ಸಾಂದರ್ಭಿಕ ಚಿತ್ರ 
ದೇಶ

6 ವರ್ಷಗಳಿಂದ 13 ವರ್ಷದ ಮಗಳ ಮೇಲೆ ಅಪ್ಪನಿಂದಲೇ ಅತ್ಯಾಚಾರ, ತಾಯಿಯ ಮೌನ ಸಮ್ಮತಿ

ಕಾಮುಕ ತಂದೆ ಆರು ವರ್ಷಗಳಿಂದ ತನ್ನ 13 ವರ್ಷದ ಮಗಳ ಮೇಲೆಯೇ ನಿರಂತರ ಅತ್ಯಾಚಾರ ಎಸಗಿದ್ದು, ಇದಕ್ಕೆ ತಾಯಿಯೂ ಮೌನ ಸಮ್ಮತಿ ಸೂಚಿಸಿರುವ...

ಮುಂಬೈ: ಕಾಮುಕ ತಂದೆ ಆರು ವರ್ಷಗಳಿಂದ ತನ್ನ 13 ವರ್ಷದ ಮಗಳ ಮೇಲೆಯೇ ನಿರಂತರ ಅತ್ಯಾಚಾರ ಎಸಗಿದ್ದು, ಇದಕ್ಕೆ ತಾಯಿಯೂ ಮೌನ ಸಮ್ಮತಿ ಸೂಚಿಸಿರುವ ಘಟನೆ ಮುಂಬೈಯಲ್ಲಿ ನಡೆದಿದೆ.

ಮುಂಬೈನ ಶಾಲೆಯೊಂದರಲ್ಲಿ 7ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ತಂದೆಯಿಂದ ತಾನು ನಿರಂತರ ಅತ್ಯಾಚಾರಕ್ಕೆ ಒಳಗಾಗುತ್ತಿರುವ ಘಟನೆ ಬಗ್ಗೆ ತನ್ನ ಶಾಲಾ ಶಿಕ್ಷಕರಿಗೆ ಪತ್ರ ಬರೆದು ತಿಳಿಸಿದ್ದಾಳೆ. ಅಲ್ಲದೆ ತಂದೆಯ ಈ ಹೀನ ಕೃತ್ಯವನ್ನು ತನ್ನ ತಾಯಿ ತಡೆಯದೇ ಮೌನವಾಗಿರುತ್ತಿದ್ದರು ಎಂದು ಆರೋಪಿಸಿದ್ದಾಳೆ.

'ನನ್ನ ತಂದೆ ನನ್ನ ಮೇಲೆ ಅತ್ಯಾಚಾರ ಮಾಡುತ್ತಿದ್ದು, ಇದಕ್ಕೆ ನನ್ನ ತಾಯಿಯೂ ಸಹಕರಿಸುತ್ತಿದ್ದಾರೆ. ಹಲವು ಬಾರಿ ತಾಯಿಯ ಕಣ್ಣೇದುರೇ ನನ್ನ ಮೇಲೆ ತಂದೆ ಅತ್ಯಾಚಾರ ಮಾಡಿದ್ದಾರೆ. ಅತ್ಯಾಚಾರದ ಬಳಿಕ ತಾಯಿ ಕೆಲವು ಪಿಲ್ಸ್ಗಳನ್ನು ನೀಡುತ್ತಿದ್ದರು. ನಾನು ಏಳು ವರ್ಷದವಳಿದ್ದಾಗಿಂದ ನನ್ನ ಮೇಲೇ ಅತ್ಯಾಚಾರ ನಡೆಯುತ್ತಿದೆ. ಇದನ್ನು ನನ್ನ ತಾಯಿಯ ಗಮನಕ್ಕೆ ತಂದರೂ, ಆಕೆ ನನಗೆ ಸಹಾಯ ಮಾಡಲಿಲ್ಲ' ಎಂದು ಬಾಲಕಿ ತಾನು ಬರೆದ ಪತ್ರದಲ್ಲಿ ತಿಳಿಸಿದ್ದಾಳೆ.

ಈ ಪತ್ರ ಓದಿ ಶಾಕ್ ಆದ ಶಾಲಾ ಶಿಕ್ಷಕ, ಕೂಡಲೇ ಬಾಲಕಿಯನ್ನು ಒಂದು ಸ್ಥಳೀಯ ಎನ್ಜಿಒ ಬಳಿ ಕರೆದೊಯ್ದು ನೆರವು ಕೇಳಿದ್ದಾರೆ. ಬಳಿಕ ಎನ್ಜಿಒ ಬಾಲಕಿಯ ಪೋಷಕರ ವಿರುದ್ಧ ಪ್ರಕರಣ ದಾಖಲಿಸಿದೆ.

ಪ್ರಕರಣ ದಾಖಲಿಸಿಕೊಂಡಿರುವ ವಶಿ ಪೊಲೀಸರು ಹಣ್ಣಿನ ವ್ಯಾಪಾರಿಯಾಗಿರುವ 45 ವರ್ಷದ ಕಾಮುಕ ತಂದೆಯನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

'ಮನೆಯಲ್ಲಿ ನನ್ನ ಸಹೋದರರು ಇಲ್ಲದ ಸಮಯದಲ್ಲಿ ತಾಯಿಯ ಎದುರಲ್ಲೇ ತಂದೆ ನನ್ನ ಮೇಲೆ ಅತ್ಯಾಚಾರ ಎಸಗುತ್ತಿದ್ದರು. ಹಲವು ಬಾರಿ ನಾನು ತಾಯಿಯ ಬಳಿ ನನ್ನ ಅಳಲನ್ನು ಹೇಳಿಕೊಂಡಿದ್ದೇನೆ. ಆದರೆ ಅವರು ಯಾವತ್ತು ಸಹಾಯ ಮಾಡಿಲ್ಲ' ಎಂದು ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ.

ಇನ್ನು ಈ ಸಂಬಂಧ ಪೊಲೀಸರು ತಾಯಿಯನ್ನು ವಿಚಾರಣೆಗೆ ಒಳಪಡಿಸಿದ್ದು, ವಿಚಾರಣೆ ವೇಳೆ ತಂದೆ ವಿರುದ್ಧದ ಅತ್ಯಾಚಾರ ಆರೋಪವನ್ನು ತಳ್ಳಿಹಾಕಿರುವ ಮಹಾತಾಯಿ, ಕೇವಲ 15 ದಿನಗಳ ಹಿಂದಷ್ಟೇ ಅತ್ಯಾಚಾರದ ಬಗ್ಗೆ ತನ್ನ ಗಮನಕ್ಕೆ ಬಂದಿದೆ. ಬಳಿಕ ಆಕೆಯಿಂದ ದೂರವಿರುವಂತೆ ತನ್ನ ಗಂಡನಿಗೆ ಬುದ್ಧಿಹೇಳಿರುವುದಾಗಿ ತಿಳಿಸಿದ್ದಾಳೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT