ಭೂಗತ ದೊರೆ ದಾವೂದ್ ಇಬ್ರಾಹಿಂ ಸಹೋದರ ಶೇಖ್ ಅನೀಸ್ ಇಬ್ರಾಹಿಂ 
ದೇಶ

ದಾವೂದ್ ಸೋದರನಿಗೆ ನಿರ್ಬಂಧ

ಭೂಗತ ದೊರೆ ದಾವೂದ್ ಇಬ್ರಾಹಿಂ ಆಯ್ತು, ಈಗ ಆತನ ಸಹೋದರ ಶೇಖ್ ಅನೀಸ್ ಇಬ್ರಾಹಿಂ...

ವಾಷಿಂಗ್ಟನ್: ಭೂಗತ ದೊರೆ ದಾವೂದ್ ಇಬ್ರಾಹಿಂ ಆಯ್ತು, ಈಗ ಆತನ ಸಹೋದರ ಶೇಖ್ ಅನೀಸ್ ಇಬ್ರಾಹಿಂ ಹಾಗೂ ಅವನ ಬಂಟ ಅಜೀಜ್ ಮೂಸಾ ಬಿಲಾಖಿಯಾ ವಿರುದ್ಧವೂ ಶುಕ್ರವಾರ ಅಮೆರಿಕ ನಿರ್ಬಂಧ ಹೇರಿದೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಭಾರತ ಭೇಟಿಗೆ 10 ದಿನವಷ್ಟೇ ಬಾಕಿ ಇದೆ ಎನ್ನುವಾಗ ಈ ನಿರ್ಧಾರ ಹೊರಬಿದ್ದಿದೆ.

ದಾವೂದ್‌ನ 'ಡಿ' ಕಂಪನಿ ಪರ ಮಾದಕ ವಸ್ತು ಸಾಗಣೆ, ಸುಲಿಗೆ, ಸುಪಾರಿ ಹತ್ಯೆ ಮತ್ತು ಅಕ್ರಮ ಹಣ ಸಾಗಣೆಯಂಥ ಅಪರಾಧ ಕೃತ್ಯಗಳಲ್ಲಿ ಅನೀಸ್‌ನೂ ಪಾಲುದಾರ. 1993ರ ಮುಂಬೈ ಬಾಂಬ್ ಸ್ಫೋಟ ಪ್ರಕರಣದಲ್ಲೂ ಈತ ಆರೋಪಿ.

ಇನ್ನು ಬಿಲಾಖಿಯಾ ಕೂಡ ಅನೀಸ್ ಹಾಗೂ ದಾವೂದ್‌ನ ಬಂಟ. 'ಡಿ' ಕಂಪನಿಯ ಸೂಚನೆಯಂತೆ ಮಾದಕ ವಸ್ತು ಸಾಗಣೆ, ಕೊಲೆ, ಭಯೋತ್ಪಾದನೆಯಂಥ ಚಟುವಟಿಕೆಗಳನ್ನು ಈತ ನಡೆಸುತ್ತಾನೆ. ಬಿಲಾಖಿಯಾ 1993ರ ಮುಂಬೈ ಸ್ಫೋಟದ ಸಮಯದಿಂದಲೂ ದಾವೂದ್‌ನ ಜತೆಗಿದ್ದಾನೆ. ಈತನ ವಿರುದ್ಧವೂ ಭಾರತದಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

ಅಭಿಷೇಕ್ ಶರ್ಮಾನನ್ನು ಮೂರೇ ಎಸೆತಗಳಲ್ಲಿ ಔಟ್ ಮಾಡುತ್ತೇನೆ: ಪಾಕ್ ನ 152.65 kmph ವೇಗಿಯ ಉದ್ಧಟತನದ ಮಾತು

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

SCROLL FOR NEXT