ದೇಶ

ರಾಷ್ಟ್ರೀಯ ಯುವದಿನೋತ್ಸವ ಆಚರಣೆಗೆ ಸಲಹೆ ನೀಡಲು ಯುವಜನತೆಗೆ ಪ್ರಧಾನಿ ಮೋದಿ ಆಹ್ವಾನ

Srinivas Rao BV

ನವದೆಹಲಿ: ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಅಂಗವಾಗಿ ಜ.12 ರಂದು ಆಚರಿಸಲಾಗುವ ರಾಷ್ಟ್ರೀಯ ಯುವದಿನಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ಯುವಕರಿಂದಲೇ ಸಲಹೆ ಕೇಳಿದ್ದಾರೆ. 
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ "ಸ್ವಾಮಿ ವಿವೇಕಾನಂದರ ಜನ್ಮದಿನವಾದ ಜ.12 ನ್ನು ಯುವದಿನವನ್ನಾಗಿ ಆಚರಿಸುತ್ತೇವೆ, 1995 ರಿಂದ ರಾಷ್ಟ್ರೀಯ ಯುವದಿನೋತ್ಸವವನ್ನು ಆಚರಿಸಲಾಗುತ್ತಿದ್ದು ಈ ಬಾರಿಯ ಯುವದಿನೋತ್ಸವ ರಾಯ್ ಪುರ, ಚತ್ತೀಸ್ ಗಢದಲ್ಲಿ ನಡೆಯಲಿದ್ದು ಆಚರಣೆ ನಡೆಸುವುದರ ಬಗ್ಗೆ ಯುವಜನರು ಮುಕ್ತವಾಗಿ ಸಲಹೆ ನೀಡಬಹುದು ಎಂದು ಪ್ರಧಾನಿ ಕರೆ ನೀಡಿದ್ದಾರೆ.
ಭಾರತದ ಯುಜನತೆ ಹಾಗೂ ಅಭಿವೃದ್ಧಿ, ಕೌಶಲ್ಯ ಮತ್ತು ಸಾಮರಸ್ಯ ಈ ಬಾರಿಯ ಯುವದಿನೋತ್ಸವದ ವಿಷಯವಾಗಿರಲಿದ್ದು ಇದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲು ಸಲಹೆ ಕೊಡುವಿರಾ ಎಂದು ಪ್ರಧಾನಿ ನರೇಂದ್ರ ಮೋದಿ ಯುವಕತೆಗೆ ಕರೆ ನೀಡಿದ್ದಾರೆ. ನರೇಂದ್ರ ಮೋದಿ ಮೊಬೈಲ್ ಆಪ್ ಮೂಲಕ ಯುವಜನತೆ ತಮ್ಮ ಸಲಹೆಗಳನ್ನು ನೀಡಬಹುದು ಎಂದು ಮೋದಿ ಹೇಳಿದ್ದಾರೆ.

SCROLL FOR NEXT