ದೇಶ

ತಮಿಳುನಾಡಿನ 4 ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ

Srinivas Rao BV
ರಾಮೇಶ್ವರಂ/ ಚೆನ್ನೈ: ಶ್ರೀಲಂಕಾ ನೌಕಾಪಡೆ 4 ಮೀನುಗಾರರನ್ನು ಬಂಧಿಸಿದೆ. ಕಚ್ಚತೀವು ಸಮೀಪ ಮೀನುಗಾರಿಕೆಯಲ್ಲಿ ನಿರತರಾಗಿದ್ದ 4 ಮೀನುಗಾರರನ್ನು ಬಂಧಿಸಲಾಗಿದ್ದು ಒಂದೇ ತಿಂಗಳಲ್ಲಿ ಮೂರನೇ ಬಾರಿಗೆ ಶ್ರೀಲಂಕಾ ನೌಕಾಪಡೆ ಭಾರತೀಯ ಮೀನುಗಾರರನ್ನು ಬಂಧಿಸಿದೆ.   
ಮೀನುಗಾರರನ್ನು ಬಂಧಿಸುತ್ತಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮಿಳುನಾಡು ಸಿಎಂ ಜಯಲಲಿತಾ ಪತ್ರ ಬರೆದ ಮರು ದಿನವೇ ಶ್ರೀಲಂಕಾ ತಮಿಳುನಾಡು ಮೀನುಗಾರರನ್ನು ಬಂಧಿಸಿದ್ದು ಈ ವರೆಗೆ ಲಂಕಾ ಬಂಧಿಸಿದ ಮೀನುಗಾರರ ಸಂಖ್ಯೆ 51ಕ್ಕೇರಿದೆ.  
ರಾಮೇಶ್ವರಂ, ಮಂಡಪಂ ಮೂಲದ ಮೀನುಗಾರರು ಕಚ್ಚತೀವು ಸಮೀಪ ಮೀನುಗಾರಿಕೆಯಲ್ಲಿ ತೊಡಗಿದ್ದ ನಾಲ್ವರು ಮೀನುಗಾರರನ್ನು ಲಂಕಾ ನೌಕಾ ಪಡೆ ವಶಕ್ಕೆ ಪಡೆದಿದ್ದು ತಲೈಮನ್ನಾರ್ ಗೆ ಕರೆದೊಯ್ಯಲಾಗಿದೆ ಎಂದು  ಮೀನುಗಾರಿಕೆ ಸಹಾಯಕ ನಿರ್ದೇಶಕ ಗೋಪಿನಾಥ್ ಮಾಹಿತಿ ನೀಡಿದ್ದಾರೆ.
SCROLL FOR NEXT