ಅಜ್ಮೇರ್ ಬಾಂಬ್ ಸ್ಫೋಟದ ಚಿತ್ರ 
ದೇಶ

ಅಜ್ಮೇರ್ ಸ್ಫೋಟ ಸಾಕ್ಷಿಗಳೂ ಉಲ್ಟಾ!

ಅಜ್ಮೇರ್ ಬಾಂಬ್ ಸ್ಫೋಟ ಪ್ರಕರಣದ ವಿಚಾರಣೆಯಲ್ಲಿ ರಾಷ್ಟ್ರೀಯ ತನಿಖಾ ದಳಕ್ಕೆ ಹಿನ್ನಡೆಯಾಗಿದ್ದು, 13 ಸಾಕ್ಷಿಗಳೂ ಪ್ರತಿಕೂಲವಾಗಿ ಪರಿಣಮಿಸಿವೆ...

ಜೈಪುರ/ನವದೆಹಲಿ: ಅಜ್ಮೇರ್ ಬಾಂಬ್ ಸ್ಫೋಟ ಪ್ರಕರಣದ ವಿಚಾರಣೆಯಲ್ಲಿ ರಾಷ್ಟ್ರೀಯ ತನಿಖಾ ದಳಕ್ಕೆ ಹಿನ್ನಡೆಯಾಗಿದ್ದು, 13 ಸಾಕ್ಷಿಗಳೂ ಪ್ರತಿಕೂಲವಾಗಿ ಪರಿಣಮಿಸಿವೆ. 2007ರ ಅಕ್ಟೋಬರ್‍ನಲ್ಲಿ ನಡೆದಿದ್ದ ಅಜ್ಮೇರ್ ಸ್ಫೋಟದಲ್ಲಿ ಮೂವರು ಮೃತಪಟ್ಟು ಹಲವರು ಗಾಯಗೊಂಡಿದ್ದರು.

ಆರಂಭದಲ್ಲಿ ರಾಜಸ್ಥಾನದ ಉಗ್ರ ನಿಗ್ರಹ ಪಡೆ ತನಿಖೆ ಕೈಗೆತ್ತಿಕೊಂಡಿತ್ತಾದರೂ, ನಂತರದಲ್ಲಿ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‍ಐಎ) ಪ್ರಕರಣ ವರ್ಗಾವಣೆ-ಗೊಂಡಿತ್ತು. ಆರ್‍ಎಸ್ ಎಸ್‍ನ ಮಾಜಿ ಕಾರ್ಯಕರ್ತರು ಮತ್ತು ಹಿಂದೂ ಮೂಲಭೂತವಾದಿಗಳು ಎನ್ನಲಾದ 12 ಜನರ ವಿರುದಟಛಿ ಎನ್‍ಐಎ ದೋಷಾರೋಪಪಟ್ಟಿ ಸಲ್ಲಿಸಿತ್ತು.

`` ಈ ಇಡೀ ಪ್ರಕರಣ ಈ ಸಾಕ್ಷಿಗಳ ಮೇಲೆ ನಿಂತಿದೆ. ಎಲ್ಲರೂ ಮ್ಯಾಜಿಸ್ಟ್ರೇಟ್ ಎದುರು ಸಾಕ್ಷಿ ನುಡಿದಿದ್ದರು. ಅದರೆ, ಈಗ ಪ್ರತಿಕೂಲ ಹೇಳಿಕೆ ನೀಡು- ತ್ತಿದ್ದಾರೆ,'' ಅಜ್ಮೇರ್ ಸ್ಫೋಟ ಪ್ರಕರಣದ ಸಹಾಯಕ ಸಾರ್ವಜನಿಕ ಅಭಿಯೋಜಕಿ ಆಶ್ವಿನಿ ಶರ್ಮಾ ಹೇಳಿದ್ದಾರೆ. ``ಎನ್ಐಎಯಿಂದ ಯಾವುದೇ ಒತ್ತಡ ಇಲ್ಲ,'' ಎಂದು ಆರಂಭದಲ್ಲಿ ಹೇಳಿದ್ದ ಸಾಕ್ಷಿಗಳು, 2014ರಿಂದ ಈಚೆಗೆ ಪ್ರತಿಕೂಲ ಹೇಳಿಕೆ ನೀಡಲು ಆರಂಬಿsಸಿದ್ದಾರೆ. 2015ರ ಮೇ ತಿಂಗಳಿಂದಾಚೆಗೆ ಎಲ್ಲರೂ ವ್ಯತಿರಿಕ್ತ ಸಾಕ್ಷಿ ನುಡಿದಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

SCROLL FOR NEXT