ಭೂಗತ ದೊರೆ ದಾವೂದ್ ಇಬ್ರಾಹಿಂ ಸಹೋದರ ಶೇಖ್ ಅನೀಸ್ ಇಬ್ರಾಹಿಂ 
ದೇಶ

ದಾವೂದ್ ಸೋದರನಿಗೆ ನಿರ್ಬಂಧ

ಭೂಗತ ದೊರೆ ದಾವೂದ್ ಇಬ್ರಾಹಿಂ ಆಯ್ತು, ಈಗ ಆತನ ಸಹೋದರ ಶೇಖ್ ಅನೀಸ್ ಇಬ್ರಾಹಿಂ...

ವಾಷಿಂಗ್ಟನ್: ಭೂಗತ ದೊರೆ ದಾವೂದ್ ಇಬ್ರಾಹಿಂ ಆಯ್ತು, ಈಗ ಆತನ ಸಹೋದರ ಶೇಖ್ ಅನೀಸ್ ಇಬ್ರಾಹಿಂ ಹಾಗೂ ಅವನ ಬಂಟ ಅಜೀಜ್ ಮೂಸಾ ಬಿಲಾಖಿಯಾ ವಿರುದ್ಧವೂ ಶುಕ್ರವಾರ ಅಮೆರಿಕ ನಿರ್ಬಂಧ ಹೇರಿದೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಭಾರತ ಭೇಟಿಗೆ 10 ದಿನವಷ್ಟೇ ಬಾಕಿ ಇದೆ ಎನ್ನುವಾಗ ಈ ನಿರ್ಧಾರ ಹೊರಬಿದ್ದಿದೆ.

ದಾವೂದ್‌ನ 'ಡಿ' ಕಂಪನಿ ಪರ ಮಾದಕ ವಸ್ತು ಸಾಗಣೆ, ಸುಲಿಗೆ, ಸುಪಾರಿ ಹತ್ಯೆ ಮತ್ತು ಅಕ್ರಮ ಹಣ ಸಾಗಣೆಯಂಥ ಅಪರಾಧ ಕೃತ್ಯಗಳಲ್ಲಿ ಅನೀಸ್‌ನೂ ಪಾಲುದಾರ. 1993ರ ಮುಂಬೈ ಬಾಂಬ್ ಸ್ಫೋಟ ಪ್ರಕರಣದಲ್ಲೂ ಈತ ಆರೋಪಿ.

ಇನ್ನು ಬಿಲಾಖಿಯಾ ಕೂಡ ಅನೀಸ್ ಹಾಗೂ ದಾವೂದ್‌ನ ಬಂಟ. 'ಡಿ' ಕಂಪನಿಯ ಸೂಚನೆಯಂತೆ ಮಾದಕ ವಸ್ತು ಸಾಗಣೆ, ಕೊಲೆ, ಭಯೋತ್ಪಾದನೆಯಂಥ ಚಟುವಟಿಕೆಗಳನ್ನು ಈತ ನಡೆಸುತ್ತಾನೆ. ಬಿಲಾಖಿಯಾ 1993ರ ಮುಂಬೈ ಸ್ಫೋಟದ ಸಮಯದಿಂದಲೂ ದಾವೂದ್‌ನ ಜತೆಗಿದ್ದಾನೆ. ಈತನ ವಿರುದ್ಧವೂ ಭಾರತದಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT