ಮೇನಕಾ ಗಾಂಧಿ 
ದೇಶ

ಹವಾಮಾನ ಸಮಸ್ಯೆಗೆ ಭಾರತವೇ ಕಾರಣ

ಹವಾಮಾನ ಕುರಿತ ಪ್ಯಾರಿಸ್ ಶೃಂಗಸಭೆಯಲ್ಲಿ, ಮಾಲಿನ್ಯ ಹೊರಸೂಸುವಿಕೆ ಭಾರವನ್ನು ಭಾರತದಂತಹ ದೇಶಗಳ...

ನವದೆಹಲಿ: ಹವಾಮಾನ ಕುರಿತ ಪ್ಯಾರಿಸ್ ಶೃಂಗಸಭೆಯಲ್ಲಿ, ಮಾಲಿನ್ಯ ಹೊರಸೂಸುವಿಕೆ ಭಾರವನ್ನು ಭಾರತದಂತಹ ದೇಶಗಳ ಮೇಲೆ ಹಾಕುವುದು ನೈತಿಕವಾಗಿ ಸರಿಯಲ್ಲ ಎಂದು ಪ್ರಧಾನಮಂತ್ರಿ ಬಲವಾಗಿ ಪ್ರತಿಪಾದಿಸಿ ಗಮನ ಸೆಳೆದಿದ್ದರೆ, ಇತ್ತ ನವದೆಹಲಿಯಲ್ಲಿ ಅವರದೇ ಸಂಪುಟದ ಪ್ರಮುಖ ಸಚಿವೆ ಮೇನಕಾ ಗಾಂಧಿ ವೈರುಧ್ಯ ಹೇಳಿಕೆ ನೀಡಿದ್ದಾರೆ. 
ಚೆನ್ನೈ ಮಳೆ ಅವಾಂತರ ಕುರಿತಂತೆ ಗುರುವಾರ ಪ್ರತಿಕ್ರಿಯೆ ನೀಡಿರುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ, ಹವಾಮಾನ ಬದಲಾವಣೆಯೇ ಸಮಸ್ಯೆಗೆ ಮೂಲ ಕಾರಣವಾಗಿದ್ದು, ಈ ಜಾಗತಿಕ ಸಮಸ್ಯೆಗೆ ಭಾರತದ ಕೊಡುಗೆ ದೊಡ್ಡ ಪ್ರಮಾಣದಲ್ಲಿದೆ ಎಂದಿದ್ದಾರೆ. 
`ಪ್ರತಿ ಸಲ ಇಂಥ ಸಮಸ್ಯೆ ಎದುರಾದಾಗೆಲ್ಲ, ಪಾಶ್ಚಾತ್ಯ ದೇಶಗಳ ಕೈಗಾರೀಕರಣದಿಂದಾಗಿ ಹವಾಮಾನ ಬದಲಾಗಿದೆ ಎಂದು ದೂಷಿಸುವುದು ಸಾಮಾನ್ಯವಾಗಿದೆ. ಅವರು ಪರಿಸರ ಹಾಳುಗೆಡವಿದ್ದು 100 ವರ್ಷಗಳ ಹಿಂದೆ. ಈಗ ಭಾರತದಂಥ ದೇಶಗಳಿಂದಾಗಿ ಹವಾಮಾನ ಹಾಳಾಗುತ್ತಿದೆ ಎಂದು ಎನ್‍ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ ಮೇನಕಾ ಗಾಂಧಿ.
ಮಿಥೇನ್ ಉತ್ಪಾದನೆ ಹೆಚ್ಚಲು ಕಲ್ಲಿದ್ದಲು, ಪ್ರಾಣಿಗಳು ಹಾಗೂ ಭತ್ತ ಮುಖ್ಯ ಕಾರಣ ಎಂದು ವಿಶ್ಲೇಷಿಸಿರುವ ಸಚಿವೆ, ಜಗತ್ತಿನಲ್ಲಿ ಮಿಥೇನ್ ಮಾಲಿನ್ಯ ಹೆಚ್ಚಲು ಭಾರತ, ಚೀನಾ ಮತ್ತು ಬ್ರೆಜಿಲ್ ದೇಶಗಳೇ ಮುಖ್ಯ ಕಾರಣ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT