ಅಜೀಂ ಪ್ರೇಮ್ ಜೀ (ಸಂಗ್ರಹ ಚಿತ್ರ) 
ದೇಶ

ರಾಜಕಾರಣಕ್ಕೆ ಸಂವೇದನೆ ಬೇಕಾಗಿಲ್ಲ: ಅಜೀಂ ಪ್ರೇಮ್ ಜಿ

ರಾಜಕಾರಣದಲ್ಲಿ ಇರಬೇಕಾದರೆ ಅಂತವರು ಸಂವೇದನಾ ಶೂನ್ಯತೆಯನ್ನು ರೂಢಿಗತ ಮಾಡಿಕೊಂಡಿರಬೇಕು . ಈ ಮಾತನ್ನು ಹೇಳಿರುವುದು ದೇಶದ ಐಟಿ ದಿಗ್ಗಜ ಕಂಪನಿಗಳಲ್ಲಿ ಒಂದಾಗಿರುವ ವಿಪ್ರೊ ಕಂಪನಿಯ..

ಬೆಂಗಳೂರು: ರಾಜಕಾರಣದಲ್ಲಿ ಇರಬೇಕಾದರೆ ಅಂತವರು ಸಂವೇದನಾ ಶೂನ್ಯತೆಯನ್ನು ರೂಢಿಗತ ಮಾಡಿಕೊಂಡಿರಬೇಕು . ಈ  ಮಾತನ್ನು ಹೇಳಿರುವುದು ದೇಶದ ಐಟಿ ದಿಗ್ಗಜ ಕಂಪನಿಗಳಲ್ಲಿ ಒಂದಾಗಿರುವ ವಿಪ್ರೊ ಕಂಪನಿಯ ಅಜೀಂ ಪ್ರೇಮಜಿ.

ಇಲ್ಲಿನ ಐಐಎಂನಲ್ಲಿ ಹಳೆ ವಿದ್ಯಾರ್ಥಿಗಳ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು, ನಾನು ರಾಜಕಾರಣ ಏಕೆ ಪ್ರವೇಶಿಸಿಲ್ಲ? ಏಕೆಂದರೆ ಅದು ನನ್ನನ್ನು ಎರಡು ವರ್ಷಗಳಲ್ಲೇ ಕೊಲ್ಲುತ್ತದೆ. ರಾಜಕಾರಣದಲ್ಲಿ ಇರಬೇಕಾದರೆ ಸಂವೇದನೆ ಇಲ್ಲದಿರುವಿಕೆಯನ್ನು ರೂಡಿs ಮಾಡಿಕೊಂಡಿರಬೇಕೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ರಾಜಕಾರಣದಲ್ಲಿ ಪರಿಣಿತ,  ಜ್ಞಾನವಂತರು ಮತ್ತು ಜನಸೇವೆ ಮನೋಭಾವ ಹೊಂದಿರುವವರ ಕೊರತೆ ಇದೆ. ಹಾಗಾಗಿ ಸರ್ಕಾರ ಮತ್ತು ರಾಜಕಾರಣ ಪ್ರವೇಶಿಸುವವರನ್ನು ಪ್ರೊತ್ಸಾಹಿಸಬೇಕು . ಆದರೆ ಅವರು ಮೊದಲು ಮಾನಸಿಕವಾಗಿ ದೃಢವಾಗಿರಬೇಕು ಎಂದಿದ್ದಾರೆ.

ಜನಸೇವೆಗಾಗಿ ಅಪಾರ ಹಣವನ್ನು ನೀಡುತ್ತಿದ್ದೀರ. ಈ ಸಂದರ್ಭದಲ್ಲಿ ನೀವು ಎದುರಿಸುತ್ತಿರುವ ಸಮಸ್ಯೆ ಏನು ಎಂಬ ಪ್ರಶ್ನೆಗೆ, ಸಮಸ್ಯೆಯ ಗಾತ್ರ, ಆಳ ಮತ್ತು ಅದರ ವ್ಯಾಪ್ತಿ ನಾವು ಎದುರಿಸುತ್ತಿರು ವ ಪ್ರಮುಖ ಸಮಸ್ಯೆ ಎಂದಿದ್ದಾರೆ. ದೊಡ್ಡ ಪ್ರಮಾಣದ ಯೋಜನೆಗಳನ್ನು ಹೊಂದಿದ್ದರೂ ಅನುಷ್ಠಾನ ಸಂಸ್ಥೆಗಳ ಮೇಲೆ ಅವಲಂಬಿಸಬೇಕಾಗಿರುವುದರಿಂದ ಅಂತಿಮ ಹಂತಕ್ಕೆ ಮು್ಟ ಸಾಧ್ಯವಾಗುತ್ತಿಲ್ಲ ಇಡೀ ಸಮಸ್ಯೆ ಯ ಸಣ್ಣ ಸಮಸ್ಯೆಯನ್ನಷ್ಟೆ ತಲುಪಲು ಸಾಧ್ಯವಾಗುತ್ತಿದೆ. ಇದು ತುಂಬಾ ಬೇಸರ ಮೂಡಿಸಿದೆ, ಹಣ ಇದ್ದರೂ ವಿಶಾಲವಾಗಿ ಮುನ್ನಡೆಯಲು ಆಗುವುದಿಲ್ಲ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Nationwide strike: 'ಕಾರ್ಮಿಕ ನೀತಿ' ವಿರೋಧಿಸಿ ದೇಶಾದ್ಯಂತ ಮುಷ್ಕರ: 30 ಕೋಟಿ ಕಾರ್ಮಿಕರು ಭಾಗಿ, ಬ್ಯಾಂಕಿಂಗ್, ವಿದ್ಯುತ್ ಸೇವೆ ವ್ಯತ್ಯಯ!

ಟಿ20 ವಿಶ್ವಕಪ್ 2026: ಆಫ್ಘಾನಿಸ್ತಾನ ಬೆಂಬಿಡದ super Over ಭೂತ, ಇತಿಹಾಸ ಹೇಳೋದೇನು? 3 ಸೂಪರ್ ಓವರ್ ಕಂಡಿದ್ದ ಆ ಪಂದ್ಯ!

Dr Sreeleela: ನಟನೆ ಜೊತೆಗೇ MBBS ಪದವಿ ಪಡೆದ ಶ್ರೀಲೀಲಾ, ಪೋಷಕರ ತಬ್ಬಿ ಆನಂದ ಭಾಷ್ಮ! Video

Pakadua Vivah: ಯುವಕನಿಗೆ ಮತ್ತಿನ ಪದಾರ್ಥ ನೀಡಿ ಬಲವಂತದ ಮದುವೆ: Video Viral

ಬೆಂಗಳೂರಿನಲ್ಲಿ ಮತ್ತೊಂದು ರಸ್ತೆ ಗಲಾಟೆ: ಬಾನೆಟ್ ಮೇಲೆ ವ್ಯಕ್ತಿಯ ಎಳೆದೊಯ್ದ ಕಾರು ಜಪ್ತಿ, ಚಾಲಕ ಬಂಧನ!

SCROLL FOR NEXT