ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ (ಸಂಗ್ರಹ ಚಿತ್ರ) 
ದೇಶ

ಗುಜರಾತ್ ಪರಿಸ್ಥಿತಿಗೆ ಮೋದಿ ರಾಜಕೀಯ ಆಟವೇ ಕಾರಣ: ರಾಹುಲ್

ಸಂಸತ್ ಗದ್ದಲದ ನಂತರ ಮತ್ತೊಮ್ಮೆ ಮೋದಿ ವಿರುದ್ಧ ವಾಗ್ದಾಳಿಗೆ ಮುಂದಾಗಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ಇದೀಗ ಪಟೇಲ್ ಸಮುದಾಯದ ಹೋರಾಟದಿಂದ ಗುಜರಾತ್ ನಲ್ಲಿ ನಿರ್ಮಾಣವಾಗಿರುವ ಪರಿಸ್ಥಿತಿಗೆ ಮೋದಿ ಅವರ ರಾಜಕೀಯ ಆಟವೇ ಕಾರಣ ಎಂದು ಶುಕ್ರವಾರ ಹೇಳಿದ್ದಾರೆ...

ಶ್ರೀನಗರ: ಸಂಸತ್ ಗದ್ದಲದ ನಂತರ ಮತ್ತೊಮ್ಮೆ ಮೋದಿ ವಿರುದ್ಧ ವಾಗ್ದಾಳಿಗೆ ಮುಂದಾಗಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ಇದೀಗ ಪಟೇಲ್ ಸಮುದಾಯದ ಹೋರಾಟದಿಂದ ಗುಜರಾತ್ ನಲ್ಲಿ ನಿರ್ಮಾಣವಾಗಿರುವ ಪರಿಸ್ಥಿತಿಗೆ ಮೋದಿ ಅವರ ರಾಜಕೀಯ ಆಟವೇ ಕಾರಣ ಎಂದು ಶುಕ್ರವಾರ ಹೇಳಿದ್ದಾರೆ.

ಈ ಕುರಿತಂತೆ ಜಮ್ಮ ಮತ್ತು ಕಾಶ್ಮೀರದಲ್ಲಿ ಮಾತನಾಡಿರುವ ಅವರು, ಮೋದಿ ಅವರು ದ್ವೇಷದ ರಾಜಕೀಯವನ್ನು ಮಾಡುತ್ತಿದ್ದು, ಅವರ ಕೋಪದ ರಾಜಕೀಯದ ಪರಿಣಾಮ ದೇಶದ ಜನತೆ ಮೇಲೆ ಬೀರುತ್ತಿದೆ. ಇದೀಗ ಗುಜರಾತ್ ನಲ್ಲಿ ನಿರ್ಮಾಣವಾಗಿರುವ ಪರಿಸ್ಥಿತಿಗೆ ಮೋದಿ ಅವರ ರಾಜಕೀಯವೇ ಕಾರಣವಾಗಿದೆ. ಜನರಲ್ಲಿರುವ ಕೋಪವನ್ನು ಅತಿರೇಖಕ್ಕೇರಿಸಿ ಪ್ರತಿಭಟನೆ ನಡೆಯುವಂತೆ ಮಾಡುವುದು ಮತ್ತು ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗುವಂತೆ ಮಾಡುವುದು ಅವರ ಉದ್ದೇಶವಾಗಿದೆ. ಈ ಸತ್ಯ ನಮಗೆ ತಿಳಿದಿದೆ. ಇಂತಹ ಪ್ರತಿಭಟನೆ, ಹಿಂಸಾಚಾರಗಳು ಮೋದಿ ಅವರಿಗೆ ಬಿಟ್ಟು ಬೇರಾರಿಗೂ ಪ್ರಯೋಜನವಿಲ್ಲ. ಗುಜರಾತ್ ನಲ್ಲಾಗುತ್ತಿರುವ ಹಿಂಸಾಚಾರವನ್ನು ಇಲ್ಲಿ ನಾವು ಗಮನಿಸುತ್ತಲೇ ಇದ್ದೇವೆ ಎಂದು ಹೇಳಿದ್ದಾರೆ.

ಇದೇ ವೇಳೆ ಎನ್ ಡಿಎ ಸರ್ಕಾರದ ವಿರುದ್ಧ ಹರಿಹಾಯ್ದ ರಾಹುಲ್, ಎನ್ ಡಿಎ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದ್ದು. ಇದೊಂದು ಸೂಟುಬೂಟು ಸರ್ಕಾರವೆಂದು ನಾವು ತಿಳಿದುಕೊಂಡಿದ್ದೆವು. ಆದರೆ, ಇತ್ತೀಚೆಗಷ್ಟೇ ಈ ಸರ್ಕಾರ ಮತ್ತೊಂದು ಮುಖವೂ ತಿಳಿಯಿತು. ಎನ್ ಡಿಎ ಸರ್ಕಾರ ಕೇವಲ 5 ಅಥವಾ 10ಜನರಿಗೆ ಮಾತ್ರವಿರುವ ಸರ್ಕಾರವೆಂದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?