ಭೂಗತ ದೊರೆ ದಾವೂದ್ ಇಬ್ರಾಹಿಂ ಸಹೋದರ ಶೇಖ್ ಅನೀಸ್ ಇಬ್ರಾಹಿಂ 
ದೇಶ

ದಾವೂದ್ ಸೋದರನಿಗೆ ನಿರ್ಬಂಧ

ಭೂಗತ ದೊರೆ ದಾವೂದ್ ಇಬ್ರಾಹಿಂ ಆಯ್ತು, ಈಗ ಆತನ ಸಹೋದರ ಶೇಖ್ ಅನೀಸ್ ಇಬ್ರಾಹಿಂ...

ವಾಷಿಂಗ್ಟನ್: ಭೂಗತ ದೊರೆ ದಾವೂದ್ ಇಬ್ರಾಹಿಂ ಆಯ್ತು, ಈಗ ಆತನ ಸಹೋದರ ಶೇಖ್ ಅನೀಸ್ ಇಬ್ರಾಹಿಂ ಹಾಗೂ ಅವನ ಬಂಟ ಅಜೀಜ್ ಮೂಸಾ ಬಿಲಾಖಿಯಾ ವಿರುದ್ಧವೂ ಶುಕ್ರವಾರ ಅಮೆರಿಕ ನಿರ್ಬಂಧ ಹೇರಿದೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಭಾರತ ಭೇಟಿಗೆ 10 ದಿನವಷ್ಟೇ ಬಾಕಿ ಇದೆ ಎನ್ನುವಾಗ ಈ ನಿರ್ಧಾರ ಹೊರಬಿದ್ದಿದೆ.

ದಾವೂದ್‌ನ 'ಡಿ' ಕಂಪನಿ ಪರ ಮಾದಕ ವಸ್ತು ಸಾಗಣೆ, ಸುಲಿಗೆ, ಸುಪಾರಿ ಹತ್ಯೆ ಮತ್ತು ಅಕ್ರಮ ಹಣ ಸಾಗಣೆಯಂಥ ಅಪರಾಧ ಕೃತ್ಯಗಳಲ್ಲಿ ಅನೀಸ್‌ನೂ ಪಾಲುದಾರ. 1993ರ ಮುಂಬೈ ಬಾಂಬ್ ಸ್ಫೋಟ ಪ್ರಕರಣದಲ್ಲೂ ಈತ ಆರೋಪಿ.

ಇನ್ನು ಬಿಲಾಖಿಯಾ ಕೂಡ ಅನೀಸ್ ಹಾಗೂ ದಾವೂದ್‌ನ ಬಂಟ. 'ಡಿ' ಕಂಪನಿಯ ಸೂಚನೆಯಂತೆ ಮಾದಕ ವಸ್ತು ಸಾಗಣೆ, ಕೊಲೆ, ಭಯೋತ್ಪಾದನೆಯಂಥ ಚಟುವಟಿಕೆಗಳನ್ನು ಈತ ನಡೆಸುತ್ತಾನೆ. ಬಿಲಾಖಿಯಾ 1993ರ ಮುಂಬೈ ಸ್ಫೋಟದ ಸಮಯದಿಂದಲೂ ದಾವೂದ್‌ನ ಜತೆಗಿದ್ದಾನೆ. ಈತನ ವಿರುದ್ಧವೂ ಭಾರತದಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

BJPಗೆ ಒಂದು ಅವಕಾಶ ಕೊಡಿ, ಬಂಗಾಳದಲ್ಲಿ ಭ್ರಷ್ಟಾಚಾರ, ಒಳನುಸುಳುವಿಕೆ ಕೊನೆಗೊಳಿಸುತ್ತೇವೆ: ಅಮಿತ್ ಶಾ ಮನವಿ

ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

ಐದು ದುಬಾರಿ ಕಾರುಗಳು, ಲಕ್ಸುರಿ ಜೀವನ: ಅನೇಕ 'ಕ್ರಿಮಿನಲ್ ಕೇಸ್' ಗಳು! ED ದಾಳಿ, ಯಾರಿದು ರಾವ್ ಇಂದರ್ ಜೀತ್ ಯಾದವ್? Video

HAL ನಿರ್ಮಿತ 'ಧ್ರುವ್ ಎನ್‌ಜಿ' ಹೆಲಿಕಾಪ್ಟರ್‌ಗೆ ಸಚಿವ ರಾಮ್ ಮೋಹನ್ ನಾಯ್ಡು ಹಸಿರು ನಿಶಾನೆ

ಬಂಟ್ವಾಳ ಟೋಲ್ ಪ್ಲಾಜಾ ಸಿಬ್ಬಂದಿ ಮೇಲೆ ಹಲ್ಲೆ; ಇಬ್ಬರ ಬಂಧನ

SCROLL FOR NEXT