ದೇಶ

ಸಿಂಧುರತ್ನ ದುರಂತ: ಏಳು ನೌಕಾಧಿಕಾರಿಗಳು ದೋಷಿಗಳು

ಕಳೆದ ವರ್ಷ ಐಎನ್‍ಎಸ್ ಸಿಂಧುರತ್ನದಲ್ಲಿ ಸಂಭವಿಸಿದ ಅಗ್ನಿ ಅನಾಹುತ ಪ್ರಕರಣ ಸಂಬಂಧ...

ನವದೆಹಲಿ: ಕಳೆದ ವರ್ಷ ಐಎನ್‍ಎಸ್ ಸಿಂಧುರತ್ನದಲ್ಲಿ ಸಂಭವಿಸಿದ ಅಗ್ನಿ ಅನಾಹುತ ಪ್ರಕರಣ ಸಂಬಂಧ ಸಮರನೌಕೆಯ ಕಮಾಂಡಿಂಗ್ ಆಫೀಸರ್ ವಿರುದ್ಧ ಕೋರ್ಟ್ ಮಾರ್ಷಲ್ (ಸೇನಾ ವಿಚಾರಣೆ)ಗೆ ಅನುಮತಿ ನೀಡಲಾಗಿದೆ.

ಜತೆಗೆ ಇತರೆ 6 ಅಧಿಕಾರಿಗಳಿಗೆ `ಗಂಭೀರ ಅತೃಪ್ತಿ' ಪತ್ರವನ್ನು ರವಾನಿಸಲಾಗಿದೆ. ನೌಕಾ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಲು ಅನುಮತಿ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಶಿಫಾರಸಿಗೆ ನೌಕಾ ಪ್ರಧಾನ ಕಚೇರಿ ಒಪ್ಪಿಗೆ ನೀಡಿದೆ. ಹೀಗಾಗಿ ಸದ್ಯದಲ್ಲೇ ಸಿಂಧುರತ್ನ ಸಮರನೌಕೆಯ ಕಮಾಂಡಿಂಗ್ ಅಧಿಕಾರಿ ಸಂದೀಪ್ ಸಿನ್ಹಾ ವಿರುದ್ಧ ಸೇನಾ ವಿಚಾರಣೆ ಆರಂಭವಾಗಲಿದೆ.

ಇದೇ ವೇಳೆ, `ಗಂಭೀರ ಅತೃಪ್ತಿ' ಪತ್ರ ಜಾರಿಯಾಗಿರುವ ಅಧಿಕಾರಿಗಳು ಮುಂದಿನ 2 ವರ್ಷಗಳ ಕಾಲ ಯಾವುದೇ ಬಡ್ತಿ, ಅಧ್ಯಯನ ಅಥವಾ ವಿದೇಶದಲ್ಲಿ ನಿಯೋಜನೆಗೆ ಅನರ್ಹರಾಗುತ್ತಾರೆ ಎಂದು ನೌಕಾ ಮೂಲಗಳು ತಿಳಿಸಿವೆ. ಕಳೆದ ಫೆ.26ರಂದು ಮುಂಬೈ ಕರಾವಳಿಯಾಚೆ ಸಿಂಧುರತ್ನದಲ್ಲಿ ಬೆಂಕಿ ಅನಾಹುತ ಸಂಭವಿಸಿತ್ತು. ಈ ಘಟನೆಯ ನೈತಿಕ ಹೊಣೆಹೊತ್ತು ಅದೇ ದಿನ ನೌಕಾಪಡೆ ಮುಖ್ಯಸ್ಥ ಜೋಷಿ ಅವರು ರಾಜಿನಾಮೆ ನೀಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT