ಕಲ್ಲಿದ್ದಲು ಹಗರಣ ತನಿಖಾ ಪ್ರಗತಿ ವರದಿ ವಿಶೇಷ ನ್ಯಾಯಾಲಯಕ್ಕೆ 
ದೇಶ

ಕಲ್ಲಿದ್ದಲು ಹಗರಣ: ವಿಶೇಷ ಕೋರ್ಟ್‌ಗೆ ವರದಿ ಸಲ್ಲಿಸಿದ ಸಿಬಿಐ

ಕಲ್ಲಿದ್ದಲು ಹಗರಣ ತನಿಖೆ ಸಂಬಂಧಿಸಿದಂತೆ ಪ್ರಕರಣ ಕುರಿತ ಪ್ರಗತಿ ವರದಿಯನ್ನು ಸಿಬಿಐ ಮುಚ್ಚಿದ...

ನವದೆಹಲಿ: ಕಲ್ಲಿದ್ದಲು ಹಗರಣ ತನಿಖೆ ಸಂಬಂಧಿಸಿದಂತೆ ಪ್ರಕರಣ ಕುರಿತ ಪ್ರಗತಿ ವರದಿಯನ್ನು ಸಿಬಿಐ ಮುಚ್ಚಿದ ಲಕೋಟೆಯಲ್ಲಿರಿಸಿ ಮಂಗಳವಾರ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದೆ.

ಕಲ್ಲಿದ್ದಲು ಹಗರಣ ತನಿಖೆ ಸಂಬಂಧಿಸಿದಂತೆ ಪ್ರಕರಣದ ಬೆಳವಣಿಗೆಗಳ ಕುರಿತ ಪ್ರಗತಿ ವರದಿಯನ್ನು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸುವಂತೆ 2014ರ ಡಿಸೆಂಬರ್ 16 ರಂದು ಸಿಬಿಐಗೆ ಆದೇಶ ನೀಡಿತ್ತು. ಅಲ್ಲದೆ, ಪ್ರಧಾನಿ ಮನಮೋಹನ್ ಸಿಂಗ್ ಅವರು ಕಲ್ಲಿದ್ದಲು ಖಾತೆಯನ್ನು ನಿರ್ವಹಿಸುತ್ತದ್ದ ವೇಳೆ ಹಿಂಡಾಲ್ಕೋಗೆ ತಲಾಬ್ರಿಯಾ 2 ಮತ್ತು 3 ಕಲ್ಲಿದ್ದಲು ಬ್ಲಾಕ್ ಹಂಚಿಕೆಯಾಗಿರುವುದರಿಂದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಹಾಗೂ ಉನ್ನತ ಪಿಎಂಓ ಅಧಿಕಾರಿಗಳನ್ನು ಪ್ರಶ್ನಿಸುವಂತೆ ಸೂಚನೆ ನೀಡಿತ್ತು.

ನ್ಯಾಯಾಲಯದ ಆದೇಶದಂತೆ ಸಿಬಿಐ ಅಧಿಕಾರಿಗಳು ಎರಡು ದಿನಗಳ ಕಾಲ ಮನ ಮೋಹನ್‌ಸಿಂಗ್ ಅವರನ್ನು ವಿಚಾರಣೆಗೊಳಪಡಿಸಿದ್ದರು.

ಏನಿದು ಪ್ರಕರಣ?

ಉದ್ಯಮಿ ಕುಮಾರ ಮಂಗಲಂ ಬಿರ್ಲಾಗೆ ಸೇರಿದ ಹಿಂಡಾಲ್ಕೋ ಕಂಪನಿಗೆ ವಿತರಸಲಾಗಿದ್ದ ತಲಬಿರಾ-2 ಬ್ಲಾಕ್‌ಗೆ ಸಂಬಂಧಿಸಿ ಸಿಂಗ್ ಅವರನ್ನು ವಿಚಾರಣೆ ನಡೆಸಲಾಗಿತ್ತು. ಈ ಬ್ಲಾಕ್ ಹಂಚಿಕೆ ವೇಳೆ ಕಲ್ಲಿದ್ದಲು ಖಾತೆಯನ್ನು ಪ್ರಧಾನಿಯಾಗಿದ್ದ ಸಿಂಗ್ ಅವರು ತಮ್ಮ ಬಳಿಯೇ ಉಟ್ಟುಕೊಂಡಿದ್ದರು. ಒಡಿಶಾದ ತಲಬಿರಾ-2ಬ್ಲಾಕ್ ಹಂಚಿಕೆ ಮಾಡುವಂತೆ ಕೋರಿ ಉದ್ಯಮಿ ಕುಮಾರ ಮಂಗಲಂ ಬಿರ್ಲಾ ಅವರು 2005ರ ಮೇ7 ಮತ್ತು 17ರಂದು ಪ್ರಧಾನಿಗೆ ಪತ್ರ ಬರೆದಿದ್ದರು.

ಈ ವೇಳೆ ಕಲ್ಲಿದ್ದಲು ಸಚಿವಾಲಯ ಹಾಗೂ ಪ್ರಧಾನಿ ಕಾರ್ಯಾಲಯದಲ್ಲಿ ನಡೆದ ಬೆಳವಣಿಗೆಗಳ ಕುರಿತ ಮಾಹಿತಿಗಾಗಿ ಸಿಬಿಐ ಅಧಿಕಾರಿಗಳು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಪ್ರಶ್ನಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

SCROLL FOR NEXT