ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ (ಸಂಗ್ರಹ ಚಿತ್ರ) 
ದೇಶ

ಗುಜರಾತ್ ಪರಿಸ್ಥಿತಿಗೆ ಮೋದಿ ರಾಜಕೀಯ ಆಟವೇ ಕಾರಣ: ರಾಹುಲ್

ಸಂಸತ್ ಗದ್ದಲದ ನಂತರ ಮತ್ತೊಮ್ಮೆ ಮೋದಿ ವಿರುದ್ಧ ವಾಗ್ದಾಳಿಗೆ ಮುಂದಾಗಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ಇದೀಗ ಪಟೇಲ್ ಸಮುದಾಯದ ಹೋರಾಟದಿಂದ ಗುಜರಾತ್ ನಲ್ಲಿ ನಿರ್ಮಾಣವಾಗಿರುವ ಪರಿಸ್ಥಿತಿಗೆ ಮೋದಿ ಅವರ ರಾಜಕೀಯ ಆಟವೇ ಕಾರಣ ಎಂದು ಶುಕ್ರವಾರ ಹೇಳಿದ್ದಾರೆ...

ಶ್ರೀನಗರ: ಸಂಸತ್ ಗದ್ದಲದ ನಂತರ ಮತ್ತೊಮ್ಮೆ ಮೋದಿ ವಿರುದ್ಧ ವಾಗ್ದಾಳಿಗೆ ಮುಂದಾಗಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ಇದೀಗ ಪಟೇಲ್ ಸಮುದಾಯದ ಹೋರಾಟದಿಂದ ಗುಜರಾತ್ ನಲ್ಲಿ ನಿರ್ಮಾಣವಾಗಿರುವ ಪರಿಸ್ಥಿತಿಗೆ ಮೋದಿ ಅವರ ರಾಜಕೀಯ ಆಟವೇ ಕಾರಣ ಎಂದು ಶುಕ್ರವಾರ ಹೇಳಿದ್ದಾರೆ.

ಈ ಕುರಿತಂತೆ ಜಮ್ಮ ಮತ್ತು ಕಾಶ್ಮೀರದಲ್ಲಿ ಮಾತನಾಡಿರುವ ಅವರು, ಮೋದಿ ಅವರು ದ್ವೇಷದ ರಾಜಕೀಯವನ್ನು ಮಾಡುತ್ತಿದ್ದು, ಅವರ ಕೋಪದ ರಾಜಕೀಯದ ಪರಿಣಾಮ ದೇಶದ ಜನತೆ ಮೇಲೆ ಬೀರುತ್ತಿದೆ. ಇದೀಗ ಗುಜರಾತ್ ನಲ್ಲಿ ನಿರ್ಮಾಣವಾಗಿರುವ ಪರಿಸ್ಥಿತಿಗೆ ಮೋದಿ ಅವರ ರಾಜಕೀಯವೇ ಕಾರಣವಾಗಿದೆ. ಜನರಲ್ಲಿರುವ ಕೋಪವನ್ನು ಅತಿರೇಖಕ್ಕೇರಿಸಿ ಪ್ರತಿಭಟನೆ ನಡೆಯುವಂತೆ ಮಾಡುವುದು ಮತ್ತು ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗುವಂತೆ ಮಾಡುವುದು ಅವರ ಉದ್ದೇಶವಾಗಿದೆ. ಈ ಸತ್ಯ ನಮಗೆ ತಿಳಿದಿದೆ. ಇಂತಹ ಪ್ರತಿಭಟನೆ, ಹಿಂಸಾಚಾರಗಳು ಮೋದಿ ಅವರಿಗೆ ಬಿಟ್ಟು ಬೇರಾರಿಗೂ ಪ್ರಯೋಜನವಿಲ್ಲ. ಗುಜರಾತ್ ನಲ್ಲಾಗುತ್ತಿರುವ ಹಿಂಸಾಚಾರವನ್ನು ಇಲ್ಲಿ ನಾವು ಗಮನಿಸುತ್ತಲೇ ಇದ್ದೇವೆ ಎಂದು ಹೇಳಿದ್ದಾರೆ.

ಇದೇ ವೇಳೆ ಎನ್ ಡಿಎ ಸರ್ಕಾರದ ವಿರುದ್ಧ ಹರಿಹಾಯ್ದ ರಾಹುಲ್, ಎನ್ ಡಿಎ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದ್ದು. ಇದೊಂದು ಸೂಟುಬೂಟು ಸರ್ಕಾರವೆಂದು ನಾವು ತಿಳಿದುಕೊಂಡಿದ್ದೆವು. ಆದರೆ, ಇತ್ತೀಚೆಗಷ್ಟೇ ಈ ಸರ್ಕಾರ ಮತ್ತೊಂದು ಮುಖವೂ ತಿಳಿಯಿತು. ಎನ್ ಡಿಎ ಸರ್ಕಾರ ಕೇವಲ 5 ಅಥವಾ 10ಜನರಿಗೆ ಮಾತ್ರವಿರುವ ಸರ್ಕಾರವೆಂದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಪರಸ್ತ್ರೀ ಮೋಹ, ನಂಬಿಕೆ ದ್ರೋಹ: ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಪಶ್ಚಿಮ ಬಂಗಾಳದಲ್ಲಿ ವಿವಾದಿತ SIR ಕುರಿತು ಮಾತುಕತೆಗೆ ಟಿಎಂಸಿಗೆ ಚುನಾವಣಾ ಆಯೋಗ ಆಹ್ವಾನ

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಕೆಲಸದ ಹೊರೆ ಖಂಡಿಸಿ ಪಶ್ಚಿಮ ಬಂಗಾಳ CEO ಕಚೇರಿ ಮುಂದೆ BLOಗಳಿಂದ ಅಹೋರಾತ್ರಿ ಧರಣಿ!

SCROLL FOR NEXT