ದೇಶ

ಸಂಭಾವ್ಯ ದುರಂತ ತಪ್ಪಿಸಿದ ಭಾರತೀಯ ಸೇನೆ

Srinivas Rao BV

ಕುಲಗಾಮ್: ಜಮ್ಮು-ಕಾಶ್ಮೀರದಲ್ಲಿ ಸಂಭವಿಸಬೇಕಿದ್ದ ದೊಡ್ಡ ದುರಂತವನ್ನು ಭಾರತೀಯ ಸೇನೆ ತಡೆದಿದೆ.

ಕುಲಗಾಮ್ ​ಜಿಲ್ಲೆಯ ಸರ್ಕಾರಿ ಶಾಲೆಯ ಬಳಿ ಇಡಲಾಗಿದ್ದ ಸುಧಾರಿತ ಸ್ಫೋಟಕ ಸಾಧನವನ್ನು ಪತ್ತೆ ಹಚ್ಚಿರುವ ಸೇನೆ, ಅದನ್ನು ನಿಷ್ಕ್ರಿಯಗೊಳಿಸಿದೆ. ಎಎನ್ಐ ವರದಿಯ ಪ್ರಕಾರ,  ಸೇನಾ ಗಸ್ತು ಪಡೆಯ ಸದಸ್ಯರು ಶಾಲೆಯ ಬಳಿ ಐಇಡಿಯನ್ನು ಪತ್ತೆ ಹಚ್ಚಿದ್ದಾರೆ.

ತಕ್ಷಣವೇ ಪೊಲೀಸ್ ಠಾಣೆಗೆ ಸೇನಾ ಸಿಬ್ಬಂದಿಗಳು ವಿಷಯ ತಿಳಿಸಿದ್ದಾರೆ. ಬಾಂಬ್ ನಿಷ್ಕ್ರಿಯ ದಳವನ್ನು ಕರೆಸಿ ಐಇಡಿಯನ್ನು ನಿಷ್ಕ್ರಿಯಗೊಳಿಸಲಾಗಿದೆ.

SCROLL FOR NEXT