ದಾವೂದ್ ಇಬ್ರಾಹಿಂ 
ದೇಶ

ಹರಾಜು ಮೂಲಕ ದಾವೂದ್‌ನ ರೆಸ್ಟೋರೆಂಟ್ ಖರೀದಿಸಿದ ಪತ್ರಕರ್ತ

ಭೂಗತ ಲೋಕದ ದೊರೆ ದಾವೂದ್ ಇಬ್ರಾಹಿಂ ಅವರ ರೆಸ್ಟೋರೆಂಟ್‌ನ್ನು ಹರಾಜು ಮೂಲಕ ಮಾಜಿ ಪತ್ರಕರ್ತ ಎಸ್ ಬಾಲಕೃಷ್ಣನ್ ಖರೀದಿಸಿ...

ಮುಂಬೈ: ಭೂಗತ ಲೋಕದ ದೊರೆ ದಾವೂದ್ ಇಬ್ರಾಹಿಂ ಅವರ ರೆಸ್ಟೋರೆಂಟ್‌ನ್ನು ಹರಾಜು ಮೂಲಕ ಮಾಜಿ ಪತ್ರಕರ್ತ ಎಸ್ ಬಾಲಕೃಷ್ಣನ್ ಖರೀದಿಸಿದ್ದಾರೆ. ಮುಂಬೈ ಪಾಕ್‌ಮೋಡಿಯಾ ರಸ್ತೆಯಲ್ಲಿರುವ ದೆಹಲಿ ಜೈಕ್ ಎಂಬ ರೆಸ್ಟೋರೆಂಟ್‌ನ್ನು ಬಾಲಕೃಷ್ಣ ಅವರು ತಮ್ಮದಾಗಿಸಿಕೊಂಡಿದ್ದಾರೆ. ಮಹರಾಷ್ಟ್ರ ಸರ್ಕಾರ ನಡೆಸಿದ ಹರಾಜು ಪ್ರಕ್ರಿಯೆಯಲ್ಲಿ ರು. 4.8 ಕೋಟಿಗೆ ಬಾಲಕೃಷ್ಣನ್ ಅವರು ದೆಹಲಿ ಜೆಕ್‌ನ್ನು ಖರೀದಿಸಿದ್ದಾರೆ.ಕೊಲಂಬಿಯಾದ ಹೋಟೆಲ್ ಡಿಪ್ಲೋಮ್ಯಾಟ್ ನಲ್ಲಿ ಹರಾಜು ಪ್ರಕ್ರಿಯೆ ನಡೆದಿತ್ತು.
ಬಾಲಕೃಷ್ಣನ್ ಅವರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ ಎಂಬುದು ಸುದ್ದಿಯಾದೊಡನೆ ಚೋಟಾ ಶಕೀಲ್‌ನಿಂದ ಬಾಲಕೃಷ್ಣನ್‌ಗೆ ಬೆದರಿಕೆ ಬಂದಿತ್ತು. ದೇಶಸೇವಾ ಸಮಿತಿ ಎಂಬ ಎನ್‌ಜಿಒ ಪರವಾಗಿ ತಾನು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದೆ ಎಂದು ಬಾಲಕೃಷ್ಣನ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಬೆಂಗಳೂರಿನಲ್ಲಿ ನಡೆಯುವ ಪಂದ್ಯಕ್ಕೆ ಶಾಸಕರಿಗೆ 4 ವಿಐಪಿ ಟಿಕೆಟ್ ಖಾತ್ರಿಗೆ ಸ್ಪೀಕರ್ ಯುಟಿ ಖಾದರ್ ನಿರ್ದೇಶನ!

Airbnb ಮೂಲಕ ಪೆಂಟ್‌ಹೌಸ್ ಬಾಡಿಗೆ ವಿವಾದ: ಜನರ ಮೇಲೆ ಕಾರು ಹತ್ತಿಸಿದ ತಂದೆ-ಮಗ; ಮಹಿಳಾ ಟೆಕ್ಕಿ ಸಾವು, ಭೀಕರ ದೃಶ್ಯ!

ನನ್ನ ಬಿಡಪ್ಪ, ನಿನಗೆ ತಾಕತ್ತಿದ್ದರೆ ಮೋದಿಗೆ ಥೂ ಅನ್ನು ನೋಡೋಣ: ಸುನೀಲ್ ಕುಮಾರ್‌ಗೆ ಸಿದ್ದರಾಮಯ್ಯ ಸವಾಲು, Video!

ಹಾರ್ಮುಜ್ ಜಲಸಂಧಿಯನ್ನು ಮುಚ್ಚಿಸಿದ್ದ ಇರಾನ್‌ನ IRGC ನೌಕಾಪಡೆ ಮುಖ್ಯಸ್ಥ ಅಲಿರೆಜಾನನ್ನು ಹೊಡೆದುರುಳಿಸಿದ ಇಸ್ರೇಲ್!

ದಾವಣಗೆರೆ ದಕ್ಷಿಣ ಉಪಚುನಾವಣೆ: ಕಾಂಗ್ರೆಸ್‌ಗೆ ಬಂಡಾಯದ ಬಿಸಿ, Muslim ಶಾಸಕರ ಮನವೊಲಿಕೆಗೂ ಜಗ್ಗದ ಸಾದಿಕ್ ಪೈಲ್ವಾನ್!

SCROLL FOR NEXT