ಮುಖ್ಯ ನ್ಯಾಯಮೂರ್ತಿ ಟಿಎಸ್ ಠಾಕೂರ್ 
ದೇಶ

ಅಸಹಿಷ್ಣುತೆ ವಿಚಾರಕ್ಕೆ ಸಂಬಂಧಿಸಿದಂತೆ ಯಾರೂ ಭಯಪಡಬೇಕಿಲ್ಲ: ಸಿಜೆಐ ಠಾಕೂರ್

ಎಲ್ಲಿಯವರೆಗೆ ನ್ಯಾಯಾಂಗವು ಸ್ವತಂತ್ರವಾಗಿರುತ್ತದೋ, ಅಲ್ಲಿಯವರೆಗೆ ಜನರ ಹಕ್ಕುಗಳನ್ನು ಯಾರಿಗೂ ಕಸಿದುಕೊಳ್ಳಲು...

ನವದೆಹಲಿ: ``ಎಲ್ಲಿಯವರೆಗೆ ನ್ಯಾಯಾಂಗವು ಸ್ವತಂತ್ರವಾಗಿರುತ್ತದೋ, ಅಲ್ಲಿಯವರೆಗೆ ಜನರ ಹಕ್ಕುಗಳನ್ನು ಯಾರಿಗೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ, ಯಾರೂ ಭಯಪಡಬೇಕಿಲ್ಲ.'' 
ಇದು ದೇಶದ ನೂತನ ಮುಖ್ಯ ನ್ಯಾಯಮೂರ್ತಿ ಟಿಎಸ್ ಠಾಕೂರ್ ಅವರ ಮನದಾಳದ ಮಾತು. ದೇಶದೆಲ್ಲೆಡೆ ಅಸಹಿಷ್ಣುತೆಯ ವಿಚಾರ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಿಜೆಐ ಅವರ ಈ ಮಾತುಗಳು ಮಹತ್ವ ಪಡೆದಿವೆ. 
ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಸಿಜೆಐ ಠಾಕೂರ್ ಅವರ ಅಸಹಿಷ್ಣುತೆಗೆ ಸಂಬಂಧಿಸಿದ ಪ್ರಶ್ನೆಗೆ ಈ ಮೇಲಿನಂತೆ ಉತ್ತರಿಸಿದ್ದಾರೆ. 
``ಅಸಹಿಷ್ಣುತೆ ಎನ್ನುವುದು ರಾಜಕೀಯ ವಿಚಾರ. ರಾಜಕಾರಣಿಗಳು ನೀಡುವ ಹಾಗೆ ನಾನು ಈ ವಿಚಾರದಲ್ಲಿ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿರುವ ನ್ಯಾ.ಠಾಕೂರ್, ``ಎಲ್ಲಿಯವರೆಗೆ ನಮ್ಮಲ್ಲಿ ನ್ಯಾಯ ಪರಿಪಾಲನೆ ಇರುತ್ತದೆಯೋ, ಸ್ವತಂತ್ರ ನ್ಯಾಯಾಂಗ ವಿರುತ್ತದೋ, ನ್ಯಾಯಾಲಯಗಳು ತಮ್ಮ ಹಕ್ಕುಗಳು ಮತ್ತು ಕರ್ತವ್ಯಗಳನ್ನು ನಿಭಾಯಿಸುತ್ತವೆಯೋ ಅಲ್ಲಿಯವರೆಗೆ ಯಾರೂ ಭಯ ಪಡಬೇಕಾಗಿಲ್ಲ, ಎಲ್ಲ ವರ್ಗಗಳ, ಎಲ್ಲ ನಾಗರಿಕರ ಹಕ್ಕುಗಳನ್ನು ರಕ್ಷಿಸುವಲ್ಲಿ ನ್ಯಾಯಾಂಗ ಸಮರ್ಥ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT