ರಾಜಸ್ಥಾನ ರಾಜ್ಯಪಾಲ ಕಲ್ಯಾಣ್‍ಸಿಂಗ್ 
ದೇಶ

ರಾಷ್ಟ್ರಗೀತೆಯಲ್ಲಿ `ಅಧಿನಾಯಕ' ಪದ ಬದಲಿಸಿ: ಕಲ್ಯಾಣ್ ಸಿಂಗ್

ರಾಷ್ಟ್ರಗೀತೆಯ ಬಗ್ಗೆ ಚಕಾರವೆತ್ತುವ ಮೂಲಕ ರಾಜಸ್ಥಾನದ ರಾಜ್ಯಪಾಲ ಕಲ್ಯಾಣ್‍ಸಿಂಗ್ ವಿವಾದಕ್ಕೆ ಗುರಿಯಾಗಿದ್ದಾರೆ. ಹಲವು ವರ್ಷಗಳಿಂದ ರಾಷ್ಟ್ರಗೀತೆಯ ಬಗ್ಗೆ ಅಪಸ್ವರಗಳು ಕೇಳಿಬರುತ್ತಿದ್ದರೂ, ಸದ್ಯಕ್ಕೆ ತಣ್ಣಗಿದ್ದ...

ಜೈಪುರ: ರಾಷ್ಟ್ರಗೀತೆಯ ಬಗ್ಗೆ ಚಕಾರವೆತ್ತುವ ಮೂಲಕ ರಾಜಸ್ಥಾನದ ರಾಜ್ಯಪಾಲ ಕಲ್ಯಾಣ್‍ಸಿಂಗ್ ವಿವಾದಕ್ಕೆ ಗುರಿಯಾಗಿದ್ದಾರೆ. ಹಲವು ವರ್ಷಗಳಿಂದ ರಾಷ್ಟ್ರಗೀತೆಯ ಬಗ್ಗೆ ಅಪಸ್ವರಗಳು ಕೇಳಿಬರುತ್ತಿದ್ದರೂ, ಸದ್ಯಕ್ಕೆ ತಣ್ಣಗಿದ್ದ ವಿವಾದವನ್ನು ಕಲ್ಯಾಣ್‍ಸಿಂಗ್ ಮಂಗಳವಾರ ಮತ್ತೆ ಬಡಿದೆಬ್ಬಿಸಿದ್ದಾರೆ.

ರಾಜಸ್ಥಾನ ವಿವಿ ಘಟಿಕೋತ್ವದಲ್ಲಿ ಭಾಗಿಯಾಗಿದ್ದ ಕಲ್ಯಾಣ್ ಸಿಂಗ್ ಅವರು, ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ, ರಾಷ್ಟ್ರಗೀತೆಯ `ಜನಗಣ ಮನ ಅಧಿನಾಯಕ ಜಯಹೇ...' ಸಾಲಿನಲ್ಲಿ `ಅಧಿನಾಯಕ' ಪದ ಬ್ರಿಟಿಷ್ ಅಧಿಕಾರವನ್ನು ಹೊಗಳುತ್ತದೆ. ಆದ್ದರಿಂದ ಆ ಪದವನ್ನು ತೆಗೆದುಹಾಕಿ ಅದರ ಬದಲಿಗೆ `ಮಂಗಳ'ಎಂಬ ಪದ ಬಳಸಬೇಕು. `ಜನಗಣಮನ ಮಂಗಳ ಗಾಯೆ...' ಎಂದು ಹಾಡಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

``ರವೀಂದ್ರನಾಥ್ ಟಾಗೋರ್ ಬಗ್ಗೆ ನನಗೆ ಅಪಾರ ಗೌರವವಿದೆ. ನನ್ನ ಆಕ್ಷೇಪ ರಾಷ್ಟ್ರಗೀತೆಯ ಆ ಪದದ ಬಗ್ಗೆ ಮಾತ್ರ. ರಾಜ್ಯಪಾಲರನ್ನು ಮಹಾಮಹಿಮ್, ಹಿಸ್‍ಎಕ್ಸಲೆನ್ಸಿ ಎಂದು ಸಂಬೋಧಿಸುವುದಕ್ಕೂ ಆಕ್ಷೇಪ ವ್ಯಕ್ತಪಡಿಸುತ್ತಿದ್ದೇನೆ'' ಎಂದಿದ್ದಾರೆ. ಕೆಲ ದಿನಗಳ ಹಿಂದೆ ಅಕ್ಬರ್ ಮತ್ತು ರಾಣಾಪ್ರತಾಪ್ ರನ್ನು ತುಲನೆ ಮಾಡಿ, ರಾಣಾಪ್ರತಾಪ್ ಗ್ರೇಟ್ ಎಂದು ಸುದ್ದಿ ಮಾಡಿದ್ದ ಕಲ್ಯಾಣ್‍ಸಿಂಗ್, ಆ ಮಾತುಗಳನ್ನು ಪುನರುಚ್ಚರಿಸಿ, ಔರಂಗ್‍ಜೇಬ್‍ಗಿಂತ ಶಿವಾಜಿ ಶ್ರೇಷ್ಠ, ವಿಕ್ಟೋರಿಯಾ ರಾಣಿಗಿಂತ ಝಾನ್ಸಿರಾಣಿ ಶ್ರೇಷ್ಟ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

ಡಿ ಕೆ ಶಿವಕುಮಾರ್ ಹಿಂದೂ ಜನರ ಭಾವನೆಗಳಿಗೆ ನೋವುಂಟುಮಾಡಿದ್ದು ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

SCROLL FOR NEXT