ಚಂದ್ರಯಾನ-2 (ಸಾಂಕೇತಿಕ ಚಿತ್ರ) 
ದೇಶ

2017 ಕ್ಕೆ ಚಂದ್ರಯಾನ-2 , 2019 ರಲ್ಲಿ ಸೋಲಾರ್ ಮಿಷನ್ ಗಾಗಿ ಉಪಗ್ರಹ ಉಡಾವಣೆ

ಚಂದ್ರನಲ್ಲಿ ಅನ್ವೇಷಣೆ ನಡೆಸಲು ಉದ್ದೇಶಿಸಿರುವ ಚಂದ್ರಯಾನ-2 2017 ರಲ್ಲಿ ಹಾಗೂ ದೇಶದ ಪ್ರಥಮ ಸೋಲಾರ್ ಮಿಷನ್ ಆದಿತ್ಯ ಎಲ್-1 ಯೋಜನೆ 2019 ರಲ್ಲಿ ಪ್ರಾರಂಭವಾಗಲಿದೆ.

ನವದೆಹಲಿ: ಚಂದ್ರನಲ್ಲಿ ಅನ್ವೇಷಣೆ ನಡೆಸಲು ಉದ್ದೇಶಿಸಿರುವ ಚಂದ್ರಯಾನ-2 2017 ರಲ್ಲಿ ಹಾಗೂ ದೇಶದ ಪ್ರಥಮ ಸೋಲಾರ್ ಮಿಷನ್ ಆದಿತ್ಯ ಎಲ್-1 ಯೋಜನೆ 2019 ರಲ್ಲಿ  ಪ್ರಾರಂಭವಾಗಲಿದೆ.
2017 ಕ್ಕೆ ಚಂದ್ರಯಾನ-2 ಚಂದ್ರನ ಕಕ್ಷೆಗೆ ತಲುಪಲಿದ್ದು, ಅನ್ಯಗ್ರಹ ಜೀವಸಂಕುಲದ ಬಗ್ಗೆ ಹೆಚ್ಚು ಅನ್ವೇಷಣೆ ನಡೆಸಲಿದೆ ಎಂದು ಪ್ರಧಾನಿ ಕಾರ್ಯಾಲಯದ ಸಚಿವ ಜಿತೇಂದ್ರ ಸಿಂಗ್ ಲೋಕಸಭೆಗೆ ತಿಳಿಸಿದ್ದಾರೆ.
ಸೂರ್ಯ-ಭೂಮಿಯ ಲ್ಯಾಗ್ರಾಂಜಿಯನ್ ಪಾಯಿಂಟ್(ಎಲ್-1 ) ಕಕ್ಷೆಯಲ್ಲಿ ಸೂರ್ಯನ ಕುರಿತು ಅಧ್ಯಯನ ನಡೆಸುವುದಕ್ಕಾಗಿ ಆದಿತ್ಯ ಎಲ್-1  ಯೋಜನೆ 2019 ರಲ್ಲಿ ಪ್ರಾರಂಭವಾಗಲಿದೆ. ಸೂರ್ಯ ಹೊರಗಿನ ಪದರಗಳ (ಕರೋನದ) ಅಧ್ಯಯನಕ್ಕಾಗಿ ಆದಿತ್ಯ-1 ಕೊರೊನಾಗ್ರಾಫ್ ಸೇರಿದಂತೆ ಏಳು ಉಪಗ್ರಹ ಉಪಕರಣಗಳನ್ನು ಹೊತ್ತೊಯ್ಯಲಿದೆ ಎಂದು ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ಸೋಲಾರ್ ಮಿಷನ್ ಗಾಗಿ ಸುಮಾರು 378 .53 ಕೋಟಿ ರುಪಾಯಿ ವೆಚ್ಚವಾಗಲಿದ್ದು ಸ್ಪೇಸ್ ಮಾರ್ಕೆಟಿಂಗ್ ನ ಅಡಿಯಲ್ಲಿ ಸಿಂಗಪುರದ 6 ಉಪಗ್ರಹದ ಉಡಾವಣೆಯಿಂದಾಗಿ ಭಾರತಕ್ಕೆ 26 ಮಿಲಿಯನ್ ಯುರೋಗಳಷ್ಟು ಲಾಭ ಬರಲಿದೆ ಎಂದು ಸಚಿವರು ತಿಳಿಸಿದ್ದಾರೆ.  ವಿದೇಶಗಳ ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಭಾರತ ಈ ವರೆಗೂ 15 ಮಿಲಿಯನ್ ಡಾಲರ್ ಹಾಗೂ 80 ಮಿಲಿಯನ್ ಯುರೋಗಳನ್ನು ಗಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

Mysuru Rain: ಸಿಡಿಲು ಬಡಿದು ಬೆಂಗಳೂರಿನ ಟೆಕ್ಕಿ ಸಾವು

ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಹೆಸರು ಬಹುತೇಕ ಫೈನಲ್? ಕಾಂಗ್ರೆಸ್‌ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ..!

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

SCROLL FOR NEXT