ಜೆಟ್ ಏರ್ ವೇಸ್ 
ದೇಶ

ಬಾನಾಡಿಯಲ್ಲಿ ಹಾರಾಡಿದ ಬಡ ಮಕ್ಕಳು

ಬಾನಲ್ಲಿ ಹಕ್ಕಿಯಂತೆ ಹಾರಾಡಬೇಕೆಂಬ ಆಸೆಯಿರುವ ಬಡ ಮಕ್ಕಳ ಕನಸಿಗೆ ಬೀಜ ಬಿತ್ತಲು ಮತ್ತು ಅವರ ಮನಸ್ಸಿನಲ್ಲಿ ಧನಾತ್ಮಕ...

ನವದೆಹಲಿ: ಬಾನಲ್ಲಿ ಹಕ್ಕಿಯಂತೆ ಹಾರಾಡಬೇಕೆಂಬ ಆಸೆಯಿರುವ ಬಡ ಮಕ್ಕಳ ಕನಸಿಗೆ ಬೀಜ ಬಿತ್ತಲು ಮತ್ತು ಅವರ ಮನಸ್ಸಿನಲ್ಲಿ ಧನಾತ್ಮಕ ಯೋಚನೆ ಮೂಡುವಂತೆ ಮಾಡಲು ಖಾಸಗಿ ವಿಮಾನಯಾನ ಸಂಸ್ಥೆ ಜೆಟ್ ಏರ್ ವೇಸ್ 130 ಮಕ್ಕಳಿಗೆ ಒಂದು ಗಂಟೆಗಳ ಕಾಲ ಬಾನಾಡಿಯಲ್ಲಿ ವಿಶೇಷ ಹಾರಾಟ ಅವಕಾಶ ಕಲ್ಪಿಸಿತು.

ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಹಾರಾಟ ವ್ಯವಸ್ಥೆ ಮಾಡಲಾಗಿದ್ದು, ಕ್ರಿಕೆಟ್ ಪಟು ಯುವರಾಜ್ ಸಿಂಗ್ ನಾಯಕತ್ವದ ಯು ವಿ ಕ್ಯಾನ್ ಮತ್ತು ದೆಹಲಿ ನಗರ ಮೂಲದ ಎಸ್ ಡಿಎಂಸಿ ಪ್ರೈಮರಿ ಶಾಲೆ ಜೊತೆ ಸೇರಿ ಬಡ ಮಕ್ಕಳಿಗೆ ಫ್ಲೈಟ್ ಆಫ್ ಫ್ಯಾಂಟಸಿ ಎಂಬ ವಿಶೇಷ ಹಾರಾಟ ವ್ಯವಸ್ಥೆಯನ್ನು ಮಾಡಲಾಯಿತು ಎಂದು ಜೆಟ್ ಏರ್ ವೇಸ್ ಹೇಳಿಕೆಯಲ್ಲಿ ತಿಳಿಸಿದೆ.

ಸ್ವದೇಶಿ ನಿರ್ಮಿತ ಬೋಯಿಂಗ್ 737-800 ವಿಮಾನ ಇಂದಿರಾ ಗಾಂಧಿ ವಿಮಾನ ನಿಲ್ದಾಣದಿಂದ ನಿನ್ನೆ ಮಧ್ಯಾಹ್ನ ಹಾರಾಟ ಆರಂಭಿಸಿತು.ಇದರಲ್ಲಿ ಭಾಗವಹಿಸಿದ ಮಕ್ಕಳು, ವಿಶೇಷ ಅತಿಥಿಗಳು ಖುಷಿಪಟ್ಟರು. ಬಡ ಮಕ್ಕಳ ಮನಸ್ಸಿನಲ್ಲಿ ಧನಾತ್ಮಕ ಯೋಚನೆ ಹುಟ್ಟಿಸುವುದು ನಮ್ಮ ಉದ್ದೇಶವಾಗಿತ್ತು. ವಿಮಾನದಲ್ಲಿ ಕುಳಿತುಕೊಂಡು ಹಾರಾಡುವಾಗ ಮಕ್ಕಳ ಮುಖದಲ್ಲಿನ ಸಂತೋಷ ನೋಡಿ ನಮಗೆ ಧನ್ಯತೆ ಭಾವ ಮೂಡಿತು ಎಂದು ಜೆಟ್ ಏರ್ ವೇಸ್ ನ ಮುಖ್ಯ ಕಾರ್ಯನಿರ್ವಾಹಕ ಕ್ರೇಮರ್ ಬಾಲ್ ತಿಳಿಸಿದ್ದಾರೆ. ಜೆಟ್ ಏರ್ ವೇಸ್ ಮಕ್ಕಳ ಶಿಕ್ಷಣ ಅಭಿಯಾನವನ್ನು ಕೈಗೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT