ದೇಶ

ಕಳಪೆ ಬೌಲಿಂಗ್ ಹಿನ್ನಡೆಗೆ ಕಾರಣ

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ 0-2 ಅಂತರದ...

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ 0-2 ಅಂತರದ ಸೋಲನುಭವಿಸಲು ಕಳಪೆ ಬೌಲಿಂಗ್ ಕಾರಣ ಎಂದು ಮಾಜಿ ನಾಯಕ ರಾಹುಲ್ ದ್ರಾವಿಡ್ ತಿಳಿಸಿದ್ದಾರೆ.

ನಾನು ರ್ಯಾಂಕಿಂಗ್‌ಗೆ ಹೆಚ್ಚು ಪ್ರಾಮುಖ್ಯತೆ ನೀಡುವುದಿಲ್ಲ. ನಾವು ಐದನೇ ಸ್ಥಾನ ಪಡೆಯುತ್ತೇವೊ ಅಥವಾ ಏಳನೇ ಸ್ಥಾನ ಪಡೆಯುತ್ತೇವೋ ಎಂಬುದು ಪ್ರಮುಖವಲ್ಲ. ಕಾರಣ ಭವಿಷ್ಯದಲ್ಲಿ ಭಾರತ ಸುದೀರ್ಘ ಅವಧಿಗಳ ಕಾಲ ವಿದೇಶದಲ್ಲಿ ಟೆಸ್ಟ್ ಆಡುವುದಿಲ್ಲ ಕ್ರಮೇಣ ಭಾರತ ರ್ಯಾಂಕಿಂಗ್‌ನಲ್ಲಿ ಬಡ್ತಿ ಪಡೆಯಲಿದೆ.

ಇಲ್ಲಿ ಪ್ರಮುಖವಾಗಿ ಕಾಡುತ್ತಿರುವುದು ಭಾರತದ ಬೌಲಿಂಗ್. ಕಳಪೆ ಬೌಲಿಂಗ್‌ನಿಂದ ತಂಡ ಹಿನ್ನಡೆ ಅನುಭವಿಸಬೇಕಾಯಿತು ಎಂದರು. ತಂಡದಲ್ಲಿ ಬೌಲರ್‌ಗಳು ಸ್ಥಿರ ಪ್ರದರ್ಶನ ನೀಡದಿದ್ದರೆ, ಅಥವಾ ವೇಗ ಅಥವಾ ಸ್ಪಿನ್ ವಿಭಾಗದಲ್ಲಿ ವಿಶ್ವಮಾನ್ಯ ಬೌಲರ್‌ಗಳು ಇಲ್ಲದಿದ್ದರೆ ಸಹಜವಾಗಿಯೇ ರ್ಯಾಂಕಿಂಗ್‌ನಲ್ಲಿ ಕುಸಿತ ಕಾಣುತ್ತೇವೆ. ಪರಿಣಾಮಕಾರಿ ಬೌಲಿಂಗ್ ಇಲ್ಲವಾದರೆ, ಜಯದ ಫಲಿತಾಂಶ ಪಡೆಯಲು ಸಾಧ್ಯವಿಲ್ಲ ಎಂದರು.

ನಾನು ರಣಜಿ ಪಂದ್ಯಾವಳಿಯನ್ನು ನೋಡುತ್ತೇನೆ. ದೇಶಿ ಕ್ರಿಕೆಟ್‌ನಲ್ಲೂ ಹೆಚ್ಚು ಪ್ರತಿಭಾವಂತ ಬೌಲಿಂಗ್ ಅಳಕಾಶಗಳಿಲ್ಲ. ಆದರೆ, ಮುಂದಿನ 6-8 ತಿಂಗಳಲ್ಲಿ ಪರಿಸ್ಥಿತಿ ಬದಲಾಗುವ ವಿಶ್ವಾಸವಿದೆ ಎಂದರು.

ಟೀಕೆಗಳು ನ್ಯಾಯಸಮ್ಮತ: ಆಸೀಸ್ ವಿರುದ್ಧ ಟೆಸ್ಟ್ ಸರಣಿ ಸೋತ ನಂತರ ಟೀಂ ಇಂಡಿಯಾ ಬೌಲಿಂಗ್ ವಿಭಾಗದ ಮೇಲೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದ್ದು, ಈ ರೀತಿಯಾದ ಟೀಕೆಗಳು ಸಹಜ ಹಾಗೂ ನ್ಯಾಯಸಮ್ಮತ ಎಂದು ಭಾರದ ಮಾಜಿ ನಾಯಕ ಅನಿಲ್ ಕುಂಬ್ಳೆ ತಿಳಿಸಿದ್ದಾರೆ. ಭಾರತ, ಎದುರಾಳಿ ತಂಡವನ್ನು ಎರಡು ಬಾರಿ ಆಲೌಟ್ ಮಾಡಬಲ್ಲ ಉತ್ತಮ ಗುಣಮಟ್ಟದ ಬೌಲರ್‌ಗಳನ್ನು ಪಡೆಯಬೇಕು. ಅಲ್ಲದೆ ನಿರಂತರವಾಗಿ ಬೌಲರ್‌ಗಳ ಸಾಮರ್ಥ್ಯವನ್ನು ಪರಿಶೀಲಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಟೀಂ ಇಂಡಿಯಾ ಬೌಲಿಂಗ್ ವಿಭಾಗದ ಮೇಲಿನ ಟೀಕೆಗಳು ಸರಿಯಾಗಿದೆ. ನಮ್ಮಲ್ಲಿ ಉತ್ತಮ ಬೌಲರ್‌ಗಳಿದ್ದಾರೆ. ಆದರೆ, ಅವರಲ್ಲಿ ಯಾರು ಟೆಸ್ಟ್ ಮಾದರಿಗೆ ಹೊಂದಿಕೊಳ್ಳುತ್ತಾರೆ. ಹಾಗೂ ಎದುರಾಳಿ ತಂತಡದ ವಿಕೆಟ್ ಪಡೆಯಬಲ್ಲ ಬೌಲರ್ ಯಾರು ಎಂಬುದನ್ನು ಆಯ್ಕೆ ಮಾಡಬೇಕು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT