ಮೇನಕಾ ಗಾಂಧಿ 
ದೇಶ

ಹವಾಮಾನ ಸಮಸ್ಯೆಗೆ ಭಾರತವೇ ಕಾರಣ

ಹವಾಮಾನ ಕುರಿತ ಪ್ಯಾರಿಸ್ ಶೃಂಗಸಭೆಯಲ್ಲಿ, ಮಾಲಿನ್ಯ ಹೊರಸೂಸುವಿಕೆ ಭಾರವನ್ನು ಭಾರತದಂತಹ ದೇಶಗಳ...

ನವದೆಹಲಿ: ಹವಾಮಾನ ಕುರಿತ ಪ್ಯಾರಿಸ್ ಶೃಂಗಸಭೆಯಲ್ಲಿ, ಮಾಲಿನ್ಯ ಹೊರಸೂಸುವಿಕೆ ಭಾರವನ್ನು ಭಾರತದಂತಹ ದೇಶಗಳ ಮೇಲೆ ಹಾಕುವುದು ನೈತಿಕವಾಗಿ ಸರಿಯಲ್ಲ ಎಂದು ಪ್ರಧಾನಮಂತ್ರಿ ಬಲವಾಗಿ ಪ್ರತಿಪಾದಿಸಿ ಗಮನ ಸೆಳೆದಿದ್ದರೆ, ಇತ್ತ ನವದೆಹಲಿಯಲ್ಲಿ ಅವರದೇ ಸಂಪುಟದ ಪ್ರಮುಖ ಸಚಿವೆ ಮೇನಕಾ ಗಾಂಧಿ ವೈರುಧ್ಯ ಹೇಳಿಕೆ ನೀಡಿದ್ದಾರೆ. 
ಚೆನ್ನೈ ಮಳೆ ಅವಾಂತರ ಕುರಿತಂತೆ ಗುರುವಾರ ಪ್ರತಿಕ್ರಿಯೆ ನೀಡಿರುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ, ಹವಾಮಾನ ಬದಲಾವಣೆಯೇ ಸಮಸ್ಯೆಗೆ ಮೂಲ ಕಾರಣವಾಗಿದ್ದು, ಈ ಜಾಗತಿಕ ಸಮಸ್ಯೆಗೆ ಭಾರತದ ಕೊಡುಗೆ ದೊಡ್ಡ ಪ್ರಮಾಣದಲ್ಲಿದೆ ಎಂದಿದ್ದಾರೆ. 
`ಪ್ರತಿ ಸಲ ಇಂಥ ಸಮಸ್ಯೆ ಎದುರಾದಾಗೆಲ್ಲ, ಪಾಶ್ಚಾತ್ಯ ದೇಶಗಳ ಕೈಗಾರೀಕರಣದಿಂದಾಗಿ ಹವಾಮಾನ ಬದಲಾಗಿದೆ ಎಂದು ದೂಷಿಸುವುದು ಸಾಮಾನ್ಯವಾಗಿದೆ. ಅವರು ಪರಿಸರ ಹಾಳುಗೆಡವಿದ್ದು 100 ವರ್ಷಗಳ ಹಿಂದೆ. ಈಗ ಭಾರತದಂಥ ದೇಶಗಳಿಂದಾಗಿ ಹವಾಮಾನ ಹಾಳಾಗುತ್ತಿದೆ ಎಂದು ಎನ್‍ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ ಮೇನಕಾ ಗಾಂಧಿ.
ಮಿಥೇನ್ ಉತ್ಪಾದನೆ ಹೆಚ್ಚಲು ಕಲ್ಲಿದ್ದಲು, ಪ್ರಾಣಿಗಳು ಹಾಗೂ ಭತ್ತ ಮುಖ್ಯ ಕಾರಣ ಎಂದು ವಿಶ್ಲೇಷಿಸಿರುವ ಸಚಿವೆ, ಜಗತ್ತಿನಲ್ಲಿ ಮಿಥೇನ್ ಮಾಲಿನ್ಯ ಹೆಚ್ಚಲು ಭಾರತ, ಚೀನಾ ಮತ್ತು ಬ್ರೆಜಿಲ್ ದೇಶಗಳೇ ಮುಖ್ಯ ಕಾರಣ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?