ಚಿತ್ರಕೃಪೆ-ಎಎಫ್ ಫಿ 
ದೇಶ

ಗುಜರಾತ್ ನ ಗಿರ್ ಅಭಯಾರಣ್ಯದಲ್ಲಿ 11 ಸಿಂಹದ ಮರಿ ಜನನ

ನಾಲ್ಕು ಸಿಂಹಿಣಿಗಳು 11 ಮರಿ ಸಿಂಹಗಳಿಗೆ ಜನ್ಮ ನೀಡಿದ್ದು ಎಲ್ಲಾ ಮರಿಗಳು ಆರೋಗ್ಯವಾಗಿವೆ...

ಅಹಮದಾಬಾದ್: ದಿಢೀರ್ ಪ್ರವಾಹದಿಂದ ಗುಜರಾತ್ ನಲ್ಲಿ 10 ಸಿಂಹಗಳು ಸಾವನ್ನಪ್ಪಿದ ಆಘಾತಕಾರಿ ಸುದ್ದಿಯ ನಂತರ ಇದೀಗ ಗಿರ್ ಅಭಯಾರಣ್ಯ ಸಿಹಿ ಸುದ್ದಿ ಬಂದಿದೆ. ನಾಲ್ಕು ಸಿಂಹಿಣಿಗಳು 11 ಮರಿ ಸಿಂಹಗಳಿಗೆ ಜನ್ಮ ನೀಡಿದ್ದು ಎಲ್ಲಾ ಮರಿಗಳು ಆರೋಗ್ಯವಾಗಿವೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಇಡೀ ಪ್ರಪಂಚದಲ್ಲೇ ಗುಜರಾತ್  500 ಹುಲಿಗಳನ್ನು ಹೊಂದಿರುವ ಬೃಹತ್ ಅಭಯಾರಣ್ಯವಾಗಿದೆ.

ಕಳೆದ ತಿಂಗಳು ಉಂಟಾದ ಪ್ರವಾಹ ಪರಿಸ್ಥಿತಿಯಲ್ಲಿ ಗಿರ್ ಅಭಯಾರಣ್ಯದಲ್ಲಿ ಜಲಾವೃತವಾಗಿತ್ತು. ಸುಮಾರು 9 ಅಡಿ ನೀರು ಅರಣ್ಯದಲ್ಲಿ ಸಂಗ್ರಹವಾಗಿತ್ತು. ಇದರಿಂದ ಅನಾರೋಗ್ಯಪೀಡಿತವಾಗಿದ್ದ ಸುಮಾರು 10 ಸಿಂಹಗಳು ಸಾವನ್ನಪ್ಪಿದ್ದವು.
ಈ ವೇಳೆ ಗಿರ್ ಅಭಯಾರಣ್ಯದಿಂದ ಸಿಂಹಗಳನ್ನು ಬೇರೆಡೆ  ಸ್ಥಳಾಂತರಗೊಳಿಸಬೇಕೆಂಬುದರ ಬಗ್ಗೆ ಚರ್ಚೆಯೂ ನಡೆದಿತ್ತು. ಸಿಂಹಗಳು ವಾಸಿಸಲು ಸೂಕ್ಚವಾಗಿರುವ ದೇಶದ ಬೇರೆ ಅಭಯಾರಣ್ಯಗಳಿಗೆ ಸ್ಥಳಾಂತರಗೊಳಿಸಬೇಕೆಂದು ಅನೇಕ ವನ್ಯಜೀವಿ ತಜ್ಞರು ಆಗ್ರಹಿಸಿದ್ದರು.

2013 ರಲ್ಲಿ ಸುಪ್ರಿಂ ಕೋರ್ಟ್ ಸೂಚನೆಯಂತೆ ಮದ್ಯಪ್ರದೇಶಕ್ಕೆ ಕೆಲವು ಸಿಂಹಗಳನ್ನು ಸ್ಥಳಾಂತರ ಮಾಡಲಾಗಿತ್ತು. ಆದರೆ ಗುಜರಾತ್ ಸರ್ಕಾರ ಸಿಂಹಗಳ ಸ್ಥಳಾಂತರಗೊಳಿಸುವ ವಿಷಯವನ್ನು ಖಡಾಖಂಡಿತವಾಗಿ ತಿರಸ್ಕರಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮೂಡಾ ಅಕ್ರಮಕ್ಕೆ ಬ್ರೇಕ್: ₹2000 ಕೋಟಿ ಮೌಲ್ಯದ 1,100 ಸೈಟುಗಳ ಹಂಚಿಕೆ ರದ್ದು ಮಾಡಿದ ಯತೀಂದ್ರ ಸಿದ್ದರಾಮಯ್ಯ

ರೋಚಕ ಪಂದ್ಯದಲ್ಲಿ ಭಾರತ 5-3 ಗೋಲುಗಳಿಂದ ಪಾಕಿಸ್ತಾನವನ್ನು ಸೋಲಿಸಿ ವಿಶ್ವಕಪ್‌ನಿಂದ ಹೊರದೂಡಿದೆ!

ಕರ್ನಾಟಕದ ಇತಿಹಾಸದಲ್ಲೇ ಮೊದಲು: ಪ್ರತಿಭಟಿಸುವುದಾದರೆ ಸದನದ ಬಾವಿಗೆ ಬನ್ನಿ; ವಿಪಕ್ಷ ಶಾಸಕರಿಗೆ ಸ್ಪೀಕರ್ ಆಹ್ವಾನ, BJP ಕಿಡಿ!

ಸಚಿವ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಬಿಗಿಪಟ್ಟು: ವಿಧಾನಸೌಧ ಆವರಣದಲ್ಲಿ ಪ್ರತಿಭಟನೆ; ಸಿಎಂ ಡಿಕೆಶಿ ವಿರುದ್ಧ ವಾಗ್ದಾಳಿ; Video

ತಪ್ಪಾದ DPR ಸಿದ್ಧಪಡಿಸುವ ಸಲಹೆಗಾರರೇ ಹೆದ್ದಾರಿ ಅಪಘಾತಗಳು ಮತ್ತು ಸಾವುಗಳಿಗೆ 'ತಪ್ಪಿತಸ್ಥರು': ನಿತಿನ್ ಗಡ್ಕರಿ ಕಠಿಣ ಕ್ರಮದ ಎಚ್ಚರಿಕೆ!