ಮಗನ ಎದುರೇ ತಾಯಿಯ ರುಂಡ ಕತ್ತರಿಸಿದ ತಂದೆ (ಸಾಂದರ್ಭಿಕ ಚಿತ್ರ) 
ದೇಶ

ಮಗನ ಎದುರೇ ತಾಯಿಯ ರುಂಡ ಕತ್ತರಿಸಿದ ತಂದೆ

ಅಕ್ರಮ ಸಂಬಂಧ ಹೊಂದಿದ್ದಾಳೆಂಬ ಶಂಕೆಯಿಂದ ಆಟವಾಡಿಕೊಂಡಿದ್ದ ಮಗನ ಎದುರೇ ತಾಯಿಯ ರುಂಡ ಕತ್ತರಿಸಿದ ವಿಕೃತ ಘಟನೆಯೊಂದು ಮದುರೈನ ಕಲ್ಲಿಕುಡಿ ಪ್ರದೇಶದಲ್ಲಿ ಮಂಗಳವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ...

ಮದುರೈ: ಅಕ್ರಮ ಸಂಬಂಧ ಹೊಂದಿದ್ದಾಳೆಂಬ ಶಂಕೆಯಿಂದ ಆಟವಾಡಿಕೊಂಡಿದ್ದ ಮಗನ ಎದುರೇ ತಾಯಿಯ ರುಂಡ ಕತ್ತರಿಸಿದ ವಿಕೃತ ಘಟನೆಯೊಂದು ಮದುರೈನ ಕಲ್ಲಿಕುಡಿ ಪ್ರದೇಶದಲ್ಲಿ ಮಂಗಳವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಸೀಲೈಕಾರಿ(37), ಪೆರಿಸ್ವಾಮಿ (42) ಎಂಬ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು ಹಾಗೂ ನಾಗೇಂದ್ರನ್ (10) ಎಂಬ ಒಬ್ಬ ಗಂಡಮಗನಿದ್ದು, ದಿನಗೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಪತ್ನಿ ನೆರೆಮನೆಯಾತನೊಂದಿಗೆ ಸಂಬಂಧ ಹೊಂದಿದ್ದಾಳೆಂಬ ಶಂಕೆ ಪೆರಿಸ್ವಾಮಿಗೆ ಬಂದಿದೆ. ಹೀಗಾಗಿ ಹಲವು ಬಾರಿ ಪತ್ನಿಗೆ ಎಚ್ಚರಿಕೆ ನೀಡಿದ್ದಾನೆ. ಆದರೂ ಸೀಲೈಕಾರಿ ಅಕ್ರಮ ಸಂಬಂಧ ಮುಂದುವರೆಸುತ್ತಿದ್ದಾಳೆಂಬ ಶಂಕೆಯಿಂದಾಗಿ ಪೆರಿಸ್ವಾಮಿ ಈ ಹತ್ಯೆ ಮಾಡಿದ್ದಾನೆಂದು ಹೇಳಲಾಗುತ್ತಿದೆ.

ನಾಗೇಂದ್ರನ್ (10) ಬಾಲಕ ಸ್ಥಳೀಯ ಶಾಲೆಯೊಂದರಲ್ಲಿ 5ನೇ ತರಗತಿ ಓದುತ್ತಿದ್ದು, ಜು.21 ರಂದು ಕಾರಣನಾಂತರಗಳಿಂದ ಶಾಲೆಗೆ ಹೋಗದೆ ತಾಯಿಯೊಂದಿಗೆ ಹಸು ಮೇಯಿಸಲು ಹೋಗಿದ್ದಾನೆ. ಸಂಜೆ 4ರ ಹೊತ್ತಿಗೆ ತಾಯಿ ಸೀಲೈಕಾರಿ ಹಾಗೂ ಮಗ ನಾಗೇಂದ್ರನ್ ಇಬ್ಬರೂ ಮನೆಗೆ ಬಂದಿದ್ದಾರೆ. ನಂತರ ವಿಶ್ರಾಂತಿ ಪಡೆಯಲೆಂದು ಸೀಲೈಕಾರಿ ಮಲಗಿಕೊಂಡಿದ್ದಾಳೆ. ಈ ವೇಳೆ ಇದ್ದಕ್ಕಿದ್ದಂತೆ ಕೆಂಡಾಮಂಡಲದ ಸ್ಥಿತಿಯಲ್ಲಿ ಬಂದ ಪೆರಿಸ್ವಾಮಿ ಇದ್ದಕ್ಕಿದ್ದಂತೆ ಪತ್ನಿಗೆ ಹೊಡೆಯಲು ಪ್ರಾರಂಭಿಸಿದ್ದಾರೆ. ಆಟವಾಡಿಕೊಂಡಿದ್ದ ನಾಗೇಂದ್ರನ್ ತಾಯಿಗೆ ಹೊಡೆಯುತ್ತಿದ್ದ ತಂದೆಯನ್ನು ಕಂಡು ಮಧ್ಯೆ ಪ್ರವೇಶಿಸಿದ್ದಾನಾದರೂ ಕೋಪದಲ್ಲಿದ್ದ ಪೆರಿಸ್ವಾಮಿ ಮಗನಿಗೂ ಹೊಡೆದು ಮಧ್ಯೆ ಪ್ರವೇಶ ಮಾಡದಂತೆ ಎಚ್ಚರಿಕೆ ನೀಡಿದ್ದಾನೆ.

ತಂದೆಯ ರೌದ್ರಾತಾರವನ್ನು ಕಂಡ ನಾಗೇಂದ್ರನ್ ಗೆ ಭಯಭೀತನಾಗಿದ್ದಾನೆ. ನಂತರ ಮಾರಾಕಾಸ್ತ್ರಗಳನ್ನು ತೆಗೆದುಕೊಂಡ ಪೆರಿಸ್ವಾಮಿ ಸೀಲೈಕಾರಿ ಅವರ ತಲೆ ಕತ್ತರಿಸಿದ್ದಾನೆಂದು ನಾಗೇಂದ್ರನ್ ಪೊಲೀಸರಿಗೆ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪೆರಿಸ್ವಾಮಿಯನ್ನು ಬಂಧನಕ್ಕೊಳಪಡಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ತನ್ನ ಎದುರೇ ತಾಯಿಯನ್ನು ಹತ್ಯೆ ಮಾಡಿದ ತಂದೆಯನ್ನು ಕಂಡ ಮಗ ನಾಗೇಂದ್ರನ್ ಇದೀಗ ಆಘಾತಕ್ಕೊಳಗಾಗಿದ್ದು, ಮಾನಸಿಕ ಅಸ್ವಸ್ಥನಾಗಿದ್ದಾನೆ ಎಂದು ತಿಳಿದುಬಂದಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT