ್ ಹಾಲ್ ನಲ್ಲಿ ಬಿಹಾರ ಸಮ್ಮಾನ್ ಸಮಾರಂಭ ನಡೆಯಲಿದ್ದು,  ಕೇಜ್ರಿವಾಲ್, ನಿತೀಶ್ ಕುಮಾರ್ ಅವರನ್ನು ಸನ್ಮಾನ ಮಾಡಲಿದ್ದಾರೆ. ದೆಹಲಿ ಸಿಎಂ ಬಿಹಾರದ ಜೆಡಿಯು ಗೆ ಬೆಂಬಲ ನೀಡಿದ್ದು, ನಿತೀಶ್ ಕುಮಾರ್ ಪರವಾಗಿ ಬಿಹಾರದಲ್ಲಿ ಆಮ್ ಆದ್ಮಿ ಪಕ್ಷ ಬಿಹಾರದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದು ಕೆ.ಸಿ ತ್ಯಾಗಿ ಹೇಳಿದ್ದಾರೆ.

ಚುನಾವಣಾ ಕಣವಾಗಿರುವ ಬಿಹಾರದಲ್ಲಿ ನಿತೀಶ್ ಕುಮಾರ್ ತಮ್ಮ ರಾಜಕೀಯ ಜೀವನದ ಅತ್ಯಂತ ಕಠಿಣ ಸವಾಲು ಎದುರಿಸುತ್ತಿದ್ದಾರೆ. ಈ ಹಿಂದೆ ದೆಹಲಿಗೆ ಪೂರ್ಣಪ್ರಮಾಣದ ರಾಜ್ಯದ ಸ್ಥಾನಮಾನ ನೀಡುವ ವಿಚಾರದಲ್ಲಿ ಅರವಿಂದ್ ಕೇಜ್ರಿವಾಲ್ ಗೆ ನಿತೀಶ್ ಕುಮಾರ್ ಬೆಂಬಲ ನೀಡಿದ್ದರು. ಈಗ ಬಿಹಾರ ಚುನಾವಣೆ ನಡೆಯಲಿದ್ದು ಅರವಿಂದ್ ಕೇಜ್ರಿವಾಲ್ ನಿತೀಶ್ ಕುಮಾರ್ ಗೆ ಬೆಂಬಲ ನೀಡಿದ್ದಾರೆ.

SCROLL FOR NEXT