ಬಿಗ್‌ಬಾಸ್-8 ವಿನ್ನರ್ ಗೌತಮ್ ಗುಲಾಟಿ 
ದೇಶ

ಗೌತಮ್ ಗುಲಾಟಿ ಬಿಗ್‌ಬಾಸ್-8 ವಿನ್ನರ್

ಗೌತಮ್ ಗುಲಾಟಿಗೆ ಬಿಗ್‌ಬಾಸ್ ಮುಕುಟವೇರಿದೆ. ಕರೀಷ್ಮಾ ತನ್ನಾ ಬಿಗ್‌ಬಾಸ್8ನ ರನ್ನರ್ ಅಪ್ ಆಗಿದ್ದಾರೆ...

ಗೌತಮ್ ಗುಲಾಟಿಗೆ ಬಿಗ್‌ಬಾಸ್ ಮುಕುಟವೇರಿದೆ. ಕರೀಷ್ಮಾ ತನ್ನಾ ಬಿಗ್‌ಬಾಸ್8ನ ರನ್ನರ್ ಅಪ್ ಆಗಿದ್ದಾರೆ.

ಶನಿವಾರ ನಡೆದ ಗ್ರಾಂಡ್ ಫಿನಾಲೆಯಲ್ಲಿ ಐವರು ಸ್ಪರ್ಧಿಗಳ ನಡುವೆ ತೀವ್ರ ಹಣಾಹಣಿ ಇತ್ತು. ಕರೀಷ್ಮಾ ತನ್ನಾ, ಡಿಂಪಿ ಮಹಾಜನ್, ಅಲಿ ಕುಲಿ ಮಿರ್ಜಾ, ಗೌತಮ್ ಗುಲಾಟಿ ಹಾಗೂ ಪ್ರೀತಂ ನಡುನೆ ತೀವ್ರ ಸ್ಪರ್ಧೆ ಇತ್ತು, ಆದರೆ ಡಿಂಪಿ ಮಹಾಜನ್ ಮತ್ತು ಅಲಿ ಕುಲಿ ಮಿರ್ಜಾ ಆರಂಭದಲ್ಲೇ ಬಿಗ್‌ಬಾಸ್ ಮನೆಯಿಂದ ಹೊರ ಬಂದರು.

ಕರೀಷ್ಮಾ ತನ್ನಾ, ಗೌತಮ್ ಗುಲಾಟಿ ಹಾಗೂ ಪ್ರೀತಂ ಮನೆಯಲ್ಲೇ ಉಳಿದಿದ್ದರು. ಈ ಮೂವರನ್ನು ವಿಶೇಷ ರೂಂ ಒಂದಕ್ಕೆ ಕರೆತಂದು ಆಫರ್ ನೀಡಲಾಯಿತು. ಮೂವರಲ್ಲಿ ಯಾರಿಗೆ ಕಾರ್ಯಕ್ರಮದಲ್ಲಿ ಗೆಲ್ಲುವ ವಿಶ್ವಾಸವಿರುವುದಿಲ್ಲವೋ ಅವರು 25 ಲಕ್ಷವನ್ನು ತೆಗೆದುಕೊಂಡು ಕಾರ್ಯಕ್ರಮದಿಂದ ಹೊರ ಬರಬಹುದು ಎಂದು. ಈ ಆಫರ್ ಅನ್ನು ಪ್ರೀತಂ ಒಪ್ಪಿಕೊಂಡು ಹೊರಬಂದರು ಆದರೆ ಪ್ರೀತಂ ಅವರ ತೀರ್ಮಾನದಿಂದ ಅವರ ಪತ್ನಿ ಕಾರ್ಯಕ್ರಮದಲ್ಲೇ ಅಸಮಾಧಾನ ವ್ಯಕ್ತಪಡಿಸಿದ್ದರು.

ನಂತರ ಕರೀಷ್ಮಾ ತನ್ನಾ ಹಾಗೂ ಗೌತಮ್ ಗುಲಾಟಿ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ನಂತರ ಇವರಿಬ್ಬರನ್ನು ರಿಯಾಲಿಟಿ ಶೋನ ಸ್ಟೇಜ್‌ಗೆ ಕರೆತಂದು ಬಿಗ್‌ಬಾಸ್ 8 ರ ವಿಜೇತರನ್ನು ಫರಾಖಾನ್ ಘೋಷಿಸಿದರು. ಬಹುತೇಕ ಬಿಗ್‌ಬಾಸ್ ಸ್ಪರ್ಧಿಗಳು ಫಿನಾಲೆಯಲ್ಲಿ ಪಾಲ್ಗೊಂಡಿದ್ದರು. ಇವರ ನೃತ್ಯ, ಮಾತುಗಳೂ ಪ್ರೇಕ್ಷಕರ ಗಮನ ಸೆಳೆಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

SCROLL FOR NEXT