ಮಾತ್ರೆ(ಸಂಗ್ರಹ ಚಿತ್ರ) 
ದೇಶ

ಇನ್ನು ಮಾರುಕಟ್ಟೆಗೆ ಬರಲಿವೆ ವೆಜ್, ನಾನ್‍ವೆಜ್ ಮಾತ್ರೆಗಳು?

ನೀವು ಮಾತ್ರೆ ತೆಗೆದುಕೊಳ್ಳಲು ಔಷಧ ಅಂಗಡಿಗೆ ಹೋಗುತ್ತೀರಿ. ಆಗ ಔಷಧ ಅಂಗಡಿಯವನು ಔಷಧ ನೀಡುವ ಮೊದಲು ನೀವು ಸಸ್ಯಾಹಾರಿಯೋ...

ನವದೆಹಲಿ: ನೀವು ಮಾತ್ರೆ ತೆಗೆದುಕೊಳ್ಳಲು ಔಷಧ ಅಂಗಡಿಗೆ ಹೋಗುತ್ತೀರಿ. ಆಗ ಔಷಧ ಅಂಗಡಿಯವನು ಔಷಧ ನೀಡುವ ಮೊದಲು ನೀವು ಸಸ್ಯಾಹಾರಿಯೋ, ಮಾಂಸಾಹಾರಿಯೋ ಎನ್ನುವ ಪ್ರಶ್ನೆ ಕೇಳುವ ದಿನ ದೂರವಿಲ್ಲ!

ಯಾಕೆಂದರೆ ಅನೇಕ ಕ್ಯಾಪ್ಸೂಲ್‍ಗಳ ಹೊರಕವಚಕ್ಕೆ ಪ್ರಾಣಿಜನ್ಯ ವಸ್ತುಗಳನ್ನು ಬಳಸಲಾಗುತ್ತದೆ. ಇದು ಅನೇಕ ಸಸ್ಯಾಹಾರಿಗಳಿಗೆ ಇರಸು ಮುರುಸಿಗೆ ಕಾರಣವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಔಷಧ ನಿಯಂತ್ರಣ ಮಹಾನಿರ್ದೇಶ ನಾಲಯ(ಡಿಸಿಜಿಐ)ಗೆ ಸಲಹೆ ನೀಡುವ ವೈಜ್ಞಾನಿಕ ಸಮಿತಿಯು ಕ್ಯಾಪ್ಸೂಲ್‍ಗಳ ಹೊರಕವಚವನ್ನು ಸಸ್ಯಜನ್ಯ ವಸ್ತು  (ಸೆಲ್ಯುಲೋಸ್)ಗಳಿಂದಲೂ ಉತ್ಪಾದಿಸುವ ವಿಚಾರವನ್ನು ಶನಿವಾರ ಚರ್ಚೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.

ಕಳೆದ ತಿಂಗಳು ಬಿಐಎಸ್  (ಬ್ಯೂರೋ ಆಫ್ ಇಂಡಿಯನ್  ಸ್ಟ್ಯಾಂಡರ್ಡ್) ಕ್ಯಾಪ್ಸೂಲ್‍ಗಳ ಹೊರ  ಕವಚಕ್ಕೆ ಗ್ಯಾಲೆತಿನ್(ಪ್ರಾಣಿ ಜನ್ಯ ವಸ್ತುಗಳಿಂದ ನಿರ್ಮಿತ ಕ್ಯಾಪ್ಸೂಲ್‍ಗಳ ಹೊರ ಕವಚ)ಗೆ ಪರ್ಯಾ ಯವಾಗಿ ಸಸ್ಯಜನ್ಯ  ಉತ್ಪನ್ನಗಳಿಂದ ರಚಿಸಿದ ಕವಚಗಳನ್ನೂ ಬಳಸುವಂತೆ ಸೂಚಿಸಿದೆ. ಜತೆಗೆ,  ರೋಗಿಯ ಆಯ್ಕೆಯೂ ಡೋಸೇಜ್ ಫಾರ್ಮ್ ನಲ್ಲಿ ನೀಡುವಂತೆ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT