ಡಿ ರಾಮಾನಾಯ್ಡು (ಸಂಗ್ರಹ ಚಿತ್ರ) 
ದೇಶ

ಮೂವಿ ಮೊಘಲ್ ಗೆ ಅಂತಿಮ ವಿದಾಯ

ಬುಧವಾರ ನಿಧನರಾದ ಖ್ಯಾತ ನಿರ್ಮಾಪಕ ಡಿ ರಾಮಾನಾಯ್ಡು ಅವರ ಅಂತ್ಯ ಸಂಸ್ಕಾರ ಹೈದರಾಬಾದಿನಲ್ಲಿ ನೆರವೇರುತ್ತಿದೆ...

ಹೈದರಾಬಾದ್: ಬುಧವಾರ ನಿಧನರಾದ ಖ್ಯಾತ ನಿರ್ಮಾಪಕ ಡಿ ರಾಮಾನಾಯ್ಡು ಅವರ ಅಂತ್ಯ ಸಂಸ್ಕಾರ ಹೈದರಾಬಾದಿನಲ್ಲಿ ನೆರವೇರುತ್ತಿದೆ.

ಹೈದರಾಬಾದಿನಲ್ಲಿರುವ ರಾಮಾನಾಯ್ಡು ಸ್ಟುಡಿಯೋದಲ್ಲಿ ರಾಮಾನಾಯ್ಡು ಅವರ ಅಂತಿಮ ವಿಧಿವಿಧಾನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಬಹಿರಂಗ ಯಾತ್ರೆಯ ನಂತರ ಅವರ ಅಂತ್ಯ ಸಂಸ್ಕಾರ ನಡೆಸಲಾಗುತ್ತಿದೆ. ವಿಶೇಷವಾಗಿ ಸಿದ್ಧಪಡಿಸಲಾಗಿರುವ ವಾಹನದಲ್ಲಿ ರಾಮಾನಾಯ್ಡು ಅವರ ಪಾರ್ಥೀವ ಶರೀರದ ಯಾತ್ರೆ ನಡೆಸಲಾಗುತ್ತಿದೆ. ಸಾರ್ವಜನಿಕ ದರ್ಶನದ ಬಳಿಕ ಈಗಷ್ಟೇ ಅವರ ಪಾರ್ಥೀವ ಶರೀರರವನ್ನು ರಾಮಾನಾಯ್ಡು ಸ್ಟುಡಿಯೋಗೆ ತರಲಾಗಿದ್ದು, ಅಲ್ಲಿಯೇ ಅವರ ಅಂತಿಮ ವಿಧಿವಿಧಾನಗಳನ್ನು ನಡೆಸಲಾಗುತ್ತಿದೆ.

ತೆಲುಗು ಚಿತ್ರರಂಗಕ್ಕೆ ಅಪಾರ ಸೇವೆ ಸಲ್ಲಿಸಿದ ರಾಮಾನಾಯ್ಡು ಅವರಿಗೆ ತೆಲಂಗಾಣ ಸರ್ಕಾರದ ವತಿಯಿಂದ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಗುತ್ತಿದೆ.

ಅವರ ಪುತ್ರರಾದ ಸುರೇಶ್ ಬಾಬು ಮತ್ತು ವೆಂಕಟೇಶ್ ಅವರು ಸೇರಿದಂತೆ ವಿವಿಧ ಗಣ್ಯರು ಅಂತಿಮ ವಿಧಿವಿಧಾನದಲ್ಲಿ ಪಾಲ್ಗೊಂಡಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಕೂಡ ಇಂದು ರಾಮಾನಾಯ್ಡು ಸ್ಟುಡಿಯೋಗೆ ಆಗಮಿಸಿ ರಾಮಾನಾಯ್ಡು ಅವರ ಪಾರ್ಥೀವ ಶರೀರದ ದರ್ಶನ ಪಡೆದರು. ಅಂತೆಯೇ ಅವರು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಇನ್ನು ಕೆಸಿಆರ್ ಅವರೊಂದಿಗೆ ಅವರ ಸಂಪುಟದ ಕೆಲ ಸಚಿವರೂ ಕೂಡ ಆಗಮಿಸಿದ್ದರು. ಇದಲ್ಲದೆ ರಾಮಾನಾಯ್ಡು ಸ್ಟುಡಿಯೋದ ಸುತ್ತಮುತ್ತ ಸಾವಿರಾರು ಅಭಿಮಾನಿಗಳು ನೆರೆದಿದ್ದು, ಅಂತಿಮ ಸಂಸ್ಕಾರ ನೋಡಲು ಮುಗಿಬಿದಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ರಾಮಾನಾಯ್ಡು ಅವರು ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ಹೈದರಾಬಾದಿನ ನಿವಾಸದಲ್ಲಿ ನಿಧನರಾಗಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

2nd Test: ವಿಂಡೀಸ್ ವಿರುದ್ಧ ಕುಲದೀಪ್ ಯಾದವ್ ಭರ್ಜರಿ ಬೌಲಿಂಗ್, ವಿಶ್ವ ದಾಖಲೆ

2nd Test, Day 3: ಮೊದಲ ಇನ್ನಿಂಗ್ಸ್ ನಲ್ಲಿ 248 ರನ್ ಗೆ ವಿಂಡೀಸ್ ಆಲೌಟ್, ಫಾಲೋಆನ್ ಹೇರಿದ ಭಾರತ

SCROLL FOR NEXT