ಭಯೋತ್ಪಾದನೆ ಕೃತ್ಯಕ್ಕೆ ಹವಾಲ ಹಣ ಬಳಸುತ್ತಿದ್ದ ಉಗ್ರರು 
ದೇಶ

ಭಯೋತ್ಪಾದನೆ ಕೃತ್ಯಕ್ಕೆ ಹವಾಲ ಹಣ

ಭಟ್ಕಳದಲ್ಲಿ ಬಂಧಿತ ನಾಲ್ವರು ಶಂಕಿತ ಉಗ್ರರಿಗೆ ಭಯೋತ್ಪಾದನೆ ಕೃತ್ಯ ನಡೆಸಲು...

ಬೆಂಗಳೂರು: ಭಟ್ಕಳದಲ್ಲಿ ಬಂಧಿತ ನಾಲ್ವರು ಶಂಕಿತ ಉಗ್ರರಿಗೆ ಭಯೋತ್ಪಾದನೆ ಕೃತ್ಯ ನಡೆಸಲು ದೇಶ-ವಿದೇಶಗಳಿಂದ ಹವಾಲ ಹಣ ಬರುತ್ತಿತ್ತು!

ಇಂಥ ಆಘಾತಕಾರಿ ವಿಷಯ ತನಿಖೆಯ ಸಂದರ್ಭದಲ್ಲಿ ಬಹಿರಂಗವಾಗಿದ್ದು, ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಸುದ್ದಿಗಾರರಿಗೆ ಸೋಮವಾರ ಇದನ್ನು ತಿಳಿಸಿದ್ದಾರೆ.

ಅವರು ಹೇಳಿದ್ದಿಷ್ಟು

  • ಕಳೆದ ಬುಧವಾರ ಬೆಂಗಳೂರು, ಭಟ್ಕಳದಲ್ಲಿ ಬಂಧಿತ ಹಾಗೂ ಭಾನುವಾರ ತಡರಾತ್ರಿ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿತ ನಾಲ್ವರು ಆರೋಪಿಗಳಿಗೆ ಇಂಡಿಯನ್ ಮುಜಾಹಿದೀನ್ ಜತೆ ನಂಟಿದೆ.
  • ಈ ಉಗ್ರರಿಗೆ ಅಂತಾರಾಷ್ಟ್ರೀಯ ಮಟ್ಟದ ಭಯೋತ್ಪಾದನೆ ಸಂಘಟನೆಗಳಿಂದ ಹವಾಲ ಹಣ ಬಂದಿರುವುದು ಖಚಿತವಾಗಿದೆ. ಇವರು ಅನೇಕ ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಸಾಕಷ್ಟು ಪುರಾವೆಗಳು ಲಭ್ಯವಾಗಿವೆ.
  • ಹಲವು ರಾಷ್ಟ್ರಗಳಿಂದ ಹಣ ಬರುತ್ತಿರುವುದು ಖಚಿತವಾಗಿದ್ದು, ಯಾವ ರಾಷ್ಟ್ರಗಳಿಂದ ಬರುತ್ತಿತ್ತು ಎಂಬುದನ್ನು ಸದ್ಯಕ್ಕೆ ನಿಖರವಾಗಿ ಹೇಳಲು ಆಗುವುದಿಲ್ಲ. ಈ ಸಂಬಂಧ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುವುದು.
  • ಬಂಧಿತರ ಮನೆಯಲ್ಲಿ ಸ್ಫೋಟಕ ವಸ್ತುಗಳು ಸಿಕ್ಕಿವೆ ಎಂಬ ಕಾರಣಕಷ್ಟೇ ಅವರನ್ನು ಬಂಧಿಸಿಲ್ಲ.
  • ಈ ಹಿಂದೆ ದೇಶದ ನಾನಾ ನಗರಗಳಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲೂ ಹೋಮಿಯೋಪಥಿ ವೈದ್ಯನಾದ ಸಯ್ಯದ್ ಅಫಕ್, ಅಬ್ದುಲ್ ಸರ್ಬೂ, ಸದ್ದಾಮ್ ಹುಸೇನ್ ಹಾಗೂ ರಿಯಾಜ್ ಅಹ್ಮದ್ ಸಯ್ಯದ್ರ ಕೈವಾಡ ತನಿಖೆಯಿಂದ ರುಜುವಾತಾಗಿದೆ.
  • ಬಂಧಿತರಲ್ಲಿ ಒಬ್ಬ ಬಾಂಬ್ ತಯಾರಿಕೆಯಲ್ಲಿ ನಿಪುಣ. ಈತ ಬೆಂಗಳೂರು ಮತ್ತು ಭಟ್ಕಳವನ್ನು ಕಾರ್ಯಸ್ಥಾನವನ್ನಾಗಿ ಮಾಡಿಕೊಂಡು ತನ್ನ ಭಯೋತ್ಪಾದನಾ ಚಟುವಟಿಕೆ ನಡೆಸುತ್ತಿದ್ದ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT