ಸಾಂದರ್ಭಿಕ ಚಿತ್ರ 
ದೇಶ

ದೆಹಲಿ ರಾಷ್ಟ್ರದ ಅತ್ಯಾಚಾರ ನಗರ: ಎನ್ ಸಿ ಆರ್ ಬಿ

ದೆಹಲಿ ರಾಜ್ಯವು ಭಾರತ ದೇಶದ ಅತ್ಯಾಚಾರ ರಾಜಧಾನಿ ಎಂದು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ(ಎನ್ ಸಿ ಆರ್ ಬಿ)...

ನವದೆಹಲಿ: ದೆಹಲಿ ರಾಜ್ಯವು ಭಾರತ ದೇಶದ ಅತ್ಯಾಚಾರ ರಾಜಧಾನಿ ಎಂದು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ(ಎನ್ ಸಿ ಆರ್ ಬಿ) ತಿಳಿಸಿದೆ.

ಅಪರಾಧ ವಿಭಾಗ ನಡೆಸಿದ ಅಧ್ಯಯನ ಪ್ರಕಾರ, ದೆಹಲಿಯಲ್ಲಿ ಬೇರೆಲ್ಲಾ ರಾಜ್ಯಗಳಿಗಿಂತ ಹೆಚ್ಚಾಗಿ ಅತ್ಯಾಚಾರ ಪ್ರಕರಣಗಳು ನಡೆಯುತ್ತವೆ ಎಂದು ತಿಳಿದುಬಂದಿದೆ.ಕಳೆದ ವರ್ಷ ದೆಹಲಿಯಲ್ಲಿ ಸಾವಿರದ 800 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. 2013ರಲ್ಲಿ ಇಲ್ಲಿ ಸಾವಿರದ 440 ಪ್ರಕರಣಗಳು ವರದಿಯಾಗಿದ್ದವು.

ಎನ್ ಸಿಆರ್ ಬಿ ದೇಶದ 4 ಮಹಾನಗರಗಳಲ್ಲಿ ಅಧ್ಯಯನ ನಡೆಸಿದ್ದು, ಅವುಗಳಲ್ಲಿ ಕೋಲ್ಕತ್ತಾ ಸುರಕ್ಷಿತ ನಗರ ಎಂದು ಅಂಕಿಅಂಶಗಳಿಂದ ಗೊತ್ತಾಗಿದೆ. ಇಲ್ಲಿ ಕಳೆದ ವರ್ಷ 36 ಪ್ರಕರಣಗಳು ವರದಿಯಾಗಿವೆ.

ಮುಂಬೈಯಲ್ಲಿ ಶೇಕಡಾ 55ರಷ್ಟು ಅತ್ಯಾಚಾರ ಪ್ರಕರಣಗಳು ವರದಿಯಾಗಿದ್ದು, 2013ಕ್ಕಿಂತ ಕಳೆದ ವರ್ಷ ಶೇಕಡಾ 67ರಷ್ಟು ದೌರ್ಜನ್ಯ ಪ್ರಕರಣಗಳು ಇಲ್ಲಿ ವರದಿಯಾಗಿವೆ.ಉತ್ತರ ಪ್ರದೇಶದಲ್ಲಿ 197 ಪ್ರಕರಣಗಳು ಬೆಳಕಿಗೆ ಬಂದಿವೆ.

ಅಪ್ರಾಪ್ತ ವಯಸ್ಸಿನವರು ಕೂಡ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವ ಬಗ್ಗೆ ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ. ಶೇಕಡಾ 1.2ರಷ್ಟು ಮಂದಿ ಅಪರಾಧ ಪ್ರಕರಣಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತಿದ್ದಾರೆ. ಒಟ್ಟು ಅಪರಾಧಿಗಳಲ್ಲಿ ಶೇಕಡಾ 5.93ರಷ್ಟು ಅಪ್ರಾಪ್ತರು ಅತ್ಯಾಚಾರ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದಾರೆ.

ಅಪರಾಧಗಳಲ್ಲಿ ಮಹಿಳೆಯರನ್ನು, ಯುವತಿಯರನ್ನು ಮತ್ತು ಬಾಲಕಿಯರನ್ನು ಅತ್ಯಾಚಾರ ಮಾಡುವುದು, ಅತ್ಯಾಚಾರಕ್ಕೆ ಯತ್ನಿಸುವುದು, ಅಪಹರಿಸುವುದು, ವರದಕ್ಷಿಣೆ ಕಿರುಕುಳ, ಮಹಿಳೆ ಮೇಲೆ ಹಲ್ಲೆ, ಅವಮಾನ ಮಾಡುವುದು, ಮಹಿಳೆಯ ವಿನಮ್ರತೆಯನ್ನು ದುರುಪಯೋಗಪಡಿಸುವುದು, ಗಂಡನಿಂದ ಮತ್ತು ಸಂಬಂಧಿಕರಿಂದ ಕಿರುಕುಳ, ವಿದೇಶಗಳಿಂದ ಹುಡುಗಿಯರನ್ನು ಆಮದು ಮಾಡಿಕೊಳ್ಳುವುದು,ಆತ್ಮಹತ್ಯೆ ಕುಮ್ಮಕ್ಕು ನೀಡುವುದು, ಮಹಿಳೆಯನ್ನು ಕೆಟ್ಟದ್ದಾಗಿ ಬಿಂಬಿಸುವುದು, ಗೃಹ ಹಿಂಸೆ ಇತ್ಯಾದಿಗಳು ಸೇರಿಕೊಂಡಿವೆ.   

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?