ದೇಶ

ಹವಾಮಾನ ಒಪ್ಪಂದ: ಭಾರತಕ್ಕೆ ಯಾರ ಒತ್ತಡವೂ ಇಲ್ಲ

ಜಾಗತಿಕ ಹವಾಮಾನ ಒಪ್ಪಂದಕ್ಕೆ ಸಂಬಂಧಿಸಿ ಭಾರತದ ಮೇಲೆ ಯಾವುದೋ ರಾಷ್ಟ್ರ ಒತ್ತಡ ಹೇರುತ್ತಿದೆ...

ನವದೆಹಲಿ: ಜಾಗತಿಕ ಹವಾಮಾನ ಒಪ್ಪಂದಕ್ಕೆ ಸಂಬಂಧಿಸಿ ಭಾರತದ ಮೇಲೆ ಯಾವುದೋ ರಾಷ್ಟ್ರ ಒತ್ತಡ ಹೇರುತ್ತಿದೆ ಎಂಬ ವಾದವನ್ನು ಪ್ರಧಾನಿ ನರೇಂದ್ರ ಮೋದಿ ತಳ್ಳಿಹಾಕಿದ್ದಾರೆ.

ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತವು ಸ್ವತಂತ್ರ ರಾಷ್ಟ್ರ. ಯಾವುದೇ ರಾಷ್ಟ್ರದ ಒತ್ತಡವೂ ಭಾರತದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಹವಾಮಾನ ಬದಲಾವಣೆ ಎನ್ನುವುದೇ ಒಂದು ಒತ್ತಡ. ಜಾಗತಿಕ ತಾಪಮಾನವೇ ಒತ್ತಡ. ಭವಿಷ್ಯದ ತಲೆಮಾರಿನ ಬಗ್ಗೆ ಯಾರಿಗೆ ಕಾಳಜಿ ಇದೆಯೋ ಅಂಥವರು ಹವಾಮಾನ ಬದಲಾವಣೆ ಬಗ್ಗೆ ಎಚ್ಚೆತ್ತುಕೊಳ್ಳುತ್ತಾರೆ. ಮುಂದಿನ ತಲೆಮಾರಿನವವರಿಗೆ ಉಜ್ವಲ ಭವಿಷ್ಯ, ಉತ್ತಮ ವಾತಾವರಣ ಒದಗಿಸಲು ನೆರವಾಗುವ ನೀತಿ ನಿಬಂಧನೆಗಳನ್ನು ಜಾರಿ ಮಾಡುತ್ತಾರೆ ಎಂದೂ ಪ್ರಧಾನಿ ಹೇಳಿದರು.

ಏತನ್ಮಧ್ಯೆ, ಸ್ವಚ್ಛ ಇಂಧನ ಮತ್ತು ಹವಾಮಾನ ಬದಲಾವಣೆ ವಿಚಾರಗಳಲ್ಲಿ ಭಾರತ-ಅಮೆರಿಕದ ಸಹಕಾರ ಹೆಚ್ಚಿಸುವುದಾಗಿ ಘೋಷಿಸಿದ ಮೋದಿ, ವರ್ಷಾಂತ್ಯದಲ್ಲಿ ಪ್ಯಾರಿಸ್‍ನಲ್ಲಿ ನಡೆಯಲಿರುವ ಹವಾಮಾನ ಸಮಾವೇಶದಲ್ಲಿ ಒಪ್ಪಂದ ಯಶಸ್ವಿಯಾಗುವ ಭರವಸೆಯಿದೆ ಎಂದರು.ಇದೇ ವೇಳೆ, ಹವಾಮಾನ ಒಪ್ಪಂದದಲ್ಲಿ ಭಾರತದ ಧ್ವನಿಗೆ ಹೆಚ್ಚಿನ ಮಹತ್ವವಿದೆ ಎಂದರು ಒಬಾಮ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT